ಕರಾವಳಿ: 336 ಶಾಲೆಗಳಿಗೆ ಹಾನಿ

ಆಗಸ್ಟ್‌ ಮೊದಲ ವಾರದ ಮಹಾಮಳೆ

Team Udayavani, Aug 26, 2019, 5:45 AM IST

School-Dam

ಸಾಂದರ್ಭಿಕ ಚಿತ್ರ.

ಮಂಗಳೂರು: ಆಗಸ್ಟ್‌ ಮೊದಲ ವಾರದಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸಹಿತ ಕರಾವಳಿಯಲ್ಲಿ ಸುರಿದ ಭಾರೀ ಮಳೆ ಮತ್ತು ನೆರೆಯಿಂದಾಗಿ ಒಟ್ಟು 336 ಶಾಲೆಗಳಿಗೆ ಹಾನಿಯಾಗಿದೆ.

ಕರಾವಳಿಯಲ್ಲಿ ಒಟ್ಟು 1,816 ಶಾಲೆಗಳಿವೆ. ಅಂದಾಜು ಮಳೆ ಹಾನಿಯ ಬಗ್ಗೆ ವಲಯ ಶಿಕ್ಷಣಾಧಿಕಾರಿಗಳು ಆಯಾ ಶಾಲಾ ಮುಖ್ಯಸ್ಥರಿಂದ ವರದಿ ಪಡೆದು ಜಿಲ್ಲಾ ಶಿಕ್ಷಣಾ ಧಿಕಾರಿಗಳಿಗೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ರಾಜ್ಯ ಸರಕಾರಕ್ಕೆ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಹಾನಿಯಾಗಿದ್ದರೂ ಪಾಠ ಪ್ರವಚನ ನಡೆಸಲು ಅಡ್ಡಿಯಾಗಿಲ್ಲ. ಹೀಗಾಗಿ ಬೋಧನೆ ಎಂದಿನಂತೆ ಪಾಠಗಳು ನಡೆಯುತ್ತಿವೆ. ಕೊಠಡಿಗೆ ಹಾನಿಯಾಗಿರುವ ಕೆಲವೆಡೆ ಮಾತ್ರ ಅದೇ ಶಾಲೆಯ ಇನ್ನೊಂದು ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿದೆ.

ದ.ಕ. ಜಿಲ್ಲೆಯಲ್ಲಿ ಅತೀ ಹೆಚ್ಚು
ಉಡುಪಿ ಜಿಲ್ಲೆಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಶಾಲೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಒಟ್ಟು 7 ವಲಯಗಳಲ್ಲಿ 221 ಶಾಲೆ ಗಳಿಗೆ ಹಾನಿಯಾಗಿದೆ. ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿ ರುವ ಅಂಕಿ ಅಂಶದ ಪ್ರಕಾರ ಬಂಟ್ವಾಳ ವಲಯದಲ್ಲಿ ಆಗಿರುವ ಹಾನಿ ಹೆಚ್ಚು. ಮಂಗಳೂರು ದಕ್ಷಿಣ ವಲಯದಲ್ಲಿ 19 ಪ್ರಾಥಮಿಕ, 6 ಪ್ರೌಢ ಸೇರಿ ಒಟ್ಟು 25 ಶಾಲೆ, ಮಂಗಳೂರು ಉತ್ತರದಲ್ಲಿ 16 ಪ್ರಾಥಮಿಕ ಮತ್ತು 3 ಪ್ರೌಢ ಸೇರಿ 19 ಶಾಲೆ, ಬೆಳ್ತಂಗಡಿ ವಲಯದಲ್ಲಿ ಒಟ್ಟು 31 ಶಾಲೆ, ಬಂಟ್ವಾಳದಲ್ಲಿ 68 ಪ್ರಾಥಮಿಕ, 13 ಪ್ರೌಢ ಸೇರಿ 81 ಶಾಲೆ, ಪುತ್ತೂರು ಮತ್ತು ಕಡಬಗಳಲ್ಲಿ 38 ಪ್ರಾಥಮಿಕ ಮತ್ತು 2 ಪ್ರೌಢ ಸೇರಿ 40 ಶಾಲೆ, ಸುಳ್ಯದಲ್ಲಿ 23 ಪ್ರಾಥಮಿಕ ಮತ್ತು 2 ಪ್ರೌಢ ಸೇರಿ 25 ಶಾಲೆಗಳಿಗೆ ಹಾನಿಯಾಗಿದೆ.

ಉಡುಪಿ ಜಿಲ್ಲೆಯಲ್ಲಿ 5 ವಲಯಗಳಿದ್ದು, 115 ಶಾಲೆಗಳಿಗೆ ಹಾನಿಯಾಗಿದೆ. ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ಅಂಕಿ ಅಂಶದ ಪ್ರಕಾರ ಉಡುಪಿ ವಲಯದಲ್ಲಿ 9 ಪ್ರಾಥಮಿಕ, 3 ಪ್ರೌಢ ಸೇರಿ 12 ಶಾಲೆ, ಕುಂದಾಪುರ ಮತ್ತು ಬೈಂದೂರು ವಲಯದ ಅರ್ಧಭಾಗ ಸೇರಿ ಒಟ್ಟು 20 ಶಾಲೆ, ಬ್ರಹ್ಮಾವರದ 7 ಪ್ರಾಥಮಿಕ ಮತ್ತು 1 ಪ್ರೌಢ ಸೇರಿ 8 ಶಾಲೆ, ಕಾರ್ಕಳದಲ್ಲಿ 20 ಪ್ರಾಥಮಿಕ ಮತ್ತು 1 ಪ್ರೌಢ ಸೇರಿ 21 ಶಾಲೆಗಳು, ಬೈಂದೂರು (ಕುಂದಾಪುರ ವಲಯದ ಅರ್ಧಭಾಗ ಸೇರಿ)ನ‌ಲ್ಲಿ ಒಟ್ಟು 51 ಪ್ರಾಥಮಿಕ ಮತ್ತು 3 ಪ್ರೌಢ ಸೇರಿ ಒಟ್ಟು 54 ಶಾಲೆಗಳಿಗೆ ಹಾನಿಯಾಗಿದೆ.

ಎಂದಿನಂತೆ ಪಾಠ
ಮಳೆ – ನೆರೆಯಿಂದಾಗಿ ದ.ಕ. ಜಿಲ್ಲೆಯಲ್ಲಿ 220ಕ್ಕೂ ಹೆಚ್ಚಿನ ಶಾಲೆಗಳಿಗೆ ಹಾನಿಯುಂಟಾಗಿದೆ. ಆದರೆ ಎಲ್ಲ ಕಡೆ ಎಂದಿನಂತೆ ಪಾಠ ನಡೆಯುತ್ತಿದೆ. ಸದ್ಯ ಅಪಾಯದ ಸ್ಥಿತಿಯಲ್ಲಿ ಯಾವುದೇ ಶಾಲೆಗಳಿಲ್ಲ. ಹಾನಿ ಅಂದಾಜು ಲೆಕ್ಕಾಚಾರ ನಡೆಯುತ್ತಿದೆ.
– ವೈ. ಶಿವರಾಮಯ್ಯ ದ.ಕ. ಡಿಡಿಪಿಐ

ರಾಜ್ಯ ಸರಕಾರಕ್ಕೆ ವರದಿ
ಭಾರೀ ಮಳೆ ಮತ್ತು ನೆರೆಯಿಂದಾಗಿ ದ.ಕ. ಜಿಲ್ಲೆಯಲ್ಲಿ ಹಾನಿಗೊಳಗಾದ ಶಾಲೆಗಳ ಬಗೆಗಿನ ವರದಿಯನ್ನು ಈಗಾಗಲೇ ಡಿಡಿಪಿಐ ನೀಡಿದ್ದಾರೆ. ಈ ವರದಿಯನ್ನು ರಾಜ್ಯ ಸರಕಾರಕ್ಕೆ ನೀಡಲಾಗಿದೆ.
ಶಶಿಕಾಂತ್‌ ಸೆಂಥಿಲ್‌
ದ.ಕ. ಜಿಲ್ಲಾಧಿಕಾರಿ

-ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.