ದೇಶದಲ್ಲಿನ್ನೂ ಅಸ್ಪೃಶ್ಯತೆ ಜೀವಂತ


Team Udayavani, Feb 17, 2019, 11:15 AM IST

cta-1.jpg

ಚಿತ್ರದುರ್ಗ: ಬಸವಣ್ಣನವರ ಆಗಮನಕ್ಕೂ ಮುನ್ನ ಕುಂಚಿಟಿಗರು, ಲಿಂಗಾಯಿತ, ವೀರಶೈವರು ಅಸ್ಪೃಶ್ಯರು, ಶೂದ್ರರು, ದಲಿತರೇ ಆಗಿದ್ದರು ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು. ಇಲ್ಲಿನ ತರಳಬಾಳು ನಗರದ ಜೆಎಂಐಟಿ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಕುಂಚಿಟಿಗ ವೀರಶೈವ ಸಮಾಜದ ವಿದ್ಯಾರ್ಥಿನಿಲಯದ ಮಳಿಗೆಗಳನ್ನು ಶನಿವಾರ ಉದ್ಘಾಟಿಸಿ ಶರಣರು ಆಶೀರ್ವಚನ ನೀಡಿದರು.

ವರ್ಣಾಶ್ರಮದಲ್ಲಿ ನಾಲ್ಕು ವರ್ಣಗಳಿದ್ದವು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ವರ್ಣಗಳಿಗೆ ಎಲ್ಲ ರೀತಿಯ ಸ್ವಾತಂತ್ರ್ಯ ಇತ್ತು. ಆದರೆ ಶೂದ್ರ ಸಮುದಾಯಗಳಿಗೆ, ಅಲಕ್ಷಿತರಿಗೆ, ದಲಿತರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ಇರಲಿಲ್ಲ. ಬದಲಾಗಿ ಈ ಮೂರು ವರ್ಣಗಳ ಸೇವೆಯನ್ನು ಶೂದ್ರರು ಮಾಡಬೇಕಿತ್ತು. 

ಈ ರೀತಿಯ ತಾರತಮ್ಯದ ವಿರುದ್ಧ ಸಿಡಿದೆದ್ದ ಬಸವಣ್ಣನವರು ತಾವು ಬ್ರಾಹ್ಮಣರಾಗಿದ್ದರೂ ಅವಕಾಶ ವಂಚಿತ, ಅಲಕ್ಷಿತ, ದಲಿತ, ಶೂದ್ರ ಸಮುದಾಯಗಳಿಗೆ ಬಸವ ಧರ್ಮದ ಮೂಲಕ ಸ್ವಾತಂತ್ರ್ಯ ನೀಡಿದರು. ನಂತರ ಲಿಂಗವಂತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತಂದರು ಎಂದರು.

ಜಗತ್ತಿಗೆ ಬಸವಣ್ಣನವರನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಬ್ರಾಹ್ಮಣ ಸಮಾಜಕ್ಕೆ ಸಲ್ಲಬೇಕು. ಬಸವಣ್ಣನವರು ಬ್ರಾಹ್ಮಣರಾಗಿದ್ದರೂ ಶೂದ್ರರ ದುಃಖ, ನೋವು, ಸಂಕಷ್ಟ ಅರಿತಿದ್ದರು. ಹಾಗಾಗಿ ಅಂತಹ ಸಮುದಾಯಗಳ ಶಕ್ತಿಯಾಗಿ ನಿಂತು ಕೆಲಸ ಮಾಡಿದರು ಎಂದು ಸ್ಮರಿಸಿದರು.

ದೇಶದಲ್ಲಿ ಇಂದಿಗೂ ಎರಡು ವಿಧವಾದ ಭಾರತ ಇದೆ. ಒಂದು ಸ್ಪೃಶ್ಯ ಭಾರತ. ಈ ಸ್ಪೃಶ್ಯ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಮತ್ತೂಂದು ಅಸ್ಪೃಶ್ಯ ಭಾರತ. ಈ ಭಾರತಕ್ಕೆ ಇಂದಿಗೂ ಸ್ವಾತಂತ್ರ್ಯವೇ ಸಿಕ್ಕಿಲ್ಲ. ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ಇಂತಹ ಸಮಾಜಕ್ಕೆ ಬಸವಣ್ಣನವರು ಸ್ವಾಭಿಮಾನದಿಂದ ಬದುಕುವ ಮಾರ್ಗ ತೋರಿದರು ಎಂದರು.

ಎಲ್ಲ ದಾನಕ್ಕಿಂತ ಸ್ಥಳ ದಾನ ಶ್ರೇಷ್ಠವಾದುದು. ಸುಮಾರು 2 ಕೋಟಿ ರೂ. ಮೌಲ್ಯದ ನಿವೇಶನವನ್ನು ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್‌ .ಪರಮೇಶ್ವರಪ್ಪ ಸಮುದಾಯಕ್ಕೆ ಉಚಿತವಾಗಿ ನೀಡಿದ್ದರಿಂದ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 
ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಸರ್ಕಾರ ಇಂದು ಎಲ್ಲ ಜಾತಿಗಳಿಗೂ ಹಾಸ್ಟೆಲ್‌ ಸೌಲಭ್ಯ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಗಿಂತ ಮುಖ್ಯವಾಗಿ ಆರ್ಥಿಕ ಶಕ್ತಿ ನೀಡಬೇಕು. ಕುಂಚಿಟಿಗ ಲಿಂಗಾಯತ ಸಮುದಾಯದ ಮಕ್ಕಳ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಶಿಷ್ಯ ವೇತನ ನೀಡಬೇಕು. ಈ ಕೆಲಸ ಆಗಬೇಕಾದರೆ ಸಂಘಕ್ಕೆ ಆದಾಯ ಬರುವಂತಿರಬೇಕು. ಆಗ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಲು ಸಾಧ್ಯ ಎಂದರು.

ಕುಂಚಿಟಿಗ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಎಲ್‌.ಬಿ. ರಾಜಶೇಖರ್‌ ಮಾತನಾಡಿ, 2 ಕೋಟಿ ರೂ. ಬೆಲೆ ಬಾಳುವ ನಿವೇಶನ ಉಚಿತವಾಗಿ ಸಿಕ್ಕಿದ ಕೂಡಲೇ ಮುರುಘಾಮಠದ ಶರಣರು ಐದು ಲಕ್ಷ ರೂ. ದೇಣಿಗೆ ನೀಡಿದರು. ಉಳಿದಂತೆ ಸಮುದಾಯದವರು 36 ಲಕ್ಷ ರೂ. ನೀಡಿದ್ದರಿಂದ ವಾಣಿಜ್ಯ ಮಳಿಗೆಗಳು ಪೂರ್ಣಗೊಂಡಿವೆ.

ಸಮಾಜದಲ್ಲಿ 48 ಕುಲಗಳಿದ್ದು ಇದರ ಜ್ಞಾಪಕಾರ್ಥವಾಗಿ 48 ಕೊಠಡಿ ನಿರ್ಮಾಣದ ಜೊತೆಗೆ ಸಮುದಾಯ ಭವನ ಸೇರಿದಂತೆ ಒಟ್ಟು 4.50 ಕೋಟಿ ರೂ.ಗಳ ವೆಚ್ಚದ ಕಟ್ಟಡವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. 

ಮಾಜಿ ಶಾಸಕ ಎಂ.ಬಿ. ತಿಪ್ಪೇರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಪಿ. ರಮೇಶ್‌, ಟಿ.ಎಚ್‌. ಬಸವರಾಜು, ಅರಸಿಕೆರೆ ಮಾಜಿ ಶಾಸಕ ಪರಮೇಶ್ವರಪ್ಪ ಮತ್ತಿತರರು ಮಾತನಾಡಿದರು. ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಜಿಪಂ ಸದಸ್ಯೆ ಚೇತನಾ ಪ್ರಸಾದ್‌, ನಿವೃತ್ತ ಇಂಜಿನಿಯರ್‌
ಕೃಷ್ಣಮೂರ್ತಿ ಇತರರು ಇದ್ದರು. 

ಬಸವಣ್ಣನವರು ಬಂದ ನಂತರ ಲಿಂಗಾಯತ ಧರ್ಮಕ್ಕೆ ಗಟ್ಟಿ ನೆಲೆಯನ್ನು ಒದಗಿಸಿದರು. ಕುಂಚಿಟಿಗ ಸಮುದಾಯದವರು 200-300 ವರ್ಷಗಳಿಂದ ಈಚೆಗೆ ಲಿಂಗಾಯತ ಧರ್ಮದ ಪಾಲಕರಾಗಿದ್ದಾರೆ. ಆರಂಭದಲ್ಲಿ ಕುಂಚಿಟಿಗರಿಗೆ ರುದ್ರಾಕ್ಷಿ, ನಂತರ ಇಷ್ಟಲಿಂಗ ದಿಧೀಕ್ಷೆ ನೀಡಲಾಯಿತು. ಈ ರೀತಿಯ ಅಲಕ್ಷಿತ ಕುಲದ 18 ಜಾತಿಗಳಿಗೆ ಮುರುಘಾ ಮಠ ಆಸರೆಯಾಗಿ ನಿಂತಿದೆ. ಆಯಾ ಸಮುದಾಯಗಳಿಗೆ ನಿವೇಶನ ನೀಡಿ ಸಂಸ್ಕಾರ ಬೆಳೆಸಿದೆ. 
ಡಾ| ಶಿವಮೂರ್ತಿ ಮುರುಘಾ ಶರಣರು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.