ಜನಸ್ಪಂದನ ಸಭೆಯಲ್ಲಿ ಅಕ್ರಮ ಮರಳು ಸಾಗಾಟ ಸದ್ದು


Team Udayavani, Dec 23, 2019, 6:15 PM IST

23-December-24

ಚಿಂಚೋಳಿ: ಪೋತಂಗಲ್‌ ಮುಲ್ಲಾಮಾರಿ ಕಾಗಿಣಾ ನದಿಯಿಂದ ರಾತ್ರೋರಾತ್ರಿ 40 ಟನ್‌ ಗಿಂತ ಹೆಚ್ಚು ಅಕ್ರಮ ಮರಳನ್ನು ಲಾರಿ ಮತ್ತು ಟಿಪ್ಪರ್‌ ಮೂಲಕ ಸಾಗಿಸಲಾಗುತ್ತಿದೆ ಎಂದು ಸೇಡಂನ ಕಾಂಗ್ರೆಸ್‌ ಮುಖಂಡ ಮುಕ್ರುಂಖಾನ್‌ ಆಪಾದಿಸಿದರು.

ತಾಲೂಕಿನ ಭಂಟನಳ್ಳಿ ಗ್ರಾಮದಲ್ಲಿ ತಾ.ಪಂ ಅಧಿಕಾರಿಗಳಾದ ಅನೀಲಕುಮಾರ ರಾಠೊಡ, ಮಾಣಿಕಪ್ಪ ಧತ್ತರಗಿ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.

ಬಡವರ ಹೆಸರಿಗೆ ಮಂಜೂರಿ ಆಗಿರುವ ಮನೆಗಳನ್ನು ಕಟ್ಟಿಕೊಳ್ಳಲು ಉಸುಕು ಸಿಗುತ್ತಿಲ್ಲ. ಆದರೆ ಅಕ್ರಮ ಮರಳು ಸಾಗಾಟ ಮಾತ್ರ ನಿರಾತಂಕವಾಗಿ ಸಾಗುತ್ತಿದೆ. ಇದಕ್ಕಾಗಿ ಕಂದಾಯ ಇಲಾಖೆ, ಸುಲೇಪೇಟ ಠಾಣೆ ಪೊಲೀಸರು ಮಾಮೂಲಿ ಪಡೆಯುತ್ತಿದ್ದಾರೆ ಎಂದು ದೂರಿದರು.

ಪೋತಂಗಲ್‌, ಹಲಕೋಡಾ, ಜಟ್ಟೂರ ಗ್ರಾಮದ ಬಳಿ ಹರಿಯುವ ಮುಲ್ಲಾಮಾರಿ ಕಾಗಿಣಾ ನದಿಯಲ್ಲಿ ರಾಯಲ್ಟಿ ಇಲ್ಲದೇ ಜೆಸಿಬಿ ಯಂತ್ರ ಬಳಸಿ ಕೆಂಪು ಉಸುಕನ್ನು ದಿನನಿತ್ಯ ನೂರಾರು ಟಿಪ್ಪರದಲ್ಲಿ ತುಂಬಿ ಸಾಗಾಟ ಮಾಡಲಾಗುತ್ತಿದೆ. ಆದರೆ ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಹಲಕೋಡಾ ಗ್ರಾಮದಲ್ಲಿ ಬಿಜೆಪಿ
ಕಾರ್ಯಕರ್ತರೇ ಎದುರು ನಿಂತು ಟಿಪ್ಪರ್‌ ತುಂಬಿಸಿ ಕಳುಹಿಸುತ್ತಾರೆ. ಇಂತಹ ದಂಧೆ ಹಗಲು, ರಾತ್ರಿ ನಡೆಯುತ್ತಿದೆ. ಇದಕ್ಕೆ ಕಡಿವಾಣವೇ ಇಲ್ಲವೇ ಎಂದಾಗ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅ ಧಿಕಾರಿಗಳಾದ ವಿರೇಶ, ರಿಯಾಜ ಮಾತನಾಡಿ, ಕೆಆರ್‌ಡಿಸಿಎಲ್‌ ನಿಗಮಕ್ಕೆ ಮತ್ತು ಗುತ್ತಿಗೆದಾರರೊಬ್ಬರಿಗೆ ಲೀಜ್‌
ಮೇಲೆ ನೀಡಲಾಗಿದೆ. ಆದರೆ ಅವರು ಮಾರಾಟ ಮಾಡುವ ವಿಷಯ ಜಿಲ್ಲಾ ನಿರ್ದೇಶಕಿ ಸತ್ಯಭಾಮಾಗೆ ಗೊತ್ತಿದೆ. ನಮಗೇನು ಗೊತ್ತಿಲ್ಲ
ಎಂದು ಉತ್ತರಿಸಿದ್ದಾರೆ. ಆದ್ದರಿಂದ ಇಂತಹ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು ಒತ್ತಾಯಿಸಿದರು.

ಬೆನಕನಳ್ಳಿ ಗ್ರಾಮದಲ್ಲಿ ಎರಡು ಟ್ಯಾಂಕ್‌ ನಿರ್ಮಿಸಲಾಗಿದೆ. ಆದರೆ ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಸಿಮೆಂಟ್‌ ರಸ್ತೆಗಳಿಲ್ಲ, ಚರಂಡಿ ಇಲ್ಲ. ಗ್ರಾಮಸ್ಥರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳನ್ನು ಕೇಳಿದರೆ ಹೆದರಿಸುತ್ತಾರೆ. ಜನಸ್ಪಂದನ ಸಭೆ ಇದೆ ಎಂದು ನಾನು ಹುಬ್ಬಳ್ಳಿಯಿಂದ ಇಲ್ಲಿಗೆ ಬಂದಿದ್ದೇನೆ. ನಮ್ಮ ಗ್ರಾಮ ಅಭಿವೃದ್ದಿ ಆಗವುದು ಯಾವಾಗ ಎಂದು ಮಲ್ಲಿಕಾರ್ಜುನ ರಾಯಪ್ಪಗೌಡ ಪ್ರಶ್ನಿಸಿದರು.

ಗ್ರಾಮಕ್ಕೆ ಶಾಲಾ ಕಟ್ಟಡ ಮಂಜೂರಿ ಆಗಿದೆ. ಆದರೆ ಸ್ಥಳ ಅಭಾವದಿಂದ ಕಟ್ಟಲು ಆಗುತ್ತಿಲ್ಲ. ಸರ್ಕಾರವೇ ಜಮೀನು ಖರೀದಿಸಿ, ಶಾಲೆ ಕೋಣೆ ಕಟ್ಟಬೇಕು ಎಂದು ಪರಮೇಶ್ವರ ಗುತ್ತೇದಾರ ಶಿಕ್ಷಣ ಅ ಧಿಕಾರಿಗಳಿಗೆ ತಿಳಿಸಿದರು.

ತಾಲೂಕಿನಲ್ಲಿ 36 ಗ್ರಾ.ಪಂಗಳಿವೆ. ಆದರೆ ಕೇವಲ 18 ಪಿಡಿಒ ಇದ್ದಾರೆ. ಒಬ್ಬರಿಗೆ ಎರಡ್ಮೂರು ಗ್ರಾ.ಪಂಗೆ ನಿಯೋಜಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೈತರು ತಮ್ಮ ಹೊಲಗಳಲ್ಲಿ ಬದು ನಿರ್ಮಿಸಿಕೊಳ್ಳಬಹುದಾಗಿದೆ ಎಂದು ತಾ.ಪಂ ಅಧಿ ಕಾರಿ ಅನೀಲಕುಮಾರ ರಾಠೊಡ ತಿಳಿಸಿದರು.

ಬೆನಕನಳ್ಳಿ ಗ್ರಾಮದ ಜನರ ಎಲ್ಲ ಉದ್ಯೋಗ ಖಾತ್ರಿ ಕಾರ್ಡುಗಳು ಕೆರೋಳಿ ಗ್ರಾ.ಪಂ ಅಧ್ಯಕ್ಷರ ಬಳಿ ಇವೆ. ಈ ಕುರಿತು ಯಾರಿಗೂ ಮಾಹಿತಿ ಸಿಗುತ್ತಿಲ್ಲ ಎಂದು ರಾಘವೇಂದ್ರ ಗುತ್ತೇದಾರ ಹೇಳಿದರು.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಆಗುತ್ತಿದೆ ಕುಡುಕರ ಹಾವಳಿ ಹೆಚ್ಚಾಗಿದ್ದು, ಚಹಾ, ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಆಗುತ್ತಿದೆ ಎಂದು ಮಹಿಳೆಯರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಎಇಇ ಹಣಮಂತಪ್ಪ ಪೂಜಾರಿ, ವೈದ್ಯರಾದ ಡಾ|ಜಗದೀಶಚಂದ್ರ ಬುಳ್ಳ, ಮಲ್ಲಿಕಾರ್ಜುನ ಜಾಪಟ್ಟಿ, ಎಇಇ ಪರಮೇಶ್ವರ ಬಿರಾದಾರ, ಕಾಸಿಮ ಪಟೇಲ, ಎಇಇ ಬಸವರಾಜ ನೇಕಾರ, ಎಇಇ ಮಹ್ಮದ ಅಹೆಮದ್‌ ಹುಸೇನ್‌, ತೋಟಗಾರಿಕೆ ಅ ಧಿಕಾರಿ ಅಜೀಮುದ್ದೀನ್‌, ಬಿಸಿಯೂಟ ಅಧಿಕಾರಿ ಕಿಶೋರ ಕುಲಕರ್ಣಿ, ಬಿಸಿಎಂ ಅಧಿ ಕಾರಿ ಶರಣಬಸಪ್ಪ ಪಾಟೀಲ, ಶಾಂತವೀರಯ್ಯ ಮಠಪತಿ, ಸಿಡಿಪಿಒ ಪರಿಮಳ, ತಾ.ಪಂ ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಕುಪನೂರ ಗ್ರಾ.ಪಂ ಅಧ್ಯಕ್ಷೆ ಸತ್ಯಮ್ಮ ಇನ್ನಿತರರಿದ್ದರು. ಪಿಡಿಒ ಬಸವರಾಜ ಸ್ವಾಗತಿಸಿದರು, ಕಂದಾಯ ನಿರೀಕ್ಷಕ ಸುಭಾಶಚಂದ್ರ ವಂದಿಸಿದರು.

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

1-ewewqewq

Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.