Mangaluru University; ಪಿಯು ಫ‌ಲಿತಾಂಶ ಬಂದರೂ ಪದವಿ ತರಗತಿಗೆ ಕಾಯಲೇಬೇಕು!

ಮಂಗಳೂರು ವಿ.ವಿ.: ನಿಗದಿತ ಅವಧಿಗೆ ಕಾಲೇಜು ಆರಂಭ ಕಷ್ಟ

Team Udayavani, Apr 11, 2023, 7:10 AM IST

ಪಿಯು ಫ‌ಲಿತಾಂಶ ಬಂದರೂ ಪದವಿ ತರಗತಿಗೆ ಕಾಯಲೇಬೇಕು!

ಮಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಇನ್ನು ಕೆಲವೇ ದಿನಗಳಲ್ಲಿ ಪ್ರಕಟಗೊಂಡರೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳು ಪದವಿ ತರಗತಿಗಳ ಆರಂಭಕ್ಕೆ ತಿಂಗಳುಗಟ್ಟಲೆ ಕಾಯಲೇಬೇಕು!

ಎಪ್ರಿಲ್‌ ಅಥವಾ ಮೇ ತಿಂಗಳಿನಲ್ಲಿ ದ್ವಿತೀಯ ಪಿಯು ಫಲಿತಾಂಶ ಬಂದು ಜೂನ್‌ನಲ್ಲಿ ಕಾಲೇಜು ಆರಂಭ ಈ ಹಿಂದಿನ ನಿಯಮ. ಆದರೆ ಕೊರೊನಾ ಕಾರಣದಿಂದ ಕಾಲೇಜು ಆರಂಭ ತಿಂಗಳುಗಟ್ಟಲೆ ತಡ ವಾಗಿದ್ದು, ಇದು ಈ ಬಾರಿಯೂ ಮುಂದು ವರಿಯುವ ಎಲ್ಲ ಲಕ್ಷಣಗಳಿವೆ.

2023-24ರ ಶೈಕ್ಷಣಿಕ ವರ್ಷ ಆ. 1ರಿಂದ ಆರಂಭ ಎಂದಿತ್ತು. ಆದರೆ ಇತ್ತೀಚೆಗೆ ಯುಜಿ ಮೌಲ್ಯ ಮಾಪನ ತಡವಾದ್ದರಿಂದ ಹೊಸ ಶೈಕ್ಷಣಿಕ ವರ್ಷವನ್ನು ಆ. 15ಕ್ಕೆ ಮುಂದೂಡಲಾಗಿದೆ. ಸದ್ಯ ತರಗತಿ ಮುಗಿದು ಪರೀಕ್ಷೆ ನಡೆಯಲು ಜೂನ್‌ ವರೆಗೆ ಕಾಯಬೇಕು. ಬಳಿಕ ಮೌಲ್ಯಮಾಪನ. ಅನಂತರ ಕೆಲವು ದಿನ ರಜೆ. ಈ ಮಧ್ಯೆ ಹೊಸದಾಗಿ ಕಾಲೇಜಿಗೆ ಸೇರಿದರೂ ಅವರಿಗೆ ತರಗತಿ ಕೊಠಡಿ ಸಿಗುವುದು ಕಷ್ಟ.

ದಾಖಲಾತಿಗೆ ಹೊಡೆತ!
ಪಿಯು ಫಲಿತಾಂಶ ಬಂದ ತತ್‌ಕ್ಷಣ ಕಾಲೇಜು ಪ್ರವೇಶಾತಿ ಆರಂಭಿಸಲಾಗುತ್ತದೆ. ಆದರೆ ತರಗತಿ ಆರಂಭ ವಿಳಂಬವಾಗಲಿದೆ. ಅಲ್ಲಿಯವರೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತದೆ. ಇದು ಆಗದಿದ್ದರೆ ವಿದ್ಯಾರ್ಥಿಗಳ ಕಾಲೇಜು ದಾಖಲಾತಿಯೇ ಕುಸಿತವಾಗುತ್ತದೆ. 3 4 ತಿಂಗಳು ಕಾಲೇಜು ಇಲ್ಲವಾದ ಕಾರಣದಿಂದ ಮಕ್ಕಳು ಉದ್ಯೋಗಕ್ಕೆ ಸೇರುತ್ತಾರೆ ಅಥವಾ ವೃತ್ತಿ ಸಂಬಂಧಿ ತರಬೇತಿ ಪಡೆಯಲು ನಿರ್ಧರಿಸುತ್ತಾರೆ. ಹೀಗಾಗಿ ಪದವಿ ದಾಖಲಾತಿ ಪ್ರಮಾಣ ಕುಸಿತವಾಗುವ ಅಪಾಯ ಅಧಿಕ ಎನ್ನುತ್ತಾರೆ ಕಾಲೇಜು ಪ್ರಾಂಶುಪಾಲರೊಬ್ಬರು.

ಒಂದೇ ವೇಳಾಪಟ್ಟಿ ಕಷ್ಟ
ರಾಜ್ಯದ ಎಲ್ಲ ವಿ.ವಿ.ಗಳಿಗೂ ಒಂದೇ ಶೈಕ್ಷಣಿಕ ವೇಳಾಪಟ್ಟಿ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿತ್ತು. ಆದರೆ ವಿವಿಧ ವಿ.ವಿ.ಗಳಲ್ಲಿ ಇನ್ನೂ ಫಲಿತಾಂಶ ಪೂರ್ಣ ವಾಗಿ ಬಂದಿಲ್ಲ. ಹೀಗಾಗಿ ಒಂದೇ ಶೈಕ್ಷಣಿಕ ವೇಳಾ ಪಟ್ಟಿ ಅನುಸರಿಸುವುದು ಸದ್ಯಕ್ಕೆ ಕಷ್ಟ ಎನ್ನುವುದು ವಿ.ವಿ. ಮೂಲಗಳ ಅಭಿಪ್ರಾಯ.

ಸ್ವಾಯತ್ತಗಳಲ್ಲಿ ಎಲ್ಲವೂ ಕ್ರಮಬದ್ಧ!
ಮಂಗಳೂರು ವಿ.ವಿ. ವ್ಯಾಪ್ತಿಯ ಸರಕಾರಿ- ಖಾಸಗಿ ಕಾಲೇಜುಗಳಲ್ಲಿ ತರಗತಿ ತಡ ವಾದರೆ ಸ್ವಾಯತ್ತ ಕಾಲೇಜುಗಳಲ್ಲಿ ತರಗತಿ ತಡವಾಗುವ ಸಮಸ್ಯೆ ಇಲ್ಲ. ಅಲ್ಲಿ 6ನೇ ಸೆಮಿಸ್ಟರ್‌ ಕೊನೆಯ ಹಂತದ ಪಠ್ಯ ಸದ್ಯ ನಡೆಯು ತ್ತಿದ್ದು, ಎಪ್ರಿಲ್‌ನಲ್ಲಿ ಪರೀಕ್ಷೆ ಮುಗಿಸಿ ಮೇ ತಿಂಗಳಲ್ಲಿ ಫಲಿತಾಂಶ ಪ್ರಕಟವಾಗುತ್ತದೆ. ಮಂಗಳೂರು ವಿ.ವಿ. ಹೆಸರಿನಲ್ಲಿ ಸರ್ಟಿ ಫಿಕೇಟ್‌ ಕೂಡ ದೊರೆಯುತ್ತದೆ. ಉದ್ಯೋಗಕ್ಕೆ ತೆರಳುವವರಿಗೆ ಇದು ಅನು ಕೂಲ. ಅಂದಹಾಗೆ ಇಲ್ಲಿ ಜೂನ್‌ನಲ್ಲೇ 2023-24ನೇ ಸಾಲಿನ ಶೈಕ್ಷಣಿಕ ವರ್ಷವೂ ಆರಂಭ!

ಪಿಯು ಫಲಿತಾಂಶ ಬಂದ ಕೂಡಲೇ ಕಾಲೇಜು ಪ್ರವೇಶಕ್ಕೆ ದಾಖಲಾತಿ ಆರಂಭಿಸಲು ಅವಕಾಶ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಹಿಂದೆಯೂ ಇದರ ಬಗ್ಗೆ ಅವಲೋಕನ ಆಗಿತ್ತು. ಆದರೆ ರಾಜ್ಯಾದ್ಯಂತ ಒಂದೇ ವೇಳಾಪಟ್ಟಿ ಕಾರಣದಿಂದ ಅನುಷ್ಠಾನಕ್ಕೆ ಸವಾಲು ಎದುರಾಗಿತ್ತು. ಈ ಬಾರಿ ಪಿಯು ಫಲಿತಾಂಶ ಬಂದ ಕೂಡಲೇ ದಾಖಲಾತಿ ಪ್ರಕ್ರಿಯೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
– ಪ್ರೊ| ಕಿಶೋರ್‌ ಕುಮಾರ್‌ ಸಿ.ಕೆ., ಕುಲಸಚಿವರು (ಆಡಳಿತ) ಮಂಗಳೂರು ವಿ.ವಿ.

-ದಿನೇಶ್‌ ಇರಾ

ಟಾಪ್ ನ್ಯೂಸ್

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.