Mangaluru ಬ್ಯಾಂಕ್ ಉದ್ಯೋಗಿ ಮೃತದೇಹ ಹೊಟೇಲಿನ ಈಜುಕೊಳದಲ್ಲಿ ಪತ್ತೆ
Team Udayavani, Sep 12, 2023, 12:08 AM IST
ಮಂಗಳೂರು: ಕೇರಳದ ತಿರುವನಂತಪುರದ ನಿವಾಸಿ, ಬ್ಯಾಂಕ್ ಉದ್ಯೋಗಿ ಗೋಪು ಆರ್. ನಾಯರ್(38) ಅವರ ಮೃತದೇಹ ನಗರದ ಫಳ್ನೀರ್ ಸಮೀಪದ ಹೊಟೇಲೊಂದರ ಈಜುಕೊಳದಲ್ಲಿ ಪತ್ತೆಯಾಗಿದೆ.
ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ರವಿವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ್ದ ಅವರು ಹೊಟೇಲ್ನಲ್ಲಿ ಉಳಿದುಕೊಂಡಿದ್ದರು. ಸಂಜೆ 4 ಗಂಟೆಗೆ ಈಜುಕೊಳಕ್ಕೆ ತೆರಳಿದ್ದರು. ಮದ್ಯ ಸೇವಿಸಿದ ಕಾರಣ ಈಜುವಾಗ ನಿಯಂತ್ರಣ ಕಳೆದು ಮುಳುಗಿ ಮೃತಪಟ್ಟಿ ರುವ ಸಾಧ್ಯತೆ ಇದೆ. ಮೃತದೇಹವನ್ನು ಬೆಳಗ್ಗೆ ಹೊಟೇಲ್ ಸಿಬಂದಿ ಪತ್ತೆ ಮಾಡಿದ್ದಾರೆ.
ಹೊಟೇಲ್ನಲ್ಲಿ ಅವರೊಬ³ರೇ ಉಳಿದುಕೊಂಡಿ ದ್ದರು. ಕೊಠಡಿಯಲ್ಲಿ ಮದ್ಯದ ಖಾಲಿ ಬಾಟಲಿ ಪತ್ತೆಯಾಗಿದೆ. ಘಟನೆಯ ದೃಶ್ಯ ಹೊಟೇಲ್ನ ಸಿಸಿ ಕೆಮರಾದಲ್ಲಿ ದಾಖಲಾಗಿದೆೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.