ವಿಹಿಂಪ, ಬಜರಂಗ ದಳದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಾಣ
Team Udayavani, Jul 10, 2018, 2:35 AM IST
ಬಂಟ್ವಾಳ: ಕಲ್ಲಡ್ಕ ವಲಯ ವಿಹಿಂಪ ಮತ್ತು ಬಜರಂಗದಳ ಘಟಕವು ಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ಪಳನೀರು ಗುಡ್ಡದಲ್ಲಿ ಗುಡಿಸಲಿನಲ್ಲಿ ವಾಸ್ತವ್ಯವಿದ್ದ ಬಡ ಕುಟುಂಬಕ್ಕೆ ನೂತನ ಮನೆಯೊಂದನ್ನು ನಿರ್ಮಿಸಿ ಕೊಡುವ ಆದರ್ಶ ಕೆಲಸವನ್ನು ಮಾಡಿದ್ದು, ಇಲ್ಲಿನ ಲಕ್ಷ್ಮೀ ಆಚಾರ್ಯ ಅವರಿಗೆ ಸಂಪೂರ್ಣಗೊಂಡ ಈ ಮನೆಯನ್ನು ಜು. 16ರಂದು ಹಸ್ತಾಂತರಕ್ಕೆ ದಿನ ನಿಗದಿಯಾಗಿದೆ. RSS ಪ್ರಮುಖರಾದ ಕಲ್ಲಡ್ಕ ಡಾ| ಪ್ರಭಾಕರ ಭಟ್, ಮತ್ತು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಇವರ ಕೈಯಲ್ಲಿ ಕೀ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಇಲ್ಲಿನ ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ. ಲಕ್ಷ್ಮೀ ಆಚಾರ್ಯ ಅವರು ಬಡ ಕುಟುಂಬದ ಮಹಿಳೆ. ಇವರ ಪತಿ ಅಸೌಖ್ಯದಿಂದ ಮರಣ ಹೊಂದಿದ್ದಾರೆ. ಪುತ್ರ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಹಾಗಾಗಿ ಪುತ್ರಿಯ ಜತೆ ವಾಸವಾಗಿದ್ದಾರೆ. ಮಾನಸಿಕವಾಗಿ ನೊಂದ ಕುಟುಂಬಕ್ಕೆ ಸಾಮಾಜಿಕ ಸಾಂತ್ವನದ ಕೆಲಸವನ್ನು ಈ ಮೂಲಕ ಸಂಘಟನೆಯು ಮಾಡುತ್ತಿದೆ.
ಸುಮಾರು 50 ಸೆಂಟ್ಸ್ ಜಾಗವಿದ್ದರೂ ಅದಕ್ಕೆ ದಾಖಲೆ ಇಲ್ಲದ ಕಾರಣ ಸರಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿ ಮನೆ ಕಟ್ಟಲು ಸಾಧ್ಯವಾಗಿಲ್ಲ. ಇವರ ಕಷ್ಟ ವನ್ನು ಮನಗಂಡ ಕಲ್ಲಡ್ಕದ ವಿಹಿಂಪ, ಬಜರಂಗ ದಳದ ಕಾರ್ಯಕರ್ತರು ಸೇರಿಕೊಂಡು ಸ್ವಂತ ಖರ್ಚಿನಲ್ಲಿ ಮತ್ತು ಎರಡು ಜನ ದಾನಿಗಳ ಸಹಾಯದಿಂದ ಸುಮಾರು ನಾಲ್ಕು ಲಕ್ಷ ರೂ. ವೆಚ್ಚದ ಹಂಚಿನ ಮನೆ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಯುವಕರು ಪ್ರತಿ ರವಿವಾರ ಶ್ರಮದಾನದ ಮೂಲಕವೇ ಹೆಚ್ಚಿನ ಕೆಲಸವನ್ನು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ