Surathkal ಪಾದಚಾರಿಗೆ ಬೈಕ್ ಢಿಕ್ಕಿ; ಸವಾರ ಸಾವು
Team Udayavani, Nov 26, 2023, 12:29 AM IST
ಸುರತ್ಕಲ್: ದ್ವಿಚಕ್ರವಾಹನ ಪಾದಚಾರಿಗೆ ಢಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟು, ಪಾದಚಾರಿ ಗಂಭೀರ ಗಾಯಗೊಂಡಿರುವ ಘಟನೆ ಮುಕ್ಕ ರಾಷ್ಟ್ರೀಯ ಹೆದ್ದಾರಿ 66ರ ಪಡ್ರೆ ದ್ವಾರದ ಬಳಿ ನಡೆದಿದೆ.
ಮುಕ್ಕ ಶ್ರೀನಿವಾಸ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಹೊಸಬೆಟ್ಟು ನಿವಾಸಿ ವೈಭವ್ ವಿಶ್ವನಾಥ್ (21) ಸ್ಥಳದಲ್ಲೇ ಮೃತಪಟ್ಟವರು. ಮುಕ್ಕ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಂ.ಸಿ. ಫಾರೂಕ್ ಗಾಯಗೊಂಡವರು.
ಮಧ್ಯಾಹ್ನದ ವೇಳೆ ಯುವಕ ಮನೆಯಿಂದ ಮುಕ್ಕದ ಕಾಲೇಜಿಗೆ ತೆರಳುತ್ತಿದ್ದ ವೇಳೆ ಗಾಯಾಳು ಫಾರೂಕ್ ಅವರು ಪೆಟ್ರೋಲ್ ಖಾಲಿಯಾಗಿದ್ದ ಆಕ್ಟಿವಾವನ್ನು ಮುಕ್ಕ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿ ರಸ್ತೆ ದಾಟಿ ಪೆಟ್ರೋಲ್ ಹಿಡಿದುಕೊಂಡು ಹೆದ್ದಾರಿ ದಾಟುತ್ತಿದ್ದ ವೇಳೆ ಬೈಕ್ನಲ್ಲಿ ಬರುತ್ತಿದ್ದ ವೈಭವ್ ನಿಯಂತ್ರಣ ತಪ್ಪಿ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.