ಆಸ್ಪತ್ರೆಯಿಂದ ನಗ, ನಗದು ಕಳವು: ಆರೋಪಿ ಸೆರೆ
Team Udayavani, Dec 17, 2022, 1:16 AM IST
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗೆ ಶುಶ್ರೂಷೆಗಾಗಿ 2022ರ ಜೂನ್ 30 ರಂದು ಬೆಂಗಳೂರಿನ ಹೇಮಾ ದಾಖಲಾಗಿದ್ದರು. ಆಕೆಯ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ 6 ಸಾವಿರ ರೂ. ನಗದು ಮತ್ತು 80 ಗ್ರಾಂ. ತೂಕದ ಎರಡು ಹವಳದ ಮಾಂಗಲ್ಯ ಸರ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸ್ ತಂಡ ಬಂಧಿಸಿದೆ.
ಬೆಂಗಳೂರಿನ ಹರ್ಷಾ (26) ಬಂಧಿತೆ. ಆತನಿಂದ 2.50 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಕಳವು ಪ್ರಕರಣದ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬೆಂಗಳೂರಿಗೆ ತೆರಳಿದ ಪೊಲೀಸರ ವಿಶೇಷ ತಂಡ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾ ರೆ. ಆರೋಪಿ ಮೂಲತಃ ಬಂಟ್ವಾಳ ಗ್ರಾಮದ ನಿವಾಸಿ 26 ವರ್ಷದ ಯುವತಿ ಎಂದು ತಿಳಿದು ಬಂದಿದೆ. ಆಕೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ದುಬಾೖಗೆ ಹೋಗಲು ವೀಸಾ ಮಾಡಿಸಿದ್ದಳು.
ಪೊಲೀಸರು ಆಕೆಯಿಂದ ಎರಡೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾ ರೆ. ಆರೋಪಿಯನ್ನು ಗುರುವಾರ ಬೆಳ್ತಂಗಡಿಯಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.