1ಎಕ್ರೆಯಲ್ಲಿ ತಲೆ ಎತ್ತಲಿದೆ ಉದ್ಯಾನ; ಸಾಮೆತ್ತಡ್ಕವಿನ್ನು ಸ್ಮಾರ್ಟ್‌


Team Udayavani, Sep 19, 2017, 1:58 PM IST

1-ptr-1.jpg

ನಗರ : ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಮೂರು ಪಾರ್ಕ್‌ಗಳಿದ್ದು, ಹೊಸದೊಂದು ಸೇರ್ಪಡೆ ಆಗಲಿದೆ. ಸಾಮೆತ್ತಡ್ಕ ಜಂಕ್ಷನ್‌ನಲ್ಲಿ ಸುಮಾರು 1 ಎಕ್ರೆ ವಿಸ್ತಾರದಲ್ಲಿ ಈ ಪಾರ್ಕ್‌ ತಲೆ ಎತ್ತಲಿದೆ.

ನಗರ ಬಸ್‌ ನಿಲ್ದಾಣದಿಂದ ಕೇವಲ ಎರಡು ಕಿ.ಮೀ. ದೂರದಲ್ಲಿದೆ ಸಾಮೆತ್ತಡ್ಕ. ಪುತ್ತೂರು ಪೇಟೆಗೆ ತಾಗಿಕೊಂಡೇ ಇದ್ದರೂ, ಅಷ್ಟೇನೂ ದೊಡ್ಡ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಹಾಗೆಂದು ಅತಿ ಹೆಚ್ಚು ಮನೆಗಳಿರುವ ಸ್ಥಳವಿದು. ಈ ನಿಟ್ಟಿನಲ್ಲಿ ಪಾರ್ಕ್‌ ನಿರ್ಮಿಸುವುದು ಹೆಚ್ಚು ಸೂಕ್ತ ಎನ್ನುವ ಧೋರಣೆಯಲ್ಲಿದೆ ನಗರಸಭೆ.

ಮೂಲತಃ ಇದು ಕರ್ನಾಟಕ ಹೌಸಿಂಗ್‌ ಬೋರ್ಡ್‌ಗೆ (ಕೆಎಚ್‌ಬಿ) ಸೇರಿದ ಜಾಗ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿವೇಶನ ನೀಡಿ, ಇನ್ನೊಂದಷ್ಟು ಜಾಗವನ್ನು  ಇತರ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದೆ. ಉಳಿದ ಸುಮಾರು 1 ಎಕ್ರೆ ಜಾಗವನ್ನು ಪಾರ್ಕ್‌ ನಿರ್ಮಾಣಕ್ಕೆಂದು ಮೀಸಲಿರಿಸಿತ್ತು. ಬಳಿಕ ಇದನ್ನು ನಗರಸಭೆಗೆ ಹಸ್ತಾಂತರಿಸಿದ್ದು, ಇದೀಗ ನಗರಸಭೆ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದೆ. ನಗರೋತ್ಥಾನದ 3ನೇ ಹಂತದಡಿ 1 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಇದರಲ್ಲಿ ಕಿಲ್ಲೆ ಮೈದಾನ ಅಭಿವೃದ್ಧಿ ಪಡಿಸಿ, ಉಳಿಕೆ ಹಣವನ್ನು ಸಾಮೆತ್ತಡ್ಕ ಪಾರ್ಕ್‌ಗೆ ವಿನಿಯೋಗಿಸಲಾಗುವುದು.

ಇತ್ತೀಚೆಗಷ್ಟೇ ಮಳೆನೀರಿನ ಜತೆ ಕೊಚ್ಚಿಕೊಂಡು ಹೋದ ಮಣ್ಣು ಪಕ್ಕದ ಮನೆಗಳಿಗೆ ನುಗ್ಗಿ ರಾದ್ಧಾಂತ ಸೃಷ್ಟಿಯಾಗಿತ್ತು. ಇದರಿಂದಾಗಿ ಮೊದಲಿಗೆ ಚರಂಡಿ ವ್ಯವಸ್ಥೆ ಸರಿಪಡಿಸಲು ತೀರ್ಮಾನಿಸಲಾಗಿದೆ. ತಡೆ ಬೇಲಿ ನಿರ್ಮಿಸಿದ ಅನಂತರ ಉಳಿದ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ನಗರಸಭೆ ಎಇಇ ಪುರಂದರ ಅವರು ತಿಳಿಸಿದ್ದಾರೆ.

ಪಾರ್ಕ್‌ ಒಳಗಡೆ ಸಣ್ಣದೊಂದು ಓಪನ್‌ ಸ್ಟೇಜ್‌ ಇರಲಿದೆ. ಸಣ್ಣ ಕಾರ್ಯಕ್ರಮಗಳಿಗೆ ಇದನ್ನು ಬಳಕೆ ಮಾಡಬಹುದು. ಇದಲ್ಲದೆ ಹೂ-ಗಿಡಗಳನ್ನು ನೆಟ್ಟು ಸುಂದರ ಪಾರ್ಕ್‌ ತಲೆ ಎತ್ತಲಿದೆ. ಪಾರ್ಕ್‌ ನ ಸುತ್ತ ಸುಮಾರು 6 ಅಡಿ ವಿಸ್ತಾರದಲ್ಲಿ ಪಾಥ್‌ ವೇ ನಿರ್ಮಿಸಲಾಗುವುದು. ಬೆಳಗ್ಗೆ ಹಾಗೂ ಸಂಜೆ ಹೊತ್ತು ಸ್ಥಳೀಯ ನಿವಾಸಿಗಳು ಇಲ್ಲಿ ವಾಕಿಂಗ್‌ ಹೋಗಲು ಅನುಕೂಲವಾಗುವಂತೆ ರಚಿಸಲು ಚಿಂತನೆ ನಡೆಸಲಾಗಿದೆ.

ಮಕ್ಕಳ ಆಟಿಕೆ
ಪಾರ್ಕ್‌ ಎಂದಾಕ್ಷಣ ಹಿರಿಯರೇ ಓಡಾಡಿಕೊಂಡಿರುತ್ತಾರೆ ಎಂಬ ಆಲೋಚನೆ ಸುಳಿ ಯುತ್ತದೆ. ಆದರೆ ಇಲ್ಲಿ ಮಕ್ಕಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು. ಮಕ್ಕಳಿಗಾಗಿ ಆಟಿಕೆ ವಸ್ತು ಗಳನ್ನು, ಮಕ್ಕಳ ದೈಹಿಕ ಬೆಳವಣಿಗೆಗೆ ಪೂರಕ ಪರಿ ಕರಗಳನ್ನು ಇಡಲಾಗುವುದು. ಸುತ್ತಮುತ್ತಲಿನ ಮನೆ ಗಳ ಮಕ್ಕಳು ಇಲ್ಲಿ ಬಂದು ಹೊಸ ವಾತಾವರಣಕ್ಕೆ ತೆರೆದುಕೊಳ್ಳಲು ಇದು ಸೂಕ್ತ ಸ್ಥಳವಾಗಲಿದೆ.

ಇದು ನಗರದ ನಾಲ್ಕನೇ ಪಾರ್ಕ್‌
ಮೊಟ್ಟೆತ್ತಡ್ಕ, ನೆಲ್ಲಿಕಟ್ಟೆ, ನಗರಸಭೆ ಸಮೀಪ ಒಟ್ಟು ಮೂರು ಪಾರ್ಕ್‌ಗಳಿವೆ. ಮೊಟ್ಟೆತ್ತಡ್ಕ ಪಾರ್ಕ್‌ ಬಿಟ್ಟರೆ ಉಳಿದ ಎರಡೂ ಪಾರ್ಕ್‌ಗಳ ಸ್ಥಿತಿ ಉತ್ತಮವಾಗಿಲ್ಲ. ನಗರಸಭೆ ಸಮೀಪವಿರುವ ಚಿಣ್ಣರ ಪಾರ್ಕ್‌ಗೆ ಮಕ್ಕಳೇ ಬರುತ್ತಿಲ್ಲ. ಇದನ್ನು ಅಭಿವೃದ್ಧಿಪಡಿಸಬೇಕು ಎಂಬ ನೆಲೆಯಲ್ಲಿ ಹಮ್ಮಿಕೊಂಡ ಹಲವು ಯೋಜನೆ ವಿಫಲವಾದವು. ಇದೀಗ ನಾಲ್ಕನೇ ಪಾರ್ಕ್‌ ನಿರ್ಮಾಣಕ್ಕೆ ಮುಂದಾಗಿದ್ದು, ಸವಾಲು ಹಲವಿವೆ. ಸ್ವತ್ಛತೆ, ನಿರ್ವಹಣೆ ನಗರಸಭೆ ಜವಾಬ್ದಾರಿಯಾದರೂ, ಪಾರ್ಕನ್ನು ಬಳಸಿಕೊಳ್ಳುವಲ್ಲಿ ನಾಗರಿಕರೇ ಮುಂದೆ ಬರಬೇಕು. ಮಾತ್ರವಲ್ಲ ಪಾರ್ಕ್‌ನ ನೈಜ ಉದ್ದೇಶವನ್ನು ಅರ್ಥ ಮಾಡಿಕೊಂಡು, ಜನಸಾಮಾನ್ಯರಿಗೆ ತಲುಪಿಸಬೇಕಾಗಿದೆ.

ಉಳಿಕೆ ಹಣದ ಬಳಕೆ
ನಗರೋತ್ಥಾನದಡಿ ಸಾಮೆತ್ತಡ್ಕದಲ್ಲಿ ಪಾರ್ಕ್‌ ನಿರ್ಮಿಸಲಾಗುವುದು. ಪುತ್ತೂರು ಕಿಲ್ಲೆ ಮೈದಾನವನ್ನು ಅಭಿವೃದ್ಧಿ ಮಾಡಿ, ಉಳಿಕೆ ಹಣವನ್ನು ಇದಕ್ಕೆ ಬಳಸಿಕೊಳ್ಳಲಾಗುವುದು. ಒಂದು ವೇಳೆ ಅನುದಾನ ಕಡಿಮೆಯಾದರೆ, ಇತರ ಅನುದಾನವನ್ನು ವಿನಿಯೋಗಿಸಿಕೊಳ್ಳಲಾಗುವುದು. ಪುತ್ತೂರು ನಗರದ ಸಂಪೂರ್ಣ ಅಭಿವೃದ್ಧಿ ದೃಷ್ಟಿಯಿಂದ ಹಮ್ಮಿಕೊಂಡ ಹಲವು ಯೋಜನೆಗಳಲ್ಲಿ ಇದೂ ಒಂದು.
ಜಯಂತಿ ಬಲ್ನಾಡು 
ಅಧ್ಯಕ್ಷೆ , ಪುತ್ತೂರು ನಗರಸಭೆ

ಹೊಸ ವಾತಾವರಣ
ಜನರಿಗೆ ಹೊಸ ವಾತಾವರಣ ತೆರೆದುಕೊಡುವ ಪಾರ್ಕ್‌, ಸಾಮೆತ್ತಡ್ಕದಲ್ಲಿ ತಲೆ ಎತ್ತಲಿದೆ. ಆರೋಗ್ಯದ ದೃಷ್ಟಿಯಿಂದಲೂ ಪಾರ್ಕ್‌ ಉತ್ತಮ. ಸಾಮೆತ್ತಡ್ಕ ಪರಿಸರದಲ್ಲಿ ಹೆಚ್ಚಿನ ಮನೆಗಳಿದ್ದು, ಪಾರ್ಕ್‌ ನಿರ್ಮಿಸಿದರೆ
ಉತ್ತಮ ಎಂಬ ಅಭಿಪ್ರಾಯವನ್ನು ಸಾಮಾನ್ಯ ಸಭೆಯಲ್ಲಿ ಇಡಲಾಗಿತ್ತು. ಇದೀಗ ನಗರೋತ್ಥಾನ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.
ರೂಪಾ ಶೆಟ್ಟಿ,
ಪೌರಾಯುಕ್ತೆ, ನಗರಸಭೆ

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.