ಧರ್ಮಸ್ಥಳ: ಶಿವಪಂಚಾಕ್ಷರಿ ಜಪ ಅಂತರಂಗ ದರ್ಶನಕ್ಕೆ ಶಿವರಾತ್ರಿ
Team Udayavani, Feb 25, 2017, 10:07 AM IST
ಬೆಳ್ತಂಗಡಿ: ದೇಹ, ಆತ್ಮ ಪ್ರತ್ಯೇಕವಾಗಿ ಯಾವುದು ಎಂದು ಗುರುತಿಸಿಕೊಳ್ಳಲು ದೇವೋಪಾಸನೆ ಸಹಾಯಕ. ನನ್ನೊಳಗಿನ ನಾನು ಯಾರೆಂದು ಗುರುತಿಸಿಧಿಕೊಂಡು ಅಂತರಂಗ ದರ್ಶನ ಮಾಡಿಕೊಳ್ಳಲು ಶಿವರಾತ್ರಿ ಧ್ಯಾನ ಪೂರಕ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶುಕ್ರವಾರ ರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಶಿವಪಂಚಾಕ್ಷರಿ ಜಪ ಪಠನ ಉದ್ಘಾಟಿಸಿ ಮಾತನಾಡಿದರು. ಭಗವಂತ ನಮಗೆ ಏನೇ ಕೊಟ್ಟರೂ ನಮಗೆ ಅದರ ಬೆಲೆ ತಿಳಿದಿರಬೇಕು. ಇಲ್ಲದಿದ್ದರೆ ಸದ್ವಿನಿಯೋಗ ಅಸಾಧ್ಯ. ನಮ್ಮ ಬದುಕನ್ನು ದುವ್ಯìಸನಗಳಿಗೆ ಬಲಿ ಕೊಡಧಿಬಾರದು. ನಾವು ಇತರರನ್ನು ಗೌರವಿಸಿ, ಪ್ರೀತಿಸಿದರೆ ನಾವೂ ಗೌರವಕ್ಕೆ ಪಾತ್ರರಾಗುತ್ತೇವೆ. ಸಹಸ್ರಾರು ವರ್ಷಧಿಗಳಿಂದ ಶಿವರಾತ್ರಿ ಬರುತ್ತಿದ್ದರೂ ಅದು ಹಳತಾಗದು, ಮಹಿಮೆ ನಿತ್ಯನೂತನಧಿವಾಗಿರುತ್ತದೆ. ಏಕಾಗ್ರತೆ ಭಕ್ತಿ ಶ್ರದ್ಧೆಯ ಸೇವೆಯಿಂದ ಸತ#ಲ ದೊರೆಯುತ್ತದೆ. 1 ದಿನವನ್ನು ಭಗವಂತನ ಆರಾಧನೆಗೆ ಮೀಸಲಿಡೋಣ. ಹೊಟ್ಟೆ ಪಾಡಿಗಾಗಿ ಆಯುಷ್ಯ ಮೀಸಲಿಟ್ಟ ನಾವು ಕೆಲವು ದಿನವಾದರೂ ಭಗವಂತನ ಸೇವೆ ಮೂಲಕ ಆತೊ¾àನ್ನತಿಧಿಗಾಗಿ ವಿನಿಯೋಗಿಸೋಣ. ಜೀವನ ಅಮೂಲ್ಯಧಿವಾದುದು. ಆಯುಷ್ಯದ ಬೆಲೆ ತಿಳಿದಿದ್ದರೆ ಮಾತ್ರ ಸದ್ವಿನಿಯೋಗ ಸಾಧ್ಯ ಎಂದು ಹೇಳಿದರು.
ಯಾವುದೇ ಪುಣ್ಯ ಕ್ಷೇತ್ರವನ್ನು ಮಲಿನ ಮಾಡಬೇಡಿ. ಈ ಬಾರಿ ಧಾರ್ಮಿಕ ಕೇಂದ್ರ ಸ್ವತ್ಛತಾ ಅಭಿಯಾನದಲ್ಲಿ ರಾಜ್ಯದಲ್ಲಿ 7 ಲಕ್ಷ ಸ್ವಯಂ ಸೇವಕರು 8 ಸಾವಿರ ಧಾರ್ಮಿಕ ಕೇಂದ್ರಗಳ ಸ್ವತ್ಛತೆ ನೆರವೇರಿಸಿದ್ದಾರೆ. ಇದು ನಿರಂತರ ನಡೆಯಬೇಕು. ಪ್ರತಿಯೊಬ್ಬ ಯಾತ್ರಿಯೂ ಸ್ವತ್ಛತಾ ಅಭಿಯಾನದ ಪಣ ತೊಡಬೇಕು. ಸ್ವತ್ಛತೆಯಿಂದ ಕ್ಷೇತ್ರದ ಪಾವಿತ್ರ್ಯ ವೃದ್ಧಿಯಾಗುತ್ತದೆ ಎಂದರು.
ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಸುಪ್ರಿಯಾ ಹಷೇìಂದ್ರ ಕುಮಾರ್, ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಹನುಮಂತಪ್ಪ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು