ಸ್ವಾತಂತ್ರ್ಯಕ್ಕೆ ಬೆಳ್ತಂಗಡಿಗೆ ಒಲಿದು ಬಂತು ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಅವಾರ್ಡ್..!
Team Udayavani, Aug 15, 2021, 12:05 PM IST
ಬೆಳ್ತಂಗಡಿ : 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ 5000 ಕ್ಕೂ ಮಿಕ್ಕಿ ಮಂದಿ ಸ್ಪರ್ಧಿಸುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
ಈ ನೆಲೆಯಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನ ಪ್ರಶಸ್ತಿಯನ್ನು, ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಏಷ್ಯಾ ಮುಖ್ಯಸ್ಥರಾದ, ಡಾ. ಮನೀಶ್ ವೈಷ್ಣವ್, ಅವರು ಶಾಸಕ ಹರೀಶ್ ಪೂಂಜ ಅವರಿಗೆ 75 ನೇ ಸ್ವಾತಂತ್ರ್ಯ ಸಂಭ್ರಮಾಚರಣೆಯ ಸಂದರ್ಭದಲ್ಲಿ( ಆ. 15, ಆದಿತ್ಯವಾರ) ರಂದು ಬೆಳ್ತಂಗಡಿಯಲ್ಲಿ ಹಸ್ತಾಂತರಿಸಿದರು.
ಇದನ್ನೂ ಓದಿ : 75 ನೇ ಸ್ವಾತಂತ್ರ್ಯ : ಎಲ್ಲಾ ಸೈನಿಕ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರವೇಶ: ಮೋದಿ ಉವಾಚ..!
ವಾಟ್ಸ್ಯಾಪ್ ನಂಬರಿಗೆ ಸಾವಿರಾರು ಸಂದೇಶಗಳ ಮೂಲಕ ಸ್ಪರ್ಧಿಗಳು ಹಾಡಿದ ದೇಶಭಕ್ತಿ ಗೀತೆ ತಲುಪಿದ್ದು ಪ್ರತಿಯೊಬ್ಬರ ಸಂದೇಶವನ್ನು ನೋಡಿ, ಸ್ಪರ್ಧಿಗಳ ಆಧಾರ್ ಕಾರ್ಡ್ ಪರಿಶೀಲಿಸಿ 5000ದಲ್ಲಿ ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದ 3500 ಸ್ಪರ್ಧಿಗಳನ್ನು ಸ್ಪರ್ಧೆಯ ನಿಯಮಾನುಸಾರ ಗಣನೆಗೆ ತೆಗೆದುಕೊಳ್ಳಲಾಗಿದೆ.
ಒಂದೇ ತಾಲೂಕಿನ 3500 ಜನರು ಅವರವರ ಮನೆಯಲ್ಲಿ ಆನ್ಲೈನ್ ಮೂಲಕ ದೇಶಭಕ್ತಿಗೀತೆಯನ್ನು ಹಾಡುವ ಮೂಲಕ ವಿಶ್ವದಾಖಲೆಯ ಮನ್ನಣೆ ಪಡೆದಿದೆ. ಇದು ತಾಲೂಕಿನ ಜನರ ಪ್ರತಿಭೆಗೆ ಸಿಕ್ಕ ಗೌರವವಾಗಿದೆ.
ಇದನ್ನೂ ಓದಿ : ಶಿರ್ವ ಗ್ರಾ.ಪಂ.: ಹೈಮಾಸ್ಟ್ ದೀಪ ಉದ್ಘಾಟನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ