ಟ್ಯಾಂಕರ್ನಿಂದ ಗ್ಯಾಸ್ ಲೀಕ್; ಮಂಜೇಶ್ವರ ಬಳಿ ಘಟನೆ,ಸಂಚಾರ ಬದಲಾವಣೆ
Team Udayavani, Mar 12, 2019, 3:30 PM IST
ಮಂಗಳೂರು : ಇಲ್ಲಿಂದ ಕೇರಳ ಕಡೆ ಸಾಗುತ್ತಿದ್ದ ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾದ ಆತಂಕಕಾರಿ ಘಟನೆ ಮಂಜೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬಂದಿಗಳು, ಪೊಲೀಸರು ಆಗಮಿಸಿದ್ದು , ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿ ಸಂಚಾರಕ್ಕೆ ತಡೆ ಹಾಕಿ ಬದಲಿ ಮಾರ್ಗದ ಮೂಲಕ ವಾಹನಗಳನ್ನು ಕಳುಹಿಸುತ್ತಿದ್ದಾರೆ.
ಒಳಮಾರ್ಗದಲ್ಲಿ ವಾಹನಗಳು ಸಂಚರಿಸಲು ಅವಕಾಶ ಮಾಡಲಾಗಿದೆ.
ಹೆಚ್ಚಿನ ವಿವರಗಳನ್ನು ನೀರೀಕ್ಷಸಲಾಗುತ್ತಿದೆ.