ಕೋಕೋ: ಬೆಲೆ ಏರಬೇಕಾಗಿದ್ದ  ವೇಳೆ ಇಳಿಯುತ್ತಿದೆ!


Team Udayavani, Mar 25, 2017, 3:19 PM IST

2403VTL-Cocoa.jpg

ವಿಟ್ಲ : ಪ್ರತಿ ವರ್ಷವೂ ಮಾರ್ಚ್‌, ಎಪ್ರಿಲ್‌ ಮತ್ತು ಮೇ ತಿಂಗಳು ಕೋಕೋ ಬೆಲೆ ಏರುವ ಹೊತ್ತು. ಆದರೆ ಈ ವರ್ಷ ಮಾರ್ಚ್‌ ತಿಂಗಳಲ್ಲೇ ಬೆಲೆ ಕುಸಿಯುತ್ತಿದೆ. ಇದು ಅನಿರೀಕ್ಷಿತ. ಇದರಿಂದಾಗಿ ಬೆಳೆಗಾರರು ಆತಂಕದಲ್ಲಿದ್ದಾರೆ. 

ಬೇಸಗೆಯಲ್ಲಿ ಕೋಕೋ ಬೆಳೆ ಹೆಚ್ಚು. ಬೆಲೆಯೂ ಹೆಚ್ಚು. ಈ ಅವಧಿಯಲ್ಲಿ ಕೋಕೋವನ್ನು ಒಡೆದಾಗ ನೀರಿನಂಶ ಕಡಿಮೆ ಇರುತ್ತದೆ ಮತ್ತು ಬೀಜ ಒಣಗಿಸುವುದಕ್ಕೆ ಬಿಸಿಲು ಸಹಜವಾಗಿ ಇರುತ್ತದೆ. ಆದುದರಿಂದ ಖರ್ಚು ಕಡಿಮೆ. ಬೆಲೆ ನೇರವಾಗಿ ಬೆಳೆಗಾರನಿಗೇ ತಲುಪುತ್ತದೆ. ಲಾಭ ದೊರೆಯುತ್ತದೆ. ಆದರೆ ಮಳೆ ಆರಂಭವಾದಾಗ ನೀರಿನ ಅಂಶ ಹೆಚ್ಚಾಗುತ್ತದೆ. ಬೀಜ ಒಣಗಿಸುವುದಕ್ಕೆ ಡ್ರೈಯರ್‌ ಬೇಕು. ಖರ್ಚು ಜಾಸ್ತಿ. ರೈತರಿಗೆ ಸಿಗುವ ಲಾಭ ಇಳಿಮುಖವಾಗುತ್ತದೆ.

ಈ ವರ್ಷ ಜನವರಿ, ಫೆಬ್ರವರಿ, ಮಾರ್ಚ್‌ನಲ್ಲಿ ಬೆಲೆ ಹೆಚ್ಚಾಗಿದೆ. ಆದರೆ ಈ ಹಿಂದಿನ ಹೆಚ್ಚಿನ ವರ್ಷಗಳಲ್ಲಿ ಜನವರಿಯಿಂದ ಜೂನ್‌ವರೆಗೆ ಬೆಲೆ ಹೆಚ್ಚಾಗುತ್ತಾ ಹೋಗಿದೆ.ಆದರೆ ಈ ವರ್ಷ ಜನವರಿ (65 ರೂ.) ಮತ್ತು ಫೆಬ್ರವರಿ (65 ರೂ.) ತಿಂಗಳುಗಳಲ್ಲಿ ಒಂದೇ ರೀತಿಯ ದರ ಇತ್ತು. ಆದರೆ ಮಾರ್ಚ್‌ನಲ್ಲಿ ಬೆಲೆ ಕುಸಿತ ಕಂಡಿದೆ. ಫೆಬ್ರವರಿಯಲ್ಲಿ 65 ರೂ. ಗಳಿದ್ದರೆ ಮಾರ್ಚ್‌ನಲ್ಲಿ ಇದು 70-75ರಷ್ಟಾದರೂ ಆಗಬೇಕಿತ್ತು ಎಂಬ ನಿರೀಕ್ಷೆ ರೈತರದ್ದಾಗಿತ್ತು. ಆದರೆ ಇದು ಕಡಿಮೆಯಾಗಿದೆ. ಈಗಲೇ ಇಷ್ಟು ಇಳಿಕೆಯಾಗಿದೆ. ಹಾಗಾಗಿ ಜೂನ್‌ ತಿಂಗಳಲ್ಲಿ ಮತ್ತಷ್ಟು ಕುಸಿಯುವ ಸಂಭವವಿದೆ ಎನ್ನುವ ಭಯ ಬೆಳೆಗಾರರದ್ದು.

ಅಂತಾರಾಷ್ಟ್ರೀಯ ಮಾರುಕಟ್ಟೆ ಕಾರಣ 
ಜಿಲ್ಲೆಯಲ್ಲಿ ಕ್ಯಾಂಪ್ಕೋ ಮತ್ತು ಕ್ಯಾಡ್‌ಬರೀಸ್‌ ಹಾಗೂ ಇತರ ಚಾಕಲೇಟ್‌ ತಯಾರಿಸುವ ಸಂಸ್ಥೆಗಳು ಕೋಕೋವನ್ನು ಖರೀದಿಸುವ ಪ್ರಮುಖ ಸಂಸ್ಥೆಗಳು. ಆದರೆ ಮಾರುಕಟ್ಟೆಯ ಹಿಡಿತ ಈ ಸಂಸ್ಥೆಗಳಲ್ಲಿದೆ ಎನ್ನಲು ಬರುವುದಿಲ್ಲ. ಈ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿವೆ. ಹಾಗಾಗಿ ಕೋಕೋ ಬೆಲೆ ಇಳಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಕಾರಣ ಎಂದು ವಿಶ್ಲೇಷಿಸಲಾಗುತ್ತದೆ.

ಕಡಿಮೆ ಬೆಲೆಗೆ ಬೀಜ ಆಮದು 
ಭಾರತದಲ್ಲಿ ಉತ್ಪಾದನೆಯಾಗುವ ಕೋಕೋ ಇಲ್ಲಿನ ಸಂಸ್ಥೆಗಳ ಬೇಡಿಕೆಯನ್ನು ಪೂರೈಸಲು ಸಾಕಾಗುತ್ತಿಲ್ಲ. ಹಾಗಾಗಿ ಸಾಮಾನ್ಯವಾಗಿ ಇಂತಹ ಸಂಸ್ಥೆಗಳು ಹೊರದೇಶದಿಂದ ಆಮದು ಮಾಡಿಕೊಳ್ಳುತ್ತವೆ. ಆದರೆ ಈ ಬಾರಿ ಭಾರತದಲ್ಲಿ ಕೋಕೋ ಬೆಳೆ ಹೆಚ್ಚಾಗಿದೆ. ಆದಾಗ್ಯೂ ಕೋಕೋದಿಂದ ಉತ್ಪನ್ನ ಮಾಡುವ ಸಂಸ್ಥೆಗಳು ಈ ಬಾರಿ ಭಾರತದ ಕೋಕೋಗಿಂತಲೂ ಹೊರದೇಶದ ಕೋಕೋವನ್ನೇ ಬಳಸುತ್ತಿವೆ. ಯಾಕೆಂದರೆ ಹೊರದೇಶದಲ್ಲಿ ಕಡಿಮೆ ಬೆಲೆಗೆ ಸಿಗುತ್ತಿದೆ. ಇದು ಭಾರತದ ಕೋಕೋ ಮಾರುಕಟ್ಟೆ ಕುಸಿಯಲು ಕಾರಣವಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆಯ ತಜ್ಞರು ಅಭಿಪ್ರಾಯಪಡುತ್ತಾರೆ.

ಗಿಡಗಳನ್ನು ಕಡಿಯಬೇಕೆ?
ಕೋಕೋಗೆ ಬೆಲೆ ಬರುವ ಹೊತ್ತಲ್ಲಿ ಬೆಲೆ ಬಂದಿಲ್ಲ. ನಮ್ಮ ನಿರೀಕ್ಷೆಗಳು ಹುಸಿಯಾಗಿವೆ. ಈ ಕುಸಿತ ಮುಂದುವರಿದರೆ ಕೋಕೋ ಬೆಳೆಗಾರರು ಭಾರೀ ನಷ್ಟ ಹೊಂದಬೇಕಾಗುತ್ತದೆ. ಬೆಲೆ ಇಲ್ಲ ಎಂಬ ಕಾರಣಕ್ಕೆ ಕೋಕೋ ಗಿಡಗಳನ್ನು ಕಡಿಯಬೇಕೇ?
-ಸೇರಾಜೆ ಸುಬ್ರಹ್ಮಣ್ಯ ಭಟ್‌,  ಕೋಕೋ ಬೆಳೆಗಾರರು

ಕಳೆದ ವರ್ಷಗಳಲ್ಲಿ 
ಕೋಕೋ ದರ (ಕೆ.ಜಿ.ಗೆ -ರೂ.ಗಳಲ್ಲಿ )

2014: ಜ.-50, ಫೆ. – 55, ಮಾ. -60,  ಎ.-65   ಮೇ -67, ಜೂ.-62 .
2015 : ಜ.-55, ಫೆ.-55, ಮಾ.-60, ಎ.- 65, ಮೇ – 65, ಜೂ.-60
2016: ಜ.-50, ಫೆ. 58, ಮಾ.-59, ಎ.- 60, ಮೇ -60, ಜೂ.-57
2017: ಜ.-65, ಫೆ.-65, ಮಾ.-60.

– ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.