1008 ತೆಂಗಿನಕಾಯಿಯ ಮೂಡುಗಣಪತಿ ಸೇವೆ
Team Udayavani, Nov 24, 2017, 12:47 PM IST
ಪಾವಂಜೆ : ಇಲ್ಲಿನ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಚಂಪಾಷಷ್ಠಿ ಪ್ರಯುಕ್ತ ತೆಂಗಿನಕಾಯಿಯಿಂದ ನಿರ್ಮಿಸಿದ ವಿಶಿಷ್ಟ ಮೂಡುಗಣಪತಿ ಸೇವೆ ನೆರವೇರಿದೆ.
ಈ ಸೇವೆ ಅತಿ ಪುರಾತನ ಹಾಗೂ ಫಲದಾಯಕ ಎಂಬ ನಂಬಿಕೆಯಿದೆ. ಭಕ್ತರು ತೆಂಗಿನಕಾಯಿಯನ್ನು ಎರಡು ಹೋಳು ಮಾಡಿ ತಮ್ಮ ವೈಯುಕ್ತಿಕ ಹರಕೆಯನ್ನು ಈ ರೀತಿ ಸಲ್ಲಿಸಬಹುದು. ತೆಂಗಿನಕಾಯಿಯ ಹೋಳಿನಿಂದಲೇ ಗಣಪತಿ ಆಕಾರವನ್ನು ನಿರ್ಮಿಸಿ ಅದಕ್ಕೆ ಸೀರೆಯ ಹೊದಿಕೆಯ ಶೃಂಗಾರ ಮಾಡಿ ದಿನಪೂರ್ತಿ ಇಡಲಾಗುತ್ತದೆ. ಸೇವಾದಾರರು ತೆಂಗಿನಕಾಯಿಯೊಂದಿಗೆ ಗರಿಕೆ, ಹೂ, ಬಾಳೆಹಣ್ಣು, ಅರಸಿನ, ಕುಂಕುಮ, ಕರ್ಪೂರ, ಅಗರಬತ್ತಿ, ವೀಳ್ಯದೆಲೆ, ಅಡಿಕೆಯನ್ನು ನೀಡಬೇಕು.
ಮೂಡುಗಣಪತಿಯನ್ನು ನಿರ್ಮಿಸಿದ ಬಳಿಕ ಗಣಹೋಮ ಇತ್ಯಾದಿ ಧಾರ್ಮಿಕ ವಿಧಿ ವಿಧಾನ ನಡೆದ ಬಳಿಕ ಭಕ್ತರೇ ಇದಕ್ಕೆ ಆರತಿ ಬೆಳಗಿ ಇಷ್ಟಾರ್ಥವನ್ನು ನಿವೇದಿಸಿಕೊಳ್ಳುತ್ತಾರೆ. ಅನಂತರ ಬಳಸಿದ ತೆಂಗಿನಕಾಯಿಯನ್ನು ಭಕ್ತರಿಗೆ ಹಂಚಲಾಗುತ್ತದೆ. ಈ ಮೂರ್ತಿಗೆ ಕನಿಷ್ಠ 1,008 ತೆಂಗಿನಕಾಯಿ ಬಳಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ