ಮುಳುಗಡೆಯಾದ ಹೊಸಮಠ ಸೇತುವೆ; ಈಗ ವಾಹನ ಸಂಚಾರ ಸುಗಮ
Team Udayavani, Jul 20, 2017, 2:46 PM IST
ಕಡಬ: ಭಾರೀ ಮಳೆಯ ಕಾರಣ ಇಲ್ಲಿನ ಹೊಸಮಠ ಮುಳುಗು ಸೇತುವೆ ಗುರುವಾರ ನೆರೆ ನೀರಿನಿಂದ ಮುಳುಗಡೆಯಾಗಿ ಉಪ್ಪಿನಂಗಡಿ-ಕಡಬ ರಸ್ತೆಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿದೆ.ಮಧ್ಯಾಹ್ನದ ವೇಳೆ ಮುಳುಗಡೆಯಾದ ಸೇತುವೆ 3 ಗಂಟೆಯ ವೇಳೆಗೆ ನೆರೆ ನೀರು ಇಳಿದ ಬಳಿಕ ಸಂಚಾರಕ್ಕೆ ಮುಕ್ತವಾಯಿತು. ಈಗ ವಾಹನ ಸಂಚಾರ ಸುಗಮವಾಗಿದೆ.
ಕಡಬ ಭಾಗದಲ್ಲಿ ಮತ್ತು ಘಟ್ಟದ ಮೇಲೆ ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗಿ ಸೇತುವೆ ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿದು ವಾಹನ ಸಂಚಾರ ಸ್ಥಗಿತಗೊಂಡ ಕಾರಣ ಪ್ರಯಾಣಿಕರು ಪರದಾಡುವಂತಾಯಿತು . ಮಳೆ ಪ್ರಮಾಣ ಹೆಚ್ಚಾದಲ್ಲಿ ಮತ್ತೆ ಸೇತುವೆ ಮುಳುಗಡೆಯಾಗುವ ಸಾಧ್ಯತೆಗಳಿವೆ.
ಈ ಬಾರಿಯ ಮಳೆಗಾಲದಲ್ಲಿ ಸೇತುವೆ ಪ್ರಥಮ ಬಾರಿ ನೆರೆ ನೀರಿನಲ್ಲಿ ಮುಳುಗಡೆಯಾಗಿದೆ.
ಉಪ್ಪಿನಂಗಡಿಯಿಂದ ಸುಬ್ರಹ್ಮಣ್ಯದತ್ತ ತೆರಳುವವರು ಪರ್ಯಾಯ ಮಾರ್ಗ ಅವಲಂಬಿಸಬೇಕಾಯಿತು. ಉಪ್ಪಿನಂಗಡಿಯಿಂದ ನೆಲ್ಯಾಡಿಗೆ ತೆರಳಿ ಇಚ್ಲಂಪಾಡಿ ಸೇತುವೆ ಮೂಲಕ ಸುಬ್ರಹ್ಮಣ್ಯಕ್ಕೆ ತೆರಳಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು