ವರ ಹುಡುಕಿ ಕೊಡುವುದಾಗಿ ಹೇಳಿ ಸಹೋದರಿಯಿಂದ ಲಕ್ಷಾಂತರ ರೂ. ವಂಚನೆ
Team Udayavani, Apr 11, 2023, 7:12 AM IST
ಸಿದ್ದಾಪುರ: ಬೆಳ್ವೆ ಗ್ರಾಮದ ಗುಮ್ಮಲ ಸರೋಜಾ ಅವರಿಗೆ ಮದುವೆಯಾಗಲು ಹುಡುಗನನ್ನು ಹುಡುಕಿ ಕೊಡುವುದಕ್ಕೆ ಎಂದು ಸಹೋದರಿ ಸವಿತಾ ಅವರು ಸುಮಾರು 13,59,500 ರೂ. ಹಣ ಪಡೆದು ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಸವಿತಾ ಅವರು ತನ್ನ ಅಕ್ಕ ಸರೋಜಾ ಅವರಿಗೆ ಹುಡುಗನ್ನು ಹುಡುಕಿ ಕೊಡುವುದಕ್ಕಾಗಿ ಕಿರಣ್ ಮತ್ತು ಶ್ರೀನಿವಾಸ ಅವರೊಂದಿಗೆ ಸೇರಿ ಪದೇ ಪದೆ ಹಣ ಪಡೆದುಕೊಳ್ಳುತ್ತಿದ್ದರು. ಸರೋಜಾ ಸಹೋದರಿಯ ಮಾತಿಗೆ ಮರುಳಾಗಿ ತನ್ನ ಬ್ಯಾಂಕ್ ಖಾತೆಯಿಂದ 13,59,500 ರೂ. ಹಣ ವರ್ಗಾಯಿಸಿದ್ದರು.
ಜತೆಗೆ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ ಮತ್ತು ನೆಕ್ಲೇಸ್ ಸರವನ್ನು ಮದುವೆ ಸಮಾರಂಭಕ್ಕೆ ಹೋಗುವುದಕ್ಕಾಗಿ ಪಡೆದುಕೊಂಡು ಹಿಂದಿರುಗಿಸದೆ ಮೋಸ ಮಾಡಿದ್ದಾರೆ. ಚಿನ್ನವನ್ನು ಮೂಲ್ಕಿಯ ವಿಜಯ ಬ್ಯಾಂಕ್ನಲ್ಲಿ ಅಡವು ಇರಿಸಿದ್ದಾರೆ. ಹಣ ಮತ್ತು ಚಿನ್ನವನ್ನು ಹಿಂದಿರುಗಿಸುವಂತೆ ಕೇಳಿದಾಗ ಸಹೋದರಿ ಸವಿತಾ, ಕಿರಣ್ ಹಾಗೂ ಶ್ರೀನಿವಾಸ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸರೋಜಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ