ಕೋವಿಡ್ ವೈರಸ್ ಜಾಗೃತಿ ಸಭೆ
Team Udayavani, Apr 10, 2020, 5:20 PM IST
ಮೊಳಕಾಲ್ಮೂರು: ಜಾಗೃತಿ ಸಭೆಯಲ್ಲಿ ಎಸ್ಪಿ ಜಿ.ರಾಧಿಕಾ ಮಾತನಾಡಿದರು.
ಮೊಳಕಾಲ್ಮೂರು: ಜಗತ್ತಿಗೆ ಮಾರಕವಾಗಿರುವ ಕೋವಿಡ್ ವೈರಸ್ ಅನ್ನು ನಿರ್ಮೂಲನೆ ಮಾಡಲು ಮನೆಯಿಂದ ಹೊರಗಡೆ ಬಾರದೆ ಸಾಮಾಜಿಕ ಅಂತರ ಕಾಯ್ದುಕೊಂಡು ಹೆಚ್ಚಿನ ಭದ್ರತೆಗೆ ಸಹಕಾರ ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು.
ಪಟ್ಟಣದ ಗಡಿಭಾಗದಲ್ಲಿರುವ ಎದ್ದುಲ ಬೊಮ್ಮಯ್ಯನಹಟ್ಟಿಯ ಚೆಕ್ಪೋಸ್ಟ್ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ವೈರಸ್ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಕೋವಿಡ್ ವೈರಸ್ ಪಕ್ಕದ ಆಂಧ್ರದ ಕಲ್ಯಾಣದುರ್ಗದಲ್ಲಿ 4 ಜನರಲ್ಲಿ ಪಾಜಿಟಿವ್ ಬಂದಿದ್ದು, ಇವರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಗಡಿ ಭಾಗ ಆಗಿರುವುದರಿಂದ ತುಂಬಾ ಎಚ್ಚರಿಕೆ ಅಗತ್ಯವಾಗಿದೆ ಎಂದರು.
ತಾಲೂಕಿನ ರಾಂಪುರ ಭಾಗದ ಗಡಿ ಭಾಗದ ಚೆಕ್ಪೋಸ್ಟ್ ಗಳಿಗೆ ಭೆಟಿ ನೀಡಿ ಪರಿಶೀಲಿಸಲಾಯಿತು. ಡಿವೈಎಸ್ಪಿ ಎಸ್.ರೋಷನ್ ಜಮೀರ್, ತಹಶೀಲ್ದಾರ್ ಎಂ.ಬಸವರಾಜ್, ಸಿಪಿಐ ಗೋಪಾಲ್ ನಾಯ್ಕ, ಪಿಎಸ್ಐ ಬಸವರಾಜ್, ಪ.ಪಂ ಸದಸ್ಯ ಮಂಜುನಾಥ, ಮುಖ್ಯಾಧಿಕಾರಿ ಎಚ್.ಕಾಂತರಾಜ್ ಇತರರಿದ್ದರು.