ಕ್ರಿಕೆಟ್: ಪೊಲೀಸ್ ತಂಡಕ್ಕೆ ಗೆಲುವು
Team Udayavani, Dec 25, 2017, 11:13 AM IST
ಮಹಾನಗರ: ಜಿಲ್ಲೆಯ ಪೊಲೀಸರು ಮತ್ತು ಪತ್ರಕರ್ತರ ನಡುವೆ ಕ್ರಿಕೆಟ್ ಪಂದ್ಯಾಟ ರವಿವಾರ ನಗರದ ನೆಹರೂ ಮೈದಾನದಲ್ಲಿ ನಡೆಯಿತು. ಒಟ್ಟು 4 ತಂಡಗಳು ಭಾಗವಹಿಸಿದ್ದವು. ಪಂದ್ಯಾಟವನ್ನು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮತ್ತು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಉದ್ಘಾಟಿಸಿದರು.
4 ತಂಡಗಳು
ಪಂದ್ಯಾಟದಲ್ಲಿ ಎಸ್ಪಿ ನೇತೃತ್ವದ ದ.ಕ. ಪೊಲೀಸ್ ತಂಡ, ಮಾರುತಿ ನಾಯ್ಕ ನೇತೃತ್ವದ ಪೊಲೀಸ್ ಕಮಿಷನರ್ ತಂಡ, ನಗರ ಪತ್ರಕರ್ತರ ತಂಡ, ಗ್ರಾಮೀಣ ಪತ್ರಕರ್ತರ ತಂಡಗಳು ಭಾಗವಹಿಸಿದವು. ಸೆಮಿಫೈನಲ್ನಲ್ಲಿ ಸಿಟಿ ಪೊಲೀಸ್ ಮತ್ತು ಎಸ್ಪಿ ತಂಡಗಳ ಮಧ್ಯೆ ಹಣಾಹಣಿಯಲ್ಲಿ ಎಸ್ಪಿ ತಂಡ ಜಯಗಳಿಸಿ ಫೈನಲ್ಗೇರಿತು.
ಫೈನಲ್ ಪಂದ್ಯದಲ್ಲಿ ಎಸ್ಪಿ ಮತ್ತು ಗ್ರಾಮೀಣ ಪತ್ರಕರ್ತರ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಗ್ರಾಮೀಣ ಪತ್ರಕರ್ತರ ತಂಡ 8 ಓವರ್ನಲ್ಲಿ 36ರನ್ ಕಲೆ ಹಾಕಿತು. ಅದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಎಸ್ಪಿ ತಂಡ 6 ಓವರ್ನಲ್ಲಿ ವಿಜಯ ಗಳಿಸುವ ಮೂಲಕ ವಿಜಯಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ