ನೆರಿಯದಲ್ಲಿ ಒಂಟಿ ಸಲಗದ ವಿಹಾರ! ಜೀವ ಭಯದಲ್ಲಿ ಊರಿನ ಜನ
Team Udayavani, Dec 13, 2022, 7:40 AM IST
ಬೆಳ್ತಂಗಡಿ : ತಾಲೂಕಿನ ಅರಣ್ಯಭಾಗದ ಊರುಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆಯ ಕಾರ್ಯಾಚರಣೆಯ ನಡುವೆಯೇ ಸೋಮವಾರ ಬೆಳಗ್ಗೆ ನೆರಿಯ ಗ್ರಾಮದ ಅಣಿಯೂರು ಪೇಟೆಯ ಪ್ರದೇಶದಲ್ಲೇ ಒಂಟಿ ಸಲಗ ವಿಹರಿಸುವ ಮೂಲಕ ಜನರನ್ನು ಭಯಬೀತಗೊಳಿಸಿದೆ.
ತೋಟತ್ತಾಡಿಯ ಬಾರೆ ಪ್ರದೇಶದಲ್ಲಿ ರವಿವಾರ ರಾತ್ರಿ ಗಸ್ತು ನಿರತ ತಂಡಕ್ಕೆ ಒಂಟಿ ಸಲಗ ಎದುರಾಗಿದ್ದು, ಪಟಾಕಿ ಸಿಡಿಸುವ ಮೂಲಕ ಕಾಡಿಗೆ ಅಟ್ಟಲಾಗಿತ್ತು. ಸೋಮವಾರ ಬೆಳಗ್ಗೆ 6.45ರ ಸುಮಾರಿಗೆ ಇಲ್ಲಿಂದ ಸುಮಾರು ಏಳೆಂಟು ಕಿ.ಮೀ. ದೂರದ ನೆರಿಯ ಗ್ರಾಮದ ಅಣಿಯೂರುಪೇಟೆ ಸಮೀಪದ ಸೇತುವೆಯ ಕೆಳಗೆ ಆನೆ ಓಡಾಡುತ್ತಿರುವುದು ಕಂಡುಬಂದಿತು. ಇದರ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ.
ಆನೆ ಓಡಿಸಲು ಪಟಾಕಿ ಕೊರತೆ
ತೋಟತ್ತಾಡಿ, ಬಾರೆ, ಕುಂಟಾಡಿ, ಅಗರಿ ಕುಕ್ಕಾಜೆ, ಮುದ್ದಿನಡ್ಕ ಮೊದಲಾದೆಡೆ ಕಾಡಾನೆಗಳು ಕೃಷಿ ನಾಶ ಮಾಡುತ್ತಿವೆ. ಆನೆ ಓಡಿಸಲು ಅರಣ್ಯ ಇಲಾಖೆಯಲ್ಲಿರುವ ಪಟಾಕಿ ದಾಸ್ತಾನು ಸಾಲುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ