Acid case; ವಿದ್ಯಾರ್ಥಿನಿಯರನ್ನು ಭೇಟಿಯಾದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಚೌಧರಿ
Team Udayavani, Mar 5, 2024, 12:38 PM IST
ಮಂಗಳೂರು: ಕಡಬದ ಪದವಿ ಪೂರ್ವ ಕಾಲೇಜೊಂದರಲ್ಲಿ ಆ್ಯಸಿಡ್ ದಾಳಿಗೊಳಗಾದ ಮೂವರು ವಿದ್ಯಾರ್ಥಿನಿಯರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಚೌಧರಿ ಭೇಟಿ ಮಾಡಿದರು.
ತಕ್ಷಣವೇ ವಿದ್ಯಾರ್ಥಿನಿಯರಿಗೆ ತಲಾ ನಾಲ್ಕು ಲಕ್ಷ ಪರಿಹಾರ ನೀಡಲಾಗುವುದು. ಮುಂದೆ ಚಿಕಿತ್ಸೆಗೆ ಅಗತ್ಯವಿದ್ದರೆ 20 ಲಕ್ಷ ವರೆಗೆ ನೆರವು ಸರಕಾರದಿಂದ ನೆರವು ಒದಗಿಸಲಾಗುತ್ತದೆ.
ಮೂವರು ಕೂಡಾ ಚೇತರಿಸಿಕೊಂಡಿದ್ದಾರೆ. ಅವರ ಆತ್ಮಸ್ಥೈರ್ಯ ನೋಡಿ ಅಚ್ಚರಿಯಾಗಿದೆ. ವೈದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ.
ಕಡಿಮೆ ತೀವ್ರತೆಯ ಆ್ಯಸಿಡ್ ಎರಚಿದ್ದಾರೆ. ವಿದ್ಯಾರ್ಥಿನಿಯರಿಗೆ ಪರೀಕ್ಷೆಯದ್ದೆ ಈಗ ಅತಂಕವಾಗಿದೆ. ಮತ್ತೆ ಬರೆಯಬೇಕೇ ಎಂದು ಕೇಳುತ್ತಿದ್ದಾರೆ ಎಂದರು.