ಪ್ರಾಮಾಣಿಕತೆ, ಶ್ರದ್ಧೆಯಿಂದ ಯಶಸ್ಸು :ಡಾ| ದೇವೇಶ್
Team Udayavani, Jun 30, 2018, 8:40 AM IST
ಮಂಗಳೂರು: ಅಡ್ಯಾರ್ನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ನ ಎಂಬಿಎ ಪದವೀಧರ ವಿದ್ಯಾರ್ಥಿಗಳಿಗೆ ಒಂಬತ್ತನೇ ವರ್ಷದ ಪದವಿ ಪ್ರದಾನ ಶುಕ್ರವಾರ ನಡೆಯಿತು. 160 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನಿಸಲಾಯಿತು.
ಈವೈ ಇಂಡಿಯಾ ಫೈನಾನ್ಶಿಯಲ್ ಅಕೌಂಟಿಂಗ್ ಅಡ್ವೆಸರಿ ಸರ್ವಿಸಸ್ನ ಅಸೋಸಿಯೇಟ್ ಪಾಟ್ನìರ್ ಡಾ| ದೇವೇಶ್ ಪ್ರಕಾಶ್ ಮುಖ್ಯ ಅತಿಥಿಯಾಗಿದ್ದರು. ಪ್ರಾಮಾಣಿಕತೆ, ಶ್ರದ್ಧೆ ಮತ್ತು ಯಾವುದೇ ಭಯವಿಲ್ಲದೆ ಕೆಲಸ ಮಾಡುವುದರಿಂದ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ ಎಂದರು.
ಲಿಂಕ್ಡ್ಇನ್ ಪರಿಹಾರ ಮತ್ತು ಲಾಭಾಂಶಗಳ ಹಿರಿಯ ವ್ಯವಸ್ಥಾಪಕ ಚೇತಕ್ ಲೋಡಾಯ ಗೌರವ ಅತಿಥಿಯಾಗಿದ್ದರು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು.
ಎಲ್ಲ ವೃತ್ತಿಪರರು ಇತರರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಬೇಕು ಎಂದರು.
ಎಂಬಿಎ ವಿದ್ಯಾರ್ಥಿಗಳಿಗೆ ಅರ್ಹತಾ ಶಿಕ್ಷಣಕ್ಕಾಗಿ “ಎರ್ನ್Õ r ಮತ್ತು ಯಂಗ್’ ಜತೆಗೆ ಎಂಒಯು ಸಹಿ ಹಾಕಲಾಯಿತು.
ಸಹ್ಯಾದ್ರಿ ಕಾಲೇಜಿನ ಡಿಪಾಟೆ¾ìಂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ನಿರ್ದೇಶಕ ಡಾ| ವಿಶಾಲ್ ಸಮರ್ಥ ಸ್ವಾಗತಿಸಿದರು.
ಸಹ್ಯಾದ್ರಿ ವಿದ್ಯಾರ್ಥಿಗಳು ಅವರ ಅಧ್ಯಯನದ ಸಮಯದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕಾರ್ಯತಂತ್ರ ಯೋಜನೆಯ ನಿರ್ದೇಶಕ ಡಾ| ಉಮೇಶ್ ಎಂ. ಭೂಶಿ, ಉಪಪ್ರಾಂಶುಪಾಲರಾದ ಪ್ರೊ| ಬಾಲಕೃಷ್ಣ ಎಸ್ ಎಸ್., ಪ್ರಮುಖರಾದ ಡಾ| ಜೆ.ವಿ. ಗೋರ್ಬಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ