ಕರಾವಳಿ ಪಕ್ಷಿಗಳು ಬೇರೆಡೆಗೆ ವಲಸೆ
ಕಲುಷಿತ ನೀರಿನಿಂದ ಜೀವಸಂಕುಲ ವಿನಾಶದತ್ತ
Team Udayavani, Apr 12, 2019, 6:00 AM IST
ಕಲುಷಿತಗೊಂಡ ಬೆಳ್ತಂಗಡಿ ಸೋಮಾವತಿ ನದಿ ನೀರು.
ಬೆಳ್ತಂಗಡಿ: ತಾಪಮಾನ ಬಿಗಡಾಯಿಸುವುದರ ನಡುವೆಯೇ ಕಲುಷಿತ ನದಿ ನೀರಿನಿಂದಾಗಿ ವಲಸೆ ಪಕ್ಷಿಗಳು ಕರಾವಳಿಯತ್ತ ವಿಮುಖವಾಗುತ್ತಿದ್ದರೆ, ಮತ್ತೂಂದೆಡೆ ಕರಾವಳಿ ತೀರದ ಪಕ್ಷಿಗಳೇ ವಲಸೆ ಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ.
ಪಕ್ಷಿ ತಜ್ಞರ ಅಭಿಪ್ರಾಯದಂತೆ ಯುರೋಪ್, ಉತ್ತರ ಅಮೇರಿಕ, ದಕ್ಷಿಣ ಏಷ್ಯಾದಿಂದ ಕರಾವಳಿ ತೀರಕ್ಕೆ ಬರುವ ಅಮುರ್ ಫಾಲ್ಕನ್, ಕೆಂಟಿಶ್, ಗ್ರೇಟ್ ನಾಟ್, ಬಾರ್ ಟೇಲ್ಡ್ ಗಾಡ್ವಿಟ್, ಆಯಿಸ್ಟ್ರ್ ಕ್ಯಾìಚರ್ ವಲಸೆ ಪಕ್ಷಿಗಳು ಈ ಬಾರಿ ಜನವರಿ-ಫೆಬ್ರವರಿಗಾಗಲೇ ಮತ್ತೆ ತನ್ನ ಗೂಡು ಸೇರಿಕೊಂಡಿವೆಯಂತೆ. ಈ ವರ್ಷ ಅತೀವ ತಾಪಮಾನ ಒಂದೆಡೆಯಾದರೆ, ನದಿ ನೀರಿನ ಮಟ್ಟ ಸಂಪೂರ್ಣ ಬತ್ತಿ ಹೋಗಿರುವುದಲ್ಲದೆ, ತ್ಯಾಜ್ಯ ಸೇರುವುದರಿಂದ ನೀರು ಕಲಷಿತಗೊಂಡಿದೆ. ಇದು ಪಕ್ಷಿಗಳ ಆಹಾರದ ಮೂಲಕ್ಕೆ ಹೊಡೆತ ಬಿದ್ದಂತಾಗಿದೆ. ಬಿಸಿಲು ಹೆಚ್ಚಾದರೂ ತಡೆದು ಕೊಳ್ಳುವ ಪಕ್ಷಿಗಳು ನೀರು, ಆಹಾರದ ಸಮಸ್ಯೆಯಾದಾಗ ವಲಸೆ ಪಕ್ಷಿಗಳು ಬೇರೆಡೆ ಸ್ಥಳಾಂತರಗೊಳ್ಳು ತ್ತದೆ.
ನದಿಗಳಿಗೆ ತ್ಯಾಜ್ಯ ಎಸೆಯುವ ಪರಿಣಾಮ ಜಲಚರಗಳು ನಾಶವಾಗುತ್ತಿವೆ. ಇದರಿಂದ ನದಿ ಸಮದ್ರ ಸೇರುವ ಪ್ರದೇಶ ಹಾಗೂ ಗದ್ದೆ, ನದಿ ತೊರೆಗಳಲ್ಲಿ ಮೀನು ಕಪ್ಪೆ, ಹುಳು ಆಶ್ರಯಿಸಿದ ಪಕ್ಷಿಗಳು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಪಕ್ಷಿ ತಜ್ಞರು ಅಭಿಪ್ರಾಯಿಸಿದ್ದಾರೆ.
ಕೊಕ್ಕರೆ ಪ್ರಭೇದಕ್ಕೂ ಆತಂಕ
ಸಾಮಾನ್ಯವಾಗಿ ಗದ್ದೆ ಹಾಗೂ ನದಿ ಸಮೀಪ ಕಾಣಸಿಗುವ ಕೊಕ್ಕರೆ, ನೀರುಕಾಗೆ ಸಂಖ್ಯೆ ಕಡಿಮೆಯಾಗುತ್ತಿದೆ. ಕೊಕ್ಕರೆಯಲ್ಲಿ ಬ್ಲ್ಯಾಕ್ ಸ್ಟಾರ್, ವೈಟ್ ಸ್ಟಾರ್, ಗ್ರೇಟ್ ಈಗ್ರೆಟ್, ಇನ್ಟರ್ ಈಗ್ರೆಟ್, ಲಿಟ್ಲ ಈಗ್ರೆಟ್, ಊಲ್ಲಿ ನೆಕ್ಡ್ ಸ್ಟೋರ್ ಬಹುತೇಕ ವಿರಳವಾಗುತ್ತಿದೆ. ಗದ್ದೆ ಪ್ರದೇಶ ಕಡಿಮೆಯಾಗುತ್ತಲೇ ಗುಬ್ಬಚ್ಚಿಯಂತೆ ಹೋಲುವ ಮುನಿಯಾ ಪಕ್ಷಿಗಳೂ ವಿನಾಶದಂಚಿನಲ್ಲಿವೆ ಎಂದು ಪಕ್ಷಿ ತಜ್ಞ ಅರ್ನಾಲ್ಡ್ ಅಭಿಪ್ರಾಯಿಸಿದ್ದಾರೆ.
ಇನ್ನೊಂದೆಡೆ ನದಿ ಸಮೀಪ ಎಲ್ಲೆಂದರಲ್ಲಿರುತ್ತಿದ್ದ ನೀರು ಕಾಗೆಗಳು ವಿರಳ, ಈಗ ಕುಂದಾಪುರ ಹೊರತುಪಡಿಸಿ ಬೇರೆಲ್ಲೂ ಕಾಣಸಿಗಲಾರವು. ಮರಮಟ್ಟು ಕಡಿಮೆಯಾಗಿರುವುದರಿಂದ ಬಾವಲಿಗಳ ಸಂಖ್ಯೆಯೂ ಕಡಿಮೆಯಾಗಿವೆ.
ನದಿ ನೀರು ಕಲುಷಿತ
ಈಗಾಗಲೇ ಕಾರವಳಿಯ ಬಹುತೇಕ ನದಿಗಳು ಮಾರ್ಚ್ ಆರಂಭದಲ್ಲೇ ಬತ್ತಿಹೋಗಿದ್ದು, ಈ ನಡುವೆ ಹೊಟೇಲ್ ತ್ಯಾಜ್ಯ, ಆಯಿಲ್, ತೋಟಕ್ಕೆ ಬಳಸುವ ರಸಗೊಬ್ಬರ ನದಿ ಸೇರುವುದರಿಂದ ಮೀನು, ಕಪ್ಪೆ, ಏಡಿಗಳ ಮೊಟ್ಟೆಗಳು ನಾಶವಾಗುತಿವೆೆ. ಪರಿಣಾಮವಾಗಿ ಮೀನು ಆಶ್ರಿತ ಪಕ್ಷಿಗಳು ಆಹಾರವಿಲ್ಲದೆ ಕರಾವಳಿ ಪ್ರದೇಶಕ್ಕೆ ಬರಲು ಮನಸ್ಸು ಮಾಡುತ್ತಿಲ್ಲ.
ಇಲ್ಲೇ ವಾಸಿಸುವ ಪಕ್ಷಿಗಳು ಬೇರೆಡೆ ವಲಸೆ ಹೋಗುವ ಅನಿವಾರ್ಯ ಬಂದೊದಗಿರುವುದು ಮುಂದಿನ ದಿನಗಳಲ್ಲಿ ಪಕ್ಷಿ ಸಂಕುಲವೇ ನಶಿಸುವ ಸಾಧ್ಯತೆಯ ಮನ್ಸೂಚನೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಅರಿವು ಮೂಡಿಸಿ
ಹೆಚ್ಚಾಗಿ ವಲಸೆ ಪಕ್ಷಿಗಳು ಮಾರ್ಚ್ ಕೊನೆವರೆಗೆ ಉಳಿಯುತ್ತದೆ. ಆದರೆ ಕಲುಷಿತ ನೀರು ಹಾಗೂ ಆಹಾರ ಸಮಸ್ಯೆಯಿಂದ ಕರಾವಳಿ ತೀರದ ಪಕ್ಷಿಗಳು ಹಾಸನ, ಮೈಸೂರು ಭಾಗಗಳಿಗೆ ವಲಸೆ ಹೋಗುತ್ತಿವೆ. ಇದು ಆತಂಕಕಾರಿ. ಪ್ರಾಣಿ, ಪಕ್ಷಿಗಳ ರಕ್ಷಣೆಗೆ ಅರಿವು ಮೂಡಿಸುವ ಕೆಲಸವಾಗಬೇಕಿದೆ.
ವಿನೀತ್ ಕುಮಾರ್ ಕೆ. ಪಕ್ಷಿ ತಜ್ಞ
ನಾವೇ ಕಾರಣ
ಜಲ ಮಾಲಿನ್ಯ ತಡೆಗಟ್ಟದಿದ್ದಲ್ಲಿ ಮುಂದೊಂದು ದಿನ ಜೀವಸಂಕುಲವೇ ವಿನಾಶದ ಘಟ್ಟ ತಲುಪುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಬಳಸುವ ಬ್ಯಾಟರಿಯಲ್ಲಿ ಟಾಕ್ಸಿನ್ ಅಂಶ ಹೆಚ್ಚಿದ್ದು, ಅದು ನದಿ ನೀರಿಗೆ ಸೇರಿ ಜಲಚರ ಸಾವನ್ನಪ್ಪುತ್ತಿದೆ. ಪಕ್ಷಿಗಳ ಆಹಾರ ಸರಪಣಿಗೆ ಹೊಡೆತ ಬಳುತ್ತಿದ್ದು, ಪಕ್ಷಿಸಂಕುಲ ವಿನಾಶದಂಚಿಗೆ ಸಾಗಲು ನಾವೇ ಕಾರಣರಾಗುತ್ತಿದ್ದೇವೆ ಎಂಬುದನ್ನು ಮನಗಾಣಬೇಕಿದೆ.
ಆರ್ನಾಲ್ಡ್ ಎಂ. ಹಿರಿಯ ಪಕ್ಷಿತಜ್ಞ
ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ