ಮಳೆಯಾಗದಿದ್ದರೆ ಪರ್ಯಾಯ ಮೂಲ ಹುಡುಕುವುದು ಅನಿವಾರ್ಯ

ಕೆರೆ ಬಾವಿ ಬೋರ್‌ವೆಲ್‌ನತ್ತ ಮೊರೆ

Team Udayavani, Apr 28, 2019, 6:00 AM IST

2604MLR104-BAILADY-KERE

ಪಡೀಲ್‌ನಲ್ಲಿರುವ ಬೈರಾಡಿಕೆರೆ.

ಬೇಸಗೆಯ ಬಿಸಿ ಏರುತ್ತಲೇ ಇದೆ.ಹೀಗಾಗಿ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಲಿದೆ.
ಮಳೆ ಕೊಂಚ ತಡವಾದರೂ ನೀರಿನ ಸಮಸ್ಯೆ ತಾರಕಕ್ಕೇರುವುದು ಗ್ಯಾರಂಟಿ.
ಹೀಗಿರುವಾಗ ಪರ್ಯಾಯ ಮೂಲದತ್ತ ಚಿಂತನೆ ಈಗಲೇ ಆರಂಭವಾಗಬೇಕಿದೆ.

ಮಹಾನಗರ: ನಗರದಲ್ಲಿ ಕುಡಿಯುವ ನೀರಿನ ಮೂಲವಾಗಿರುವ ನೇತ್ರಾವತಿ ಒಡಲು ಬರಿದಾಗುತ್ತಿರುವಂತೆ ಪರ್ಯಾಯ ಮೂಲಗಳಾಗಿರುವ ಕೆರೆ, ಬಾವಿ, ಬೋರ್‌ವೆಲ್‌ಗ‌ಳತ್ತ ಪಾಲಿಕೆ ಅಧಿಕಾರಿಗಳತ್ತ ಗಮನಹರಿಸುತ್ತಾರೆ. ಆದರೆ ಅದಕ್ಕಿಂತ ಮೊದಲು ನೀರು ಸಂರಕ್ಷಣೆ, ಅಂತರ್ಜಲ ವೃದ್ಧಿಯಂತಹ ಯೋಜನೆಗಳ ಬಗ್ಗೆ ಚಿಂತಿಸುವುದಿಲ್ಲ.

ಪಾಲಿಕೆಯ ಮಾಹಿತಿ ಪ್ರಕಾರ ಅದರ ವ್ಯಾಪ್ತಿಯಲ್ಲಿ 42 ಸರಕಾರಿ ಬಾವಿಗಳಿವೆ. 2016ರಲ್ಲಿ ನಗರದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದಾಗಲೂ ಕೆಲವು ಬಾವಿಗಳ ನೀರನ್ನು ಬಳಸಲಾಗಿತ್ತು. ಶ್ರೀ ಕಾವು ಪಂಚಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿದ್ದ ಬಾವಿ, ಜಪ್ಪಿನಮೊಗರುವಿನಲ್ಲಿದ್ದ ಕೋಸ್ಟ್‌ಗಾರ್ಡ್‌ ಬಾವಿ, ಶಕ್ತಿನಗರದಲ್ಲಿರುವ ಎರಡು ಬಾವಿ ಸಹಿತ ಹಲವು ಬಾವಿಗಳು ಆಗ ಬಳಕೆಯಾಗಿದ್ದವು.

ಬಾವಿ ಇದೆ; ಸೌಕರ್ಯವಿಲ್ಲ!
ಪಾಲಿಕೆ ವ್ಯಾಪ್ತಿಯಲ್ಲಿ ಸರಕಾರಿ ಬಾವಿ ಇದ್ದರೂ ಅದರ ನೀರನ್ನು ಪಡೆದುಕೊಳ್ಳಲು ಕೆಲವು ಕಡೆಯಲ್ಲಿ ಆಗುತ್ತಿಲ್ಲ. ಉದಾಹರಣೆಗೆ ಜಪ್ಪಿನಮೊಗರು ಶಾಲೆಯ ಬಳಿಯಲ್ಲಿರುವ ಒಂದು ಸರಕಾರಿ ಬಾವಿಯ ನೀರು ಕಲುಷಿತಗೊಂಡು ಹಸುರು ಬಣ್ಣಕ್ಕೆ ಬದಲಾಗಿದೆ. ಹೀಗಾಗಿ ಇದು ಕುಡಿಯಲು ಯೋಗ್ಯವಿಲ್ಲ. ಒಂದುವೇಳೆ ಎಲ್ಲೆಡೆ ನೀರಿನ ಕೊರತೆ ಉಂಟಾಗಿ ವಿಷಮ ಸ್ಥಿತಿ ಎದುರಾದರೆ ಈ ನೀರನ್ನು ಶುದ್ಧಿಕರಿಸಿ ಬಳಿಕವಷ್ಟೇ ಬಳಕೆ ಮಾಡಬೇಕಿದೆ. ಜತೆಗೆ ಹಲವು ಸರಕಾರಿ ಬಾವಿಗಳ ಸುತ್ತ ಗಿಡ ಮರ ತುಂಬಿಕೊಂಡು ಆ ಬಾವಿಯ ನೀರೂ ಉಪಯೋಗಕ್ಕೆ ಸಿಗದಂತಾಗಿದೆ.

ಮಳೆಯಾಗದಿದ್ದರೆ ಬಾವಿ ನೆನಪು!
ತುಂಬೆಯಿಂದ ಪೈಪ್‌ಗ್ಳ ಮೂಲಕ ನಗರಕ್ಕೆ ನೀರು ಬರಲು ಶುರುವಾದ ಬಳಿಕ ಈ ಹಿಂದೆ ಇದ್ದ ಸರಕಾರಿ ಬಾವಿ/ಕೆರೆಗಳನ್ನು ಪಾಲಿಕೆಯು ನಗಣ್ಯ ಮಾಡುತ್ತಾ ಬಂದಿದೆ. ಹೀಗಾಗಿ ಪಾಲಿಕೆ ವ್ಯಾಪ್ತಿಯಲ್ಲಿದ್ದ ಬಾವಿಗಳನ್ನು ಇದ್ದೂ ಇಲ್ಲದಂತಾಗಿದೆ. ನಳ್ಳಿಯಲ್ಲಿ ಸರಾಗವಾಗಿ ನೀರು ಬರುವ ಕಾಲದಲ್ಲಿ ನೆನಪಾಗದ ಬಾವಿಗಳು, ನಳ್ಳಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವಾಗ ಮಾತ್ರ ನೆನಪಾಗುತ್ತಿದೆ.

ಒಂದು ವೇಳೆ ಮೇ ತಿಂಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದರೆ ಬಾವಿಯೇ ದಾರಿ ತೋರಬೇಕಿದೆ. ಈ ಮಧ್ಯೆ, ಇನ್ನು ಕೆಲವೇ ದಿನಗಳಲ್ಲಿ ಮಳೆ ಬಂದರೆ ಮತ್ತೆ ಬಾವಿಗಳ ನೆನಪಾಗುವುದು ಮುಂದಿನ ವರ್ಷ ಬೇಸಗೆಯಲ್ಲಿ ನೀರಿನ ಸಮಸ್ಯೆ ತಲೆದೋರಿದರೆ ಮಾತ್ರ !

ಖಾಸಗಿ ಬಾವಿಯ
ನೀರಿಗೂ ಪ್ಲಾನ್‌
ಪಾಲಿಕೆ ವ್ಯಾಪ್ತಿಯಲ್ಲಿ ಖಾಸಗಿಯಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಶಕ್ತವಾಗಿರುವ ಸುಮಾರು 20ಕ್ಕೂ ಅಧಿಕ ಬಾವಿಗಳಿವೆ. ಕದ್ರಿ ಪರಿಸರದ 150 ಮೀಟರ್‌ನ ಒಳಗಡೆ ಯೇ 8 ಖಾಸಗಿ ಬಾವಿಗಳಿವೆ.

ಸೂಟರ್‌ಪೇಟೆ, ಪಂಪ್‌ವೆಲ್, ಪಡೀಲ್, ಆನೆಗುಂಡಿ, ಸುಲ್ತಾನ್‌ಬತ್ತೇರಿ, ಅತ್ತಾವರ, ಮರೋಳಿ ಸಹಿತ ನಾನಾ ಭಾಗಗಳಲ್ಲಿ ಖಾಸಗಿ ಬಾವಿಗಳಿವೆ. ಇಲ್ಲಿಂದ ನಗರದ ವಿವಿಧ ಭಾಗಗಳಿಗೆ ಟ್ಯಾಂಕರ್‌ ಮೂಲಕ ನೀರು ಸಾಗಾಟವಾಗುತ್ತಿದೆ. ಖಾಸಗಿ ಬಾವಿ ಗಳ ಬಗ್ಗೆಯೂ ಪಾಲಿಕೆ ಈಗ ಲೆಕ್ಕಾಚಾರ ಶುರು ಮಾಡಿದೆ. ಒಂದು ವೇಳೆ ನೀರಿನ ಕೊರತೆ ಎದುರಾದರೆ ಅವುಗಳಿಂದಲೂ ನೀರು ತರಲು ಯೋಜನೆ ರೂಪಿಸಿದ್ದಾರೆ.

ಒರತೆಯ ಕೊರತೆ!
ನಗರದ ಬಹುತೇಕ ಬಾವಿಗಳಲ್ಲಿ ಹಿಂದೆ ಸಾಕಷ್ಟು ಒರತೆ ಇತ್ತು. ಆದರೆ ಒಂದೆರಡು ವರ್ಷಗಳಿಂದ ನೀರಿನ ಒರತೆ ಕಡಿಮೆ ಇದೆ. ಒಮ್ಮೆ ಬಾವಿಯ ನೀರನ್ನು ಸಂಪೂರ್ಣ ಪೈಪ್‌ ಮೂಲಕ ತೆಗೆದರೆ ಮತ್ತೆ ಅದೇ ಮಟ್ಟಕ್ಕೆ ನೀರು ಏರಲು ಕೆಲವು ಸಮಯ ಬೇಕು. ಇನ್ನು ಕೆಲವು ಬಾವಿಗಳಲ್ಲಿ ನೀರು ಏರುತ್ತಲೇ ಇಲ್ಲ. ಇಂತಹ ಬಾವಿಗಳಿಂದ ಪೂರ್ಣವಾಗಿ ನೀರು ಪಂಪ್‌ ಮಾಡಿದರೆ ಬತ್ತಿಹೋಗುವ ಆತಂಕವೂ ಇದೆ.

ಲಭ್ಯ ನೀರಿನ ಮಿತ ಬಳಕೆ ಅನಿವಾರ್ಯ
ನಗರದಲ್ಲಿ ಕುಡಿಯುವ ನೀರಿನ ರೇಷನಿಂಗ್‌ ವ್ಯವಸ್ಥೆ ಜಾರಿಗೊಳಿಸುತ್ತಿದ್ದಂತೆ ಸಮಸ್ಯೆ ಬಿಗಡಾಯಿಸಿತ್ತು. ಆದರೆ ತುಂಬೆ ವೆಂಟೆಡ್‌ ಡ್ಯಾಂನಲ್ಲಿನ ನೀರಿನ ಲಭ್ಯತೆ ಮತ್ತು ಮಳೆಯಾಗುವ ಸಾಧ್ಯತೆಯಿರುವ ಕಾರಣ ಮಹಾನಗರ ಪಾಲಿಕೆಯು ಸದ್ಯಕ್ಕೆ ರೇಷನಿಂಗ್‌ ವ್ಯವಸ್ಥೆಯನ್ನು ರದ್ದುಗೊಳಿಸಿದೆ. ಹೀಗಾಗಿ ಬೇಸಗೆಯಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಇರುವ ಕೆಲವೊಂದು ಪ್ರದೇಶಗಳನ್ನು ಹೊರತುಪಡಿಸಿದರೆ, ನಗರದ ಹೆಚ್ಚಿನ ಕಡೆಗಳಲ್ಲಿ ಈಗ ನೀರಿನ ಸಮಸ್ಯೆ ಬಹುತೇಕ ಸುಧಾರಿಸಿದೆ.

ನಗರದಲ್ಲಿ ನೀರಿನ ಹಾಹಾಕಾರ ಶುರುವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ “ಸುದಿನ’ವು “ಜೀವ ಜಲ ಪ್ರತಿ ಹನಿ ಉಳಿಸೋಣ ಬನ್ನಿ’ ಎಂಬ ಶೀರ್ಷಿಕೆಯಡಿ ಏಳು ದಿನಗಳ ಜಲ ಜಾಗೃತಿ ಅಭಿಯಾನ ನಡೆಸಿತು. ಆ ಮೂಲಕ ನಗರದ ಜನತೆಯ ನೀರಿನ ಸಮಸ್ಯೆಯನ್ನು ಪತ್ರಿಕೆಯು ಅಧಿಕಾರಿಗಳ ಗಮನಕ್ಕೆ ತಂದಿತು.

ಮಳೆಗಾಲ ಶುರುವಾಗುವುದಕ್ಕೆ ಇನ್ನೂ ಒಂದು ತಿಂಗಳು ಬಾಕಿ ಇದ್ದು, ಅಲ್ಲಿಯವರೆಗೆ ತುಂಬೆ ಡ್ಯಾಂನಲ್ಲಿ ಈಗ ಲಭ್ಯವಿರುವ ನೀರನ್ನು ಮಿತವಾಗಿ ಬಳಸುವುದು ಅನಿವಾರ್ಯ. ಒಂದುವೇಳೆ ಮೇ 20ರೊಳಗೆ ನೀರಿಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ಮತ್ತೆ ನೀರಿನ ಅಭಾವ ಸೃಷ್ಟಿಯಾಗುವ ಆತಂಕ ಕೂಡ ಇರುವುದರಿಂದ ಎಲ್ಲರೂ ಕುಡಿಯುವ ನೀರಿನ ಬಗ್ಗೆ ಅತಿಯಾದ ಜಾಗೃತಿ ವಹಿಸುವುದು ಅವಶ್ಯ.

ಜನರಲ್ಲಿ ಜೀವ ಜಲದ ಪ್ರಾಮುಖ್ಯ, ಅದನ್ನು ಪೋಲಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಆಶಯದ ಈ ಅಭಿಯಾನವು ಇಂದಿಗೆ ಮುಕ್ತಾಯಗೊಳಿಸುತ್ತಿದ್ದೇವೆ.

ಕೆರೆ ಮರೆತ ಮಂಗಳೂರು!
ನಗರ ಒಂದೊಮ್ಮೆ ಕೆರೆಗಳ ಊರಾಗಿತ್ತು. ಎಮ್ಮೆಕೆರೆ, ಗುಜ್ಜರಕೆರೆ, ಕಾವೂರು ಕೆರೆ, ಬೈರಾಡಿಕೆರೆ ಸೇರಿದಂತೆ ಹಲವು ಕೆರೆಗಳ ಪಟ್ಟಿಯೇ ನಗರದಲ್ಲಿತ್ತು. ಹಿಂದೆ ಕುಡಿಯುವ ನೀರಿಗೆ ಇದುವೇ ಮೂಲವಾಗಿತ್ತು. ಆದರೆ ಕಾಲಕಳೆದಂತೆ ಕೆರೆಗಳನ್ನೇ ಮರೆತ ಆಡಳಿತ ವ್ಯವಸ್ಥೆ ಅದನ್ನು ತ್ಯಾಜ್ಯ ಹಾಕುವ ಗುಂಡಿಗಳಾಗಿ ಪರಿವರ್ತಿಸಿವೆ. ಕೆಲವು ಕೆರೆಗಳು ಸರಿಯಾಗಿದೆಯಾದರೂ ಹಲವು ಕೆರೆಗಳಿಗೆ ಒಳಚರಂಡಿ ನೀರು ನುಗ್ಗಿ, ಅತಿಕ್ರಮಣದಿಂದ ಸೋತು ಹೋಗಿವೆ. ಹೀಗಾಗಿ ನಮ್ಮ ಕಣ್ಣ ಮುಂದಿರುವ ಜಲರಾಶಿಯನ್ನು ನಾವು ಮರೆತು “ನೀರಿಲ್ಲ’ ಎಂದು ಪರಿತಪಿಸುವಂತಾಗಿದೆ!

11 ಕಡೆ ಬೋರ್‌ವೆಲ್‌
ಬಾವಿ ಮತ್ತು ಕೆರೆಗಳ ಕಥೆ ಒಂದಾದರೆ ಪಾಲಿಕೆ ಅಧೀನದಲ್ಲಿರುವ ಸರಕಾರಿ ಬೋರ್‌ವೆಲ್‌ಗ‌ಳದ್ದು ಇನ್ನೊಂದು ಕಥೆ. ಬಹುತೇಕ ಬೋರ್‌ವೆಲ್‌ಗ‌ಳಿಗೆ ಪಂಪ್‌ ಪೈಪ್‌ ಸೌಕರ್ಯವೇ ಇಲ್ಲ. ಇಂತಹ ಬೋರ್‌ವೆಲ್‌ಗ‌ಳನ್ನು ಕೂಡ ಸುಸ್ಥಿತಿಯಲ್ಲಿಡಲು ಜಿಲ್ಲಾಡಳಿತ ಸೂಚಿಸಿದ ಪರಿಣಾಮ ಬೋರ್‌ವೆಲ್‌ ಮೇಲೆ ಪಾಲಿಕೆ ಅಧಿಕಾರಿಗಳು ಈಗ ಕಣ್ಣಿಟ್ಟಿದ್ದಾರೆ. ಸಮಸ್ಯೆ ಇನ್ನಷ್ಟು ಬಿಗಡಾಯಿಸಿದರೆ 11 ಬೋರ್‌ವೆಲ್‌ ಕೊರೆಯಲು ಪಾಲಿಕೆ ನಿರ್ಧರಿಸಿದೆ. ಈ ಸಂಬಂಧ ಸ್ಥಳ ತನಿಖೆ ನಡೆಸಲಾಗುತ್ತಿದೆ. ಭೂ ವಿಜ್ಞಾನಿಗಳು ಈ ಕುರಿತಂತೆ ಪರಿಶೀಲನೆ ಆರಂಭಿಸಿದ್ದಾರೆ.

ಬಾವಿ ಲೆಕ್ಕಾಚಾರ
ಮಂಗಳೂರಿನಲ್ಲಿರುವ ಸರಕಾರಿ ಬಾವಿಗಳು   42
ನೀರಿನ ಪ್ರಮಾಣ ಕಡಿಮೆ ಇರುವ ಬಾವಿಗಳು  6
ಗಿಡ ಗಂಟಿಗಳಿಂದ ತುಂಬಿರುವ ಬಾವಿಗಳು  10
ನೀರು ಕಲುಷಿತಗೊಂಡ ಬಾವಿಗಳು  7
ಪಂಪ್‌ ಪೈಪ್‌ ಅಗತ್ಯವಿರುವ ಬಾವಿಗಳು  5

-  ದಿನೇಶ್‌ ಇರಾ

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.