‘ಬೆಂದ್ರ್ ತೀರ್ಥ ಧಾರ್ಮಿಕ ಕ್ಷೇತ್ರವಾಗಿ ಅಭಿವೃದ್ಧಿ’


Team Udayavani, Dec 11, 2018, 3:10 AM IST

bendr-teertha-10-12.jpg

ಬೆಟ್ಟಂಪಾಡಿ: ಯತೀ ವಾದಿರಾಜರು ಬೆಂದ್ರ್ ತೀರ್ಥ ಕ್ಷೇತ್ರದ ಉಗಮಕ್ಕೆ ಕಾರಣರು ಎಂಬ ಐತಿಹ್ಯ ಇದೆ. ಬೆಂದ್ರ್ ತೀರ್ಥ ಕ್ಷೇತ್ರವನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಅಭಿವೃದ್ಧಿ ಮಾಡಬೇಕು. ಪ್ರವಾಸೋದ್ಯಮವಾಗಿ ಅಭಿವೃದ್ಧಿ ಮಾಡುವ ಆವಶ್ಯಕತೆ ಇಲ್ಲ ಎಂದು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭತೀರ್ಥ ಸ್ವಾಮೀಜಿ ಹೇಳಿದರು.

ಬೆಂದ್ರ್ ತೀರ್ಥ ಕ್ಷೇತ್ರದ ಹಿಂದಿನ ಪಾವಿತ್ರತೆಯನ್ನು ಉಳಿಸಬೇಕು. ಹಿಂದೆ ಸಂಚಾರಿ ಕ್ರಮದಲ್ಲಿ ವಾದಿರಾಜರು ಈ ಹಾದಿಯಾಗಿ ಬರುವಾಗ ವೃದ್ದರೊಬ್ಬರು ನದಿ ನೀರಿನಲ್ಲಿ ಸ್ನಾನ ಮಾಡುವುದನ್ನು ಕಂಡರು. ಅವರು ವಾದಿರಾಜರ ಬಳಿ ಚಳಿಗೆ ಸ್ನಾನ ಕಷ್ಟ ಎಂದು ತನ್ನ ಆಳಲು ತೋಡಿಕೊಂಡರು. ಆ ಸಂದರ್ಭ ನದಿ ಪಕ್ಕದಲ್ಲೇ ಈಗಿನ ಬೆಂದ್ರ್ ತೀರ್ಥದ ಸ್ಥಳದಲ್ಲಿ ಬಿಸಿನೀರಿನ ಬುಗ್ಗೆಯನ್ನು ಸೃಷ್ಟಿಸಿದರು ಎಂಬ ಐತಿಹ್ಯ ಇದೆ. ಇದರ ಬಗ್ಗೆ ಇಲ್ಲಿನ ಸ್ಥಳೀಯರಿಗೆ ಮಾಹಿತಿ ಇರುವಂತೆ ಕಾಣಿಸುತ್ತಿಲ್ಲ. ಆದರೆ ಉಡುಪಿಯಲ್ಲಿ ಇದರ ಬಗೆಗಿನ ಉಲ್ಲೇಖಗಳು ಸಿಗುತ್ತವೆ. ಆದ್ದರಿಂದ ಈ ಕ್ಷೇತ್ರವನ್ನು ಧಾರ್ಮಿಕ ಹಿನ್ನಲೆಯಲ್ಲಿಯೇ ಅಭಿವೃದ್ಧಿ ಮಾಡಬೇಕಿದೆ ಎಂದು ವಿವರಿಸಿದರು.

ಪುನರುತ್ಥಾನ ಆಗಬೇಕಿದೆ
ಬೆಂದ್ರ್ ತೀರ್ಥಕ್ಕೆ ತನ್ನದೆ ಆದ ಪಾವಿತ್ರತೆ ಇದೆ. ಬಳಿಯಲ್ಲೇ ಇರುವ ಬೈಲಾಡಿ ಶ್ರೀವಿಷ್ಣು ಮೂರ್ತಿ ದೇವಸ್ಥನ ಜತೆ ನಿಕಟ ಸಂಬಂಧ ಇದೆ. ಆದ್ದರಿಂದ ಲಾಡ್ಜ್, ರೇಸಾರ್ಟ್‌ ಮಾಡುವ ಕಾರ್ಯಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದಾಗುವುದು ಬೇಡ. ಪ್ರಾಚೀನದ ಅರ್ಥವನ್ನು ಗಮನಿಸಿಕೊಂಡು ಪುನರುತ್ಥಾನ ಮಾಡಬೇಕಿದೆ. ನಮಗೆ ವೈಭವ ಬೇಡ, ಪಾವಿತ್ರ್ಯತೆ ಉಳಿಸಬೇಕು. ಇದನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ.

ದಕ್ಷಿಣದ ಏಕೈಕ ಸ್ಥಳ
ಕಾಶಿಯಲ್ಲಿ ಬಿಸಿನೀರಿನ ಬುಗ್ಗೆ ಇರುವುದನ್ನು ನೋಡಿದ್ದೇವೆ. ಅದರಂತೆ ದಕ್ಷಿಣ ಭಾರತದಲ್ಲಿ ಇಂತಹದ್ದೇ ಬಿಸಿನೀರಿನ ಬುಗ್ಗೆ ಪುತ್ತೂರಿನ ಇರ್ದೆ ಗ್ರಾಮದ ಬೆಂದ್ರ್ ತೀರ್ಥದಲ್ಲಿ ಮಾತ್ರ ಇದೆ. ಇಷ್ಟು ಪ್ರಾಮುಖ್ಯತೆ ಇರುವ ಧಾರ್ಮಿಕ ಬಿಸಿನೀರಿನ ಬುಗ್ಗೆಯನ್ನು ಸ್ಥಳೀಯರ ಸಹಕಾರದಿಂದ ಅಭಿವ್ರದ್ದಿ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು. ಸ್ವಾಮೀಜಿಯ ಜತೆ ಉಡುಪಿ ಮಠದ ಶ್ರೀನಿವಾಸ ತಂತ್ರಿ, ಉದಯ ಕುಮಾರ್‌ ಸರಳತ್ತಾಯ, ಸ್ಥಳೀಯರಾದ ವಿಠ್ಠಲ ರೈ ಬೈಲಾಡಿ, ನಾರಾಯಣ ಭಟ್‌ ಕಾಜಿಮೂಲೆ, ನಾಗಾರಾಜ್‌ ಭಟ್‌, ಕರುಣಾಕರ ಶೆಟ್ಟಿ ಕೊಮ್ಮಂಡ, ದೇವಕಾನ ಸುಬ್ರಹ್ಮಣ್ಯ ಭಟ್‌, ಶ್ರೀಕೃಷ್ಣ ಮಡಕುಳ್ಳಾಯ, ಗ್ರಾ.ಪಂ. ಸದಸ್ಯ ಪ್ರಕಾಶ್‌ ರೈ ಬೈಲಾಡಿ, ಜಗನ್ನಾಥ್‌ ಶೆಟ್ಟಿ ಕೊಮ್ಮಂಡ, ಪ್ರಭಾಕರ ರೈ ಬಾಜುವಳ್ಳಿ, ಬಾಲಕೃಷ್ಣ ಪೂಜಾರಿ ಚೂರಿಪದವು ಉಪಸ್ಥಿತರಿದ್ದರು.

ಜಲತಜ್ಞರ ಭೇಟಿ
ಬೆಂದ್ರ್ ತೀರ್ಥದ ಸಮೀಪ ಹರಿಯುವ ಸೀರೆ ನದಿ ಮತ್ತು ಬಿಸಿನೀರಿನ ಬುಗ್ಗೆಗೆ ಸಂಬಂಧ ಇದೆಯೆ? ಬಿಸಿನೀರಿನ ಕೊಳಲಲ್ಲಿ ನೀರಿನ ಸೆಳೆ ಹೆಚ್ಚುಮಾಡುವುದು ಹೇಗೆ? ಈ ಎಲ್ಲಾ ದೃಷ್ಟಿಕೋನದಿಂದ ಆಲೋಚನೆ ಮಾಡಬೇಕಿದೆ. ಮುಂದಿನ ವಾರ ಬೆಂದ್ರ್ ತೀರ್ಥಕ್ಕೆ ಜಲ ತಜ್ಞರನ್ನು ಕರೆಸಿಕೊಳ್ಳಲಾಗುವುದು. ಸಾಧ್ಯವಾದರೆ ತಾನು ಬರುತ್ತೇನೆ. ಅಭಿವೃದ್ಧಿಯ ಬಗ್ಗೆ ಶಾಸಕರ ಜತೆ ಮಾತುಕತೆ ಮಾಡುವೆ.ಅವರ ಅಲೋಚನೆಯ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.