ಕನಕಮಜಲು ಗ್ರಾಮಕ್ಕೆ ಬಂತು ಪರಿಸರ ಸ್ನೇಹಿ ಶೌಚಾಲಯ

ಪಿಕ್‌ ಆ್ಯಂಡ್‌ ಕ್ಯಾರಿ ಮಾದರಿಯಲ್ಲಿ ನಿರ್ಮಾಣ; ಮಾಣಿ-ಮೈಸೂರು ರಾ.ಹೆ. ಪ್ರಯಾಣಿಕರಿಗೆ ಅನುಕೂಲ

Team Udayavani, Feb 3, 2020, 5:36 AM IST

0202JALSURE-STORY

ಕನಕಮಜಲು: ಕೇಂದ್ರ ಸರಕಾರದ ಜನಸ್ನೇಹಿ ಸಾರ್ವಜನಿಕ ಶೌಚಾಲಯ ಆಶಯದಲ್ಲಿ ಕನಕಮಜಲು ಗ್ರಾಮದಲ್ಲಿ ನವೀನ ಮಾದರಿಯ ಪರಿಸರ ಸ್ನೇಹಿ ಶೌಚಾಲಯ ನಿರ್ಮಾಣವಾಗಿದೆ. ಬಯಲು ಮುಕ್ತ ಗ್ರಾಮದಲ್ಲಿ ಗ್ರಾಮಸ್ಥರ ಸಾರ್ವಜನಿಕ ಶೌಚಾಲಯದ ಬೇಡಿಕೆ ಈಡೇರಿದೆ.

ಮಾಣಿ – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕನಕಮಜಲು ಗ್ರಾಮದ ಮುಖ್ಯ ಪೇಟೆಯಲ್ಲಿದೆ ಈ ಜನಸ್ನೇಹಿ ಶೌಚಾಲಯ. ಪ್ರತಿದಿನ 24 ಗಂಟೆಯೂ ಈ ಶೌಚಾಲಯ ಲಭ್ಯವಿರುತ್ತದೆ. ಹೆದ್ದಾರಿಯ ಪಕ್ಕದಲ್ಲಿಯೇ ಶೌಚಾಲಯ ಇರುವುದರಿಂದ ರಸ್ತೆಯ ಮೂಲಕ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಿದೆ.

ರೆಡಿಮೇಡ್‌ ಶೌಚಾಲಯ
ಕನಕಮಜಲಿನ ಸಾರ್ವಜನಿಕ ಶೌಚಾಲಯವನ್ನು ನೂತನ ಮಾದರಿಯಲ್ಲಿ ನಿರ್ಮಿಸಲಾಗಿದೆ. ಕನಕಮಜಲು ಗ್ರಾ.ಪಂ. ಸದಸ್ಯರು ಮತ್ತು ಅಧಿಕಾರಿಗಳ ಯೋಜನೆಯಲ್ಲಿ ಈ ಜನಸ್ನೇಹಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಮುಂದಾಗಿದ್ದು, ಇದರ ಕೋಣೆ ಮತ್ತು ಛಾವಣಿ ರೆಡಿಮೇಡ್‌ ಆಗಿದೆ. ಬೇಸ್‌ಮೆಂಟ್‌ ಮತ್ತು ಅಡಿಪಾಯ ನಿರ್ಮಿಸಿ ಕೋಣೆಯನ್ನು ಜೋಡಿಸಲಾಗಿದೆ. ಇದನ್ನು ತೆಗೆದು ಪುನಃ ಜೋಡಿಸಬಹುದಾದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಶೌಚಾಲಯದ ಸಾಗಾಟವೂ ಸುಲಭ. ಸಾರ್ವಜನಿಕ ಶೌಚಾಲಯದಲ್ಲಿ ಎರಡು ಕೋಣೆಗಳಿವೆ. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪುತ್ತೂರಿನ ಮಾಸ್ಟರ್‌ ಪ್ಲಾನರಿಯವರು ಈ ವಿನೂತನ ಮಾದರಿಯ ಶೌಚಾಲಯ ನಿರ್ಮಿಸಿದ್ದಾರೆ.

24 ಗಂಟೆಯೂ ನೀರು ಪೂರೈಕೆ
ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ 1.5 ಲಕ್ಷ ರೂ. ವ್ಯಯಿಸ ಲಾಗಿದ್ದು, ಗಾಂಧಿ ಗ್ರಾಮ ಪುರಸ್ಕಾರ ಅನುದಾನ, ನಿರ್ಮಲ ಗ್ರಾಮ ಪುರಸ್ಕಾರ ಅನುದಾನ ಬಳಸಲಾಗಿದೆ.

ಗ್ರಾಮದ ನಿವಾಸಿ ಬಿ.ಎಚ್‌. ಗುಡ್ಡಪ್ಪ ಗೌಡ ತಮ್ಮ ತೋಟದ ಜಾಗವನ್ನು ಕೊಟ್ಟು ಸಹಕರಿಸಿದ್ದಾರೆ. ಶೌಚಾಲಯದ ಪಕ್ಕ ನೀರಿನ ಟ್ಯಾಂಕ್‌ ಅಳವಡಿಸಲಾಗಿದೆ. ಸಾವಿರ ಲೀ. ಟ್ಯಾಂಕ್‌ಗೆ ಕುಡಿಯುವ ನೀರಿನ ಯೋಜನೆಯಿಂದ ನೀರು ಪೂರೈಸಲಾಗುತ್ತಿದೆ. ದಿನವಿಡೀ ನೀರಿನ ಲಭ್ಯತೆಯಿದೆ.

15 ವರ್ಷಗಳ ಬೇಡಿಕೆ
ಕನಕಮಜಲು ಗ್ರಾಮವು ಬಯಲು ಮುಕ್ತ ಗ್ರಾಮವೆಂದು ಘೋಷಿಸಲಾಗಿದ್ದು, ಈ ಭಾಗದಲ್ಲಿ ಸಾರ್ವಜನಿಕ ಶೌಚಾಲಯ ಬೇಕೆನ್ನುವ ಕೂಗು 15 ವರ್ಷಗಳಿಂದಲೇ ಇತ್ತು. ಗ್ರಾಮಸಭೆ, ಜಮಾಬಂದಿ, ಸಾಮಾನ್ಯ ಸಭೆ ಹೀಗೆ ಎಲ್ಲ ಸಭೆಗಳಲ್ಲಿ ಸಾರ್ವಜನಿಕ ಶೌಚಾಲಯದ ಪ್ರಸ್ತಾವ ಮಾಡಲಾಗಿತ್ತು. ಮೊದಲಿಗೆ ಜಾಗದ ಕೊರತೆ ಇತ್ತು. ಹೀಗಾಗಿ ಸ್ವಲ್ಪ ತಡವಾಯಿತು. ಗ್ರಾಮಸ್ಥರ ಸಹಕಾರದಿಂದ ನಿರ್ಮಿಸಲಾಯಿತು ಎಂದು ಗ್ರಾ.ಪಂ. ಸಿಬಂದಿ ಹೇಳುತ್ತಾರೆ. ಜನಸ್ನೇಹಿ ಶೌಚಾಲಯ ನಿರ್ಮಿಸಿ, ಕನಕಮಜಲು ಗ್ರಾ.ಪಂ. ಪ್ರಶಂಸೆಗೆ ಪಾತ್ರವಾಗಿದೆ.

ಶೌಚಾಲಯದಲ್ಲಿ ಚಿತ್ರ-ಬರಹಗಳು ಆಕರ್ಷಿಸುತ್ತಿವೆ. ಗೋಡೆಯಲ್ಲಿ ಹೂವಿನ ಚಿತ್ರ ಬಿಡಿಸಲಾಗಿದೆ. “ಸ್ವಚ್ಛ ಸುಂದರ ಶೌಚಾಲಯ’, ಸ್ವಚ್ಛ ಪರಿಸರ ಜೀವನ ಸುಖಕರ ಆಗಬೇಕು ಪರಿಸರ ಸ್ವಚ್ಛತೆ ಉಳಿಯಬೇಕು, ಮುಂದಿನ ಜನತೆ, ಸ್ವಚ್ಛ ಪ್ರಕೃತಿ ನಮ್ಮ ಸಂಸ್ಕೃತಿ, ಸ್ವಚ್ಛ ಪರಿಸರದ ಅರಿವು ಜೀವ ಸಂಕುಲದ ಉಳಿವು ಮುಂತಾದ ಬರಹಗಳನ್ನು ಬರೆಸಲಾಗಿದೆ.

ಆವಶ್ಯಕತೆ ಇತ್ತು
ಕನಕಮಜಲು ಗ್ರಾಮದಲ್ಲಿ ಶೌಚಾಲಯದ ಆವಶ್ಯಕತೆ ಇತ್ತು. ಜಾಗದ ಸಮಸ್ಯೆ ಎದುರಾದಾಗ ಗ್ರಾಮಸ್ಥರ ಮನವೊಲಿಸಿ ಅವರ ಸಹಕಾರದಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಸ್ವಚ್ಛತೆಗೆ ಗ್ರಾಮಸ್ಥರು ಹೆಚ್ಚಿನ ಗಮನ ಹರಿಸಿದರೆ ಈ ಕಾರ್ಯ ಸಾರ್ಥಕವಾಗಬಹುದು.
-ಶ್ರೀಧರ ಕುತ್ಯಾಳ
ಉಪಾಧ್ಯಕ್ಷ, ಗ್ರಾ.ಪಂ. ಕನಕಮಜಲು

-ಶಿವಪ್ರಸಾದ್‌ ಮಣಿಯೂರು

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.