ಬಾಂಬ್ ಪ್ರಕರಣ: ಪಣಂಬೂರಿನಲ್ಲೇ ಆದಿತ್ಯ ರಾವ್ವಿಚಾರಣೆ
Team Udayavani, Jan 31, 2020, 1:35 AM IST
ಮಂಗಳೂರು: ಬಾಂಬ್ ಇರಿಸಿದ ಆರೋಪಿ ಆದಿತ್ಯ ರಾವ್ನ ತನಿಖೆ ಮುಂದುವರಿ ದಿದ್ದು, ಗುರುವಾರ ತನಿಖಾ ತಂಡವು ಆತನನ್ನು ಮತ್ತಷ್ಟು ವಿಚಾರಣೆಗೆ ಒಳ ಪಡಿಸಿದೆ.
ಆತನನ್ನು ಗುರುವಾರ ಬೆಂಗಳೂರಿಗೆ ಕರೆ ದೊಯ್ಯಲು ಸಿದ್ಧತೆ ನಡೆಸಿದ್ದರೂ ಕಾರಣಾಂತರ ಗಳಿಂದ ಎಲ್ಲಿಗೂ ಕರೆದೊಯ್ದಿಲ್ಲ. ಪಣಂಬೂರಿನ ಎಸಿಪಿ ಕಚೇರಿಯಲ್ಲಿಯೇ ತನಿಖೆಯನ್ನು ಮುಂದುವರಿಸಲಾಗಿದೆ.
ಆತನನ್ನು ಧ್ವನಿ ಪರೀಕ್ಷೆಗೆ ಒಳ ಪಡಿಸಬೇಕಾಗಿದ್ದು, ಅದಕ್ಕೆ ಬೇಕಾಗಿರುವ ಸೌಲಭ್ಯಗಳು ಮಂಗಳೂರಿ ನಲ್ಲಿಯೇ ಸ್ಥಳೀಯವಾಗಿ ಲಭ್ಯ ಇರುವುದರಿಂದ ಅದಕ್ಕಾಗಿ ಆತನನ್ನು ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಕಡಿಮೆ. ಇಲ್ಲಿಯೇ ಅದನ್ನು ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಆತ ಬೆದರಿಕೆ ಕರೆ ಮಾಡಿದ ಬಗ್ಗೆ ಧ್ವನಿ ಪರೀಕ್ಷೆಯನ್ನು ಗುರುವಾರ ಇಲ್ಲಿಯೇ ನಡೆಸಲಾಗಿದೆ. ಅಗತ್ಯವಿದ್ದರೆ ಮಾತ್ರ ಜ.31ರಂದು ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
10 ದಿನಗಳ ಪೊಲೀಸ್ ಕಸ್ಟಡಿ ಫೆ.1ರಂದು ಮುಕ್ತಾಯವಾಗಲಿದ್ದು, ಅಂದು ಆದಿತ್ಯ ರಾವ್ನನ್ನು ಮಂಗಳೂರು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗಿದೆ. ಅಗತ್ಯ ಬಿದ್ದರೆ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಬೆಂಗಳೂರು ಭಾಗದ ತನಿಖೆಯನ್ನು ಕೈಗೆತ್ತಿಕೊಳ್ಳಬಹುದು ಎನ್ನುವುದು ಪೊಲೀಸರ ಸದ್ಯದ ಲೆಕ್ಕಾಚಾರವಾಗಿದೆ.