Belthangady ಅಡುಗೆ ಕೆಲಸಕ್ಕೆ ತೆರಳಿದ್ದ ವ್ಯಕ್ತಿ ನಾಪತ್ತೆ
Team Udayavani, Aug 23, 2023, 9:48 PM IST
ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕೂಳೂರು ಶಾರದಾ ನಗರ ನಿವಾಸಿ ರಾಘವೇಂದ್ರ ಮೆಹೆಂದಳೆ (32) ನಾಪತ್ತೆಯಾದ ಕುರಿತು ದೂರು ದಾಖಲಾಗಿದೆ.
ಆ. 20ರಂದು ಸ್ಥಳೀಯವಾಗಿ ಅಡುಗೆ ಕೆಲಸಕ್ಕೆ ಹೋಗಿದ್ದ ರಾಘವೇಂದ್ರ ಮೆಹೆಂದಳೆ ಅವರು ಬಳಿಕ ಕಾರು ವಾಶ್ ಕೊಡುವ ಬಗ್ಗೆ ಹಾಗೂ ಕ್ಯಾಟರಿಂಗ್ ಕೆಲಸ ಇರುವುದರಿಂದ ಮನೆಗೆ ಬರುವಾಗ ತಡವಾಗಬಹುದು ಎಂದು ತಿಳಿಸಿದ್ದರು.
ಮಧ್ಯಾಹ್ನ 12.30ರ ಸುಮಾರಿಗೆ ಮೊಬೈಲ್ಗೆ ಕರೆ ಮಾಡಿ ತಡವಾಗಬಹುದು ಎಂಬ ಸಂದೇಶ ನೀಡಿದ್ದು, ಅದರ ಬಳಿಕ ಅವರ ಮೊಬೈಲ್ ಸ್ವಿಚ್ಆಫ್ ಆಗಿದೆ ಎಂದು ಅವರ ಪತ್ನಿ ಶೀಲಾ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆ. 21ರಂದು ದೂರು ನೀಡಿದ್ದಾರೆ.