ವಿನ್ಯಾಸ ಅನುಮೋದನೆ ಮತ್ತೆ ಯೋಜನಾ ಪ್ರಾಧಿಕಾರಗಳ ಹೆಗಲಿಗೆ
ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ಗಳ ಅಧಿಕಾರ ಬದಲು
Team Udayavani, Jan 30, 2024, 6:30 AM IST
ಮಂಗಳೂರು: ಜಮೀನು ವಿನ್ಯಾಸ ಅನು ಮೋದನೆಯನ್ನು ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳಿಂದ ಮತ್ತೊಮ್ಮೆ ಕಿತ್ತುಕೊಂಡಿರುವ ನಗರಾಭಿವೃದ್ಧಿ ಇಲಾಖೆ ಆ ಅಧಿಕಾರವನ್ನು ಹಿಂದಿ ನಂತೆಯೇ ನಗರಾಭಿವೃದ್ಧಿ, ಯೋಜನಾ ಪ್ರಾಧಿಕಾರಗಳಿಗೆ ನೀಡಿ ಆದೇಶಿಸಿದೆ.
ಇನ್ನು ಮುಂದೆ 25 ಸೆಂಟ್ಸ್ ವರೆಗೆ ಗ್ರಾ.ಪಂ. ಹಾಗೂ 25 ಸೆಂಟ್ಸ್ನಿಂದ 1 ಎಕ್ರೆ ವರೆಗೆ ತಾ.ಪಂ.ನಲ್ಲಿ ವಿನ್ಯಾಸ ಅನುಮೋದನೆ ಸಿಗದು. ಅದಕ್ಕೆ ಸಾರ್ವಜನಿಕರು ಜಿಲ್ಲಾ ಕೇಂದ್ರದಲ್ಲಿರುವ ನಗರಾಭಿವೃದ್ಧಿ/ಯೋಜನಾ ಪ್ರಾಧಿಕಾರಕ್ಕೆ ತೆರಳಬೇಕಿದೆ.
ಇದರ ಮಧ್ಯೆ ನಗರಾಭಿವೃದ್ಧಿ ಇಲಾಖೆ ಆದೇಶ ಬಂದಿದ್ದು, ಇನ್ನೂ ಗ್ರಾಮೀಣಾಭಿವೃದ್ಧಿ ಇಲಾಖಾ ವಲಯದಿಂದ ಯಾವುದೇ ಸೂಚನೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಆದೇಶವನ್ನು ಜಾರಿಗೊಳಿಸಬೇಕೇ ಬೇಡವೇ ಎಂಬ ಜಿಜ್ಞಾಸೆಯಲ್ಲಿ ಗ್ರಾ.ಪಂ., ಸ್ಥಳೀಯ ಸಂಸ್ಥೆಗಳು ಮುಳುಗಿವೆ.
ಯಾಕೆ ಬದಲಾವಣೆ?
ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗ್ರಾ.ಪಂ./ನಗರ ಸ್ಥಳೀಯ ಸಂಸ್ಥೆಗಳಿಂದ ವಿನ್ಯಾಸ ಮಂಜೂರಾಗಿದ್ದು, ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆಯ ಅವಕಾಶಕ್ಕೆ ವ್ಯತಿರಿಕ್ತವಾಗಿ ದ್ದಾಗಿದೆ ಎಂದು ನ. 15ರಂದು ನಡೆದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭ ಹೈಕೋರ್ಟ್ ಅಭಿ ಪ್ರಾಯಪಟ್ಟಿತ್ತು. ಈ ಅನುಮೋದನೆಯ ವಿರುದ್ಧ ದೂರು ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿನ್ಯಾಸ ನಕ್ಷೆ ಮತ್ತು ಖಾತೆಗಳನ್ನೇ ರದ್ದುಗೊಳಿಸಿ ಆದೇಶಿಸಲಾಗಿದೆ. ಇಂಥ ಸಮಸ್ಯೆಯನ್ನು ನಿಯಂತ್ರಿಸಲು ಹಾಗೂ ಭವಿಷ್ಯದಲ್ಲಿ ಪುನರಾವರ್ತಿಯಾಗದಂತೆ ತಡೆಗಟ್ಟಲು ಸರಕಾರದಿಂದ ವಿವರಣೆ ಕೋರಲಾಗಿತ್ತು. ಸ್ಥಳೀಯ ಯೋಜನಾ ಪ್ರದೇಶವ್ಯಾಪ್ತಿಯಲ್ಲಿ ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 17ರಡಿಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳು ವಿನ್ಯಾಸ ಅನುಮೋದಿಸಲಿವೆ. ಈ ಅಧಿಕಾರ ಗ್ರಾ.ಪಂ. ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಹೇಳಿದೆ.
ಗ್ರಾ.ಪಂ.ಗಳು/ನಗರ ಸ್ಥಳೀಯ ಸಂಸ್ಥೆಗಳು ಯೋಜನಾ ಪ್ರಾಧಿಕಾರ/ನಗರಾಭಿವೃದ್ಧಿ ಪ್ರಾಧಿಕಾರ ದಿಂದ ವಿನ್ಯಾಸ ಅನುಮೋದನೆ ಪಡೆದಿರುವುದನ್ನು ಖಚಿತಪಡಿಸಿದ ಬಳಿಕವೇ ಖಾತಾ ನೀಡಬೇಕು ಎಂದು ಸೂಚಿಸಲಾಗಿದೆ.
ಅಧಿಕಾರ ನೀಡಿ ವಾಪಸ್!
9/11 ದೊರೆಯಲು ಆಗಬೇಕಾದ ವಿನ್ಯಾಸ ಅನುಮೋದನೆಯನ್ನು 2014ರ ಬಳಿಕ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಮಾಡಬೇಕಿತ್ತು. 2016ರಲ್ಲಿ ಇದನ್ನು ಪರಿಷ್ಕರಿಸಿ 1 ಎಕ್ರೆ ವರೆಗೆ ತಾ.ಪಂ.ಗೇ ಅನುಮೋದನೆ ಅಧಿಕಾರ ನೀಡಲಾಯಿತು. ಡಿಸೆಂಬರ್ ವೇಳೆಗೆ ಅದೂ ಬದಲಾಗಿ 25 ಸೆಂಟ್ಸ್ ವರೆಗೆ ಗ್ರಾ.ಪಂ. ಹಾಗೂ 1 ಎಕ್ರೆ ವರೆಗೆ ತಾ.ಪಂ. ಅನುಮೋದನೆ ಅಧಿಕಾರ ನೀಡಲಾಯಿತು. 2022ರಲ್ಲಿ ಮತ್ತೆ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಗೇ ಆ ಅಧಿಕಾರ ಸಿಕ್ಕಿತು. 2 ತಿಂಗಳಲ್ಲಿ ಮತ್ತೆ ಬದಲಾವಣೆ ಆಗಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ಗಳಿಗೆ ಅಧಿಕಾರ ನೀಡಲಾಯಿತು. ಈಗ ಅದು ಮತ್ತೆ ಬದಲಾವಣೆ ಆಗಿದೆ.
2014ರ ಮೊದಲು ಇದೇ ಕ್ರಮ ಇತ್ತು. ಬಳಿಕ ಬದಲಾವಣೆ ಆಗಿ ಗ್ರಾ.ಪಂ. ಹಾಗೂ ತಾ.ಪಂ. ವ್ಯಾಪ್ತಿಯಲ್ಲಿ ಅನುಮೋದನೆಗೆ ಅವ ಕಾಶ ನೀಡಿದ್ದು, ಈಗ ಮತ್ತೆ ಹಳೆಯ ವಿಧಾನವನ್ನು ಅನುಸರಿಸಲು ನಗರಾಭಿವೃದ್ಧಿ ಇಲಾಖೆ ಸೂಚಿಸಿದೆ. ಆದರೆ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಯಾವುದೇ ಸೂಚನೆ ಬಂದಿಲ್ಲ.
-ಡಾ| ಕೆ. ಆನಂದ್, ಸಿಇಒ, ದ.ಕ. ಜಿಲ್ಲಾ ಪಂಚಾಯತ್
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
MUST WATCH
ಹೊಸ ಸೇರ್ಪಡೆ
ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ