Toll Gate ಅಪರಿಮಿತ ಸುಲಿಗೆಯ ಮುನ್ಸೂಚನೆ: ವಾಹನ ಮುಷ್ಕರದ ಭೀತಿ


Team Udayavani, Jan 30, 2024, 6:45 AM IST

Toll Gate ಅಪರಿಮಿತ ಸುಲಿಗೆಯ ಮುನ್ಸೂಚನೆ: ವಾಹನ ಮುಷ್ಕರದ ಭೀತಿ

ಪಡುಬಿದ್ರಿ: ನವಯುಗ ನಿರ್ಮಾಣ ಕಂಪೆನಿಯನ್ನು ಖರೀದಿಸಿರುವ ಮುಂಬಯಿ ಮೂಲದ ಕೆಕೆಆರ್‌ ಕಂಪೆನಿಯು ಆರು ತಿಂಗಳುಗಳ ಬಳಿಕ ಇದೀಗ ಕರಾವಳಿ ಜಿಲ್ಲೆಯ ಟೋಲ್‌ಗ‌ಳಲ್ಲಿ ಅಪರಿಮಿತ ಸುಲಿಗೆಯ ಮುನ್ಸೂಚನೆ ನೀಡಿದೆ. ಸ್ಥಳೀಯ ಜನತೆ ಮತ್ತೆ ಮುಷ್ಕರದ ಭೀತಿಯಲ್ಲಿದ್ದಾರೆ.

ಈಗಾಗಲೇ ಜಿಲ್ಲೆಯ ಖಾಸಗಿ ಬಸ್‌ ಮಾಲಕರನೇಕರು ತಮ್ಮ ಹೆವಿ ಮೊಟಾರು ವಾಹನಗಳನ್ನು ಮಾರಿ ಟೋಲ್‌ ಬರೆ ಇಳಿಸಿಕೊಳ್ಳುವ ನಿಟ್ಟಿನಲ್ಲಿ ಟಾಟಾ709, 807 ವಾಹನಗಳನ್ನು ಬಸ್‌ ಗಳನ್ನಾಗಿ ಪರಿವರ್ತಿಸಿ ಕರಾವಳಿ ಜಿಲ್ಲೆಗಳಲ್ಲಿ ತಮ್ಮ ಅಸ್ಮಿತೆ ಯನ್ನು ಮುಂದುವರಿಸಿದ್ದರು. ಈಗ ಅಂತಹಾ ವಾಹನಗಳಿಗೂ ಘನ ವಾಹನಗಳಷ್ಟೇ ಟೋಲ್‌ ಪಾವತಿಸಬೇಕಾಗಿದೆ. ಹಾಗಾಗಿ ತಾವು ಮುಂದಿನ ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡು ಸಂಪು ನಡೆಸು ವುದಾಗಿ ಬಸ್‌ ಮಾಲಕರ ಸಂಘಟನೆಯು ತಿಳಿಸಿದೆ.

ಇದೇ ವೇಳೆ ಹೆಜಮಾಡಿಯಲ್ಲಿ ಸ್ಥಳೀಯರಿಗೆ ಟೋಲ್‌ವುುಕ್ತ ಸಂಚಾರ ವಿರುವುದನ್ನೂ ಟೋಲ್‌ ಆಡಳಿತವು ಗಮನಿಸಿ ಇದನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲು ಯೋಚಿಸುತ್ತಿದೆ. ಜಿಲ್ಲೆಯ ಮೂರೂ ಟೋಲ್‌ಗ‌ಳಲ್ಲಿನ ಉಚಿತ ಪ್ರವೇಶವನ್ನು ಪ್ರತಿಬಂಧಿ ಸಲೂ ಕೆಕೆಆರ್‌ ಆಡಳಿತವು ಮುಂದಾಗುವ ಸೂಚನೆಗಳೂ ದೊರೆತಿವೆ. ಈಗಾಗಲೇ ಮುಕ್ತವಾಗಿ ಸಂಚರಿಸುತ್ತಿದ್ದ ವಾಹನಗಳಿಗೂ ಮನೆ ತಲುಪಿದ ಬಳಿಕ ಹೆದ್ದಾರಿ ಸುಂಕ ಪಾವತಿಯಾಗಿರುವ ಸಂದೇಶಗಳು ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಬಸ್‌, ಲಾರಿ ಮುಂತಾದ ಘನ ವಾಹನಗಳ ಭಾರದ ಆಧಾರ ದಲ್ಲೇ ತೆರಿಗೆ ಸಂಗ್ರಹಿಸುವ ಯೋಜನೆಯನ್ನೂ ಹಾಕಿಕೊಂಡಿರು ವುದಾಗಿಯೂ ಮಾಹಿತಿಗಳು ಹೊರಬಿದ್ದಿವೆ.

ಟೋಲ್‌ಪ್ಲಾಜಾದ ಆಡಳಿತವು ಕರಾವಳಿ ಜಿಲ್ಲೆಯಲ್ಲಿ ಹೆದ್ದಾರಿ ಸುಂಕ ವಸೂಲಿಗೆ ಯಾವುದೇ ಅಡೆತಡೆಗಳಿಲ್ಲವೆಂಬ ನಿರ್ಧಾರಕ್ಕೆ ಈಗಾಗಲೇ ಬಂದಂತಿದ್ದು ಈ ಕುರಿತ ಮಾಹಿತಿ ಯನ್ನೂ ತನ್ನ ಮುಖ್ಯ ಕಚೇರಿಗೆ ರವಾನಿಸಿದೆ. ಕರಾವಳಿ ಜನತೆಗೆ ಮತ್ತೂಂದು ಬರೆಯನ್ನೆ ಳೆಯಲು ಟೋಲ್‌ ಪ್ಲಾಝಾ ಆಡಳಿತವು ಮುಂದಾಗಿರುವುದು ನಿಧಾನವಾಗಿ ಯಾದರೂ ಸ್ಪಷ್ಟವಾಗುತ್ತಿದೆ.

ಟೋಲ್‌ ಅವಶೇಷ ಕೊನೆಗೂ ತೆರವು:
ಎನ್‌ಐಟಿಕೆ ಸಮೀಪ ಸಂಚಾರ ಸರಾಗ
ಸುರತ್ಕಲ್‌ ಇಲ್ಲಿನ ಎನ್‌ಐಟಿಕೆ ಸಮೀಪದ ಟೋಲ್‌ ಕೇಂದ್ರದಲ್ಲಿ ಸುಂಕ ವಸೂಲಿ ನಿಂತ ಬಳಿಕವೂ ತುಂಬ ಸಮಯದಿಂದ ಅಪಾಯಕಾರಿಯಾಗಿ ಉಳಿದಿದ್ದ ಅವಶೇಷಗಳನ್ನು ಕೊನೆಗೂ ತೆರವು ಮಾಡಲಾಗಿದೆ. ರಸ್ತೆ ಮೇಲಿದ್ದ ಬೂತ್‌ ಬೆಡ್‌, ರಸ್ತೆ ವಿಭಾಜಕ, ರಸ್ತೆ ಉಬ್ಬುಗಳ ಸಹಿತ ಎಲ್ಲ ಪಳಿಯುಳಿಕೆಗಳು ತೆರವಾಗಿ ಸಂಚಾರ ಸುಗಮವಾಗಿದೆ.

ಸುಂಕ ವಸೂಲಿ ನಿಂತ ವರ್ಷಗಳ ಬಳಿಕ ಶೆಲ್ಟರನ್ನು ಇತ್ತೀಚೆಗೆ ಕಳಚಿದ್ದರೂ ರಸ್ತೆಯ ಮೇಲಿರುವ ಡಿವೈಡರ್‌ ಹಾಗೂ ಬೂತ್‌ ಬೆಡ್‌ ಹಾಗೆಯೇ ಉಳಿದು ಅವುಗಳಿಗೆ ವಾಹನ ಢಿಕ್ಕಿ ಹೊಡೆಯುತ್ತಿದ್ದವು. ಅವಶೇಷಗಳಿಂದಾಗಿ ಒಂದು ತಿಂಗಳಲ್ಲಿ ಬರೋಬ್ಬರಿ 6 ಅಪಘಾತಗಳು ಸಂಭವಿಸಿದ ದಾಖಲೆಯೂ ಇದೆ. ಇಲ್ಲಿ ಬೀದಿ ದೀಪವೂ ಇಲ್ಲದಿರುವುದೂ ಅಪಘಾತ ಹೆಚ್ಚಳಕ್ಕೆ ಕಾರಣವಾಗಿತ್ತು. ಈ ಬಗ್ಗೆ ಉದಯವಾಣಿ ಸವಿವರ ವರದಿ ಮಾಡಿ ಗಮನ ಸೆಳೆದಿತ್ತು.
“ಶುಲ್ಕ ವಸೂಲಾತಿ ಕೇಂದ್ರ’ ಎಂಬ ಎರಡು ಬೃಹತ್‌ ಫ‌ಲಕಗಳು ಮಾತ್ರ ಈಗಲೂ ರಾರಾಜಿಸುತ್ತಿವೆ. ಇದರಿಂದ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಟೋಲ್‌ ಕೇಂದ್ರ ಇತ್ತೆಂಬ ಮಾಹಿತಿ ಕೊಡುತ್ತಿದೆ. ಈ ಭಾಗದಲ್ಲಿ ದಾರಿ ದೀಪದ ಕೊರತೆಯನ್ನು ನಿವಾರಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.

ಎನ್‌ಐಟಿಕೆಯ ನೂರಾರು ವಿದ್ಯಾರ್ಥಿಗಳು ರಸ್ತೆ ದಾಟುವ ಪ್ರಮುಖ ಸ್ಥಳ ಇದಾಗಿದ್ದು, ವಾಹನಗಳು ವೇಗವಾಗಿ ಬರುವ ಸಂದರ್ಭ ಅವಘಡ ಸಂಭವಿಸದಂತೆ ರಕ್ಷಣೆ ಒದಗಿಸಬೇಕಿದೆ.

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.