ಮುಡಿಪು ಬಳಿ ಅಕ್ರಮ ಗೋ ಸಾಗಾಟವನ್ನು ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ ಹಿಂದೂಪರ ಕಾರ್ಯಕರ್ತರು
Team Udayavani, Jan 12, 2021, 11:46 PM IST
ಉಳ್ಳಾಲ: ಕೋಟೆಕಾರ್ ಕಡೆಯಿಂದ. ಬಾಕ್ರಬೈಲ್ ಸಾಗಿಸುತ್ತಿದ್ದ ಅಕ್ರಮ ಗೋ ಸಾಗಾಟವನ್ಬು ಮುಡಿಪು ಬಳಿ ಹಿಂದೂಪರ ಕಾರ್ಯಕರ್ತರು ತಡೆಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಟೆಕಾರು ಡೈರಿಯಿಂದ, ಬಾಕ್ರಬೈಲು ಡೈರಿಗೆ ಕೊಂಡೊಯ್ಯಲಾಗುತ್ತಿದ್ದ ಆರು ಹಸುಗಳು, ಒಂದು ಕರುವನ್ನು ಸಾಗಾಟ ನಡೆಸುತ್ತಿದ್ದ, ಸಾಗಾಟಗಾರರು ಈ ಗೋವುಗಳನ್ಬು ಸಾಕಲು ಸಾಗಿಸುತ್ತಿದ್ದೇವೆ ಎಂದು ತಿಳಿಸಿದ್ದು, ಸಾಗಾಟಕ್ಕೆ ಸಂಬಂದಿಸಿದ ಕೆಲವೊಂದು ದಾಖಲೆಗಳನ್ಬು ಇಟ್ಟುಕೊಂಡಿದ್ದು, ಕೆಲವು ದಾಖಲೆಗಳಿರಲಿಲ್ಲ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಾಗಾಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.