ಸಂಜೆ ಕಾಲೇಜು ಓದಿದ ಜಯರಾಜ್‌ ಸೇರಿದ್ದು ಸೇನಾ ಶಿಬಿರ


Team Udayavani, Feb 24, 2018, 10:00 AM IST

24-fEB-1.jpg

ಮಹಾನಗರ: ‘ದೇಶ ಸೇವೆ ಮಾಡಬೇಕೆಂಬ ಹಂಬಲವಿದ್ದರೆ ಮಿಕ್ಕೆಲ್ಲ ಕಷ್ಟಗಳು ಮಂಜಿನಂತೆ ಕರಗುತ್ತವೆ’ ಎಂದು ಮಾತು ಆರಂಭಿಸುತ್ತಾರೆ ಸೇನಾನಿ ಜಯರಾಜ್‌. ಉರ್ವ ಬೋಳೂರು ನಿವಾಸಿ ದಿ| ವಸಂತ ಕೋಟ್ಯಾನ್‌ ಹಾಗೂ ಸುನಂದಾ ಅವರ ಮೂರು ಮಕ್ಕಳ ಪೈಕಿ ಕೊನೆಯವರಾದ ಜಯರಾಜ್‌ ಜಮ್ಮುವಿನ ಕಾರ್ಗಿಲ್‌ ಬಳಿಯ ದಾರಕಾ ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕುಟುಂಬ ಸದಸ್ಯರ ಜತೆ ಜಯರಾಜ್‌

ಬದುಕು ದೊಡ್ಡದೋ ಅಥವಾ ಬದುಕಿನಲ್ಲಿ ಆಸಕ್ತಿ ದೊಡ್ಡದೋ ಎಂದು ತೂಕ ಮಾಡಿದರೆ ಎರಡನೆಯದೇ ಮಹತ್ವದ್ದು ಎಂಬುದಕ್ಕೆ ಜಯರಾಜ್‌ ಸಾಕ್ಷಿ. ಹಗಲಿನಲ್ಲಿ ಬಡಗಿಯಾಗಿ ಕೆಲಸ ಮಾಡುತ್ತಾ, ಸಂಜೆ ಕಾಲೇಜಿನಲ್ಲಿ ತಮ್ಮ ಕನಸಿಗೆ ಬಣ್ಣ ಹಚ್ಚಿಕೊಳ್ಳುತ್ತಿದ್ದರು. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲದ ಜತೆಗೆ ಶ್ರಮ ಪಡಲು ಹಿಂಜರಿಕೆ ಇಲ್ಲದಿದ್ದುದು ಇವರನ್ನು ಈ ಹಂತಕ್ಕೆ ಬೆಳೆಸಿದೆ. ಹಾಗಾಗಿಯೇ ಉಳಿ ಹಿಡಿದ ಕೈಗಳೀಗ ಕೋವಿ ಹಿಡಿದು ನಿಂತಿವೆ. 

ಬೆಸೆಂಟ್‌ ಸಂಜೆ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಜಯರಾಜ್‌, ರಜೆ ದಿನಗಳಲ್ಲಿ ಹೋಗುತ್ತಿದ್ದುದು ಹೈದರಾಬಾದ್‌ನಲ್ಲಿದ್ದ ಅಕ್ಕನ ಮನೆಗೆ. ಸಮೀಪವೇ ಇದ್ದ ಆರ್ಮಿಕ್ಯಾಂಪ್‌ ಆಕರ್ಷಿಸುತ್ತಿತ್ತು. ಅಲ್ಲಿನ ಚಟುವಟಿಕೆಗಳು, ಆ ಸೈನಿಕರಲ್ಲಿನ ಶಿಸ್ತು ಸೇನೆಗೆ ಸೇರುವಂತೆ ಪ್ರೇರೇಪಿಸಿತು. ಪ್ರಸ್ತುತ ಮಕ್ಕಳ ಬಯಕೆಗೆ ತಮ್ಮ ಇಷ್ಟದ ಬಣ್ಣಗಳನ್ನು ಬಳಿಯುವ ಪೋಷಕರೇ ಹೆಚ್ಚು. ಆದರೆ ಜಯರಾಜರ ಸೇನೆಗೆ ಸೇರುವ ಆಸೆಯನ್ನು ಕೇಳಿ ಮನೆಯವರೆಲ್ಲಾ ಸಂಭ್ರಮಿಸಿದರು.

ಕಾರ್ಗಿಲ್‌ ಯುದ್ಧದ ಸಮಯ
ಹಾಗೆ ನೋಡಿದರೆ ಜಯರಾಜ ರದ್ದು ವೃತ್ತಿ ಜೀವನವೂ ಅದೃಷ್ಟದ್ದೇ. ಯುವಕನೊಬ್ಬ ಉದ್ಯೋಗಕ್ಕೆ ಸೇರಿದಾಗ ಸಿಗಬೇಕಾದ ಪ್ರೇರಣೆ ಹೇಗಿರಬೇಕು? ಇವರು ಸೇನೆಗೆ ಸೇರಿದಾಗ ಕಾರ್ಗಿಲ್‌ ಯುದ್ಧದ ಸಮಯ. ಎಲ್ಲೆಲ್ಲೂ ವೀರೋಚಿತ ವಾತಾವರಣ ತುಂಬಿಕೊಂಡಿತ್ತು. ತನ್ನ ಹಿರಿಯ ಸಹೋದ್ಯೋಗಿಗಳ ಪರಿಶ್ರಮ, ಸಾಹಸವೆಲ್ಲವೂ ಅವರ ಗುರಿಯನ್ನು ಮತ್ತಷ್ಟು ಸ್ಪಷ್ಟಪಡಿಸಿತು.

ಅಣ್ಣನ ಬೆಂಬಲ
ಜಯರಾಜ್‌ ತಮ್ಮ ಬಯಕೆಯನ್ನು ಮನೆಯಲ್ಲಿ ಪ್ರಸ್ತಾವಿಸುತ್ತಿದ್ದಂತೆ ಪೂರ್ಣ ಸಹಕಾರ ನೀಡಿ ಸೇನೆಗೆ ಸೇರುವವರೆಗೆ ಬೆನ್ನೆಲುಬಾಗಿ ನಿಂತದ್ದು ಅಣ್ಣ ಶ್ರೀರಾಜ್‌. ಸೆಂಟ್ರಿಂಗ್‌ ಕೆಲಸ ಮಾಡುತ್ತಿರುವ ಶ್ರೀರಾಜ್‌, ನನ್ನ ತಮ್ಮ ದೇಶ ಸೇವೆ ಮಾಡಲಿ ಎಂದು ಎಲ್ಲ ರೀತಿಯಲ್ಲೂ ಸಹಕರಿಸಿದರು. ಸೇನಾ ರ್ಯಾಲಿಯಲ್ಲಿ ಭಾಗವಹಿಸಲು ಬೇಕಾದ ಸಿದ್ಧತೆ, ದಾಖಲೆಗಳ ಸಂಗ್ರಹ ಎಲ್ಲ ಮಾಡಿದ್ದೂ ಅವರೇ. ನಾನು ಸೇನೆ ಸೇರಬೇಕೆಂದಿದ್ದೆ. ಆದರೆ ನಿಜವಾಗಲೂ ಸೇರಲು ಸಾಧ್ಯವಾಗಿಸಿದ್ದು ಅಣ್ಣನ ಉತ್ಸಾಹ ಎನ್ನುತ್ತಾರೆ ಜಯರಾಜ್‌.

ದೇಶಕ್ಕಾಗಿ ಬದುಕಿ ಧರ್ಮದ ಹೆಸರಿನಲ್ಲಿ ಕಲಹಗಳು ಹೆಚ್ಚಾಗುತ್ತಿವೆ. ಇದು ದೇಶ ಕಾಯುವ ನಮ್ಮಲ್ಲಿ ಆತಂಕ ಸೃಷ್ಟಿಸುತ್ತಿದೆ. ಇದೇ ನೆಪದಲ್ಲಿ ಅನೇಕ ಬಿಸಿರಕ್ತದ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಿಂತ ಸೇನೆ ಸೇರುವ ಬಗ್ಗೆ ಯೋಚನೆ ಮಾಡಿ.ಅಲ್ಲಿ ನಡೆಯುವ ಯುದ್ಧದಲ್ಲಿ ಪ್ರಾಣ ಹೋದರೆ ದೇಶವೇ ಹೆಮ್ಮೆ ಪಡುತ್ತದೆ.
ಜಯರಾಜ್‌, ಯೋಧ 

ಮನದಾಳದ ಮಾತು
ನಾವು ಕಾರ್ಯ ನಿರ್ವಹಿಸುತ್ತಿರುವ ವಾತಾವರಣದ ಬಗ್ಗೆ ನಿರ್ದಿಷ್ಟತೆಯಿಲ್ಲ. ಎಷ್ಟು ಸೆಕೆ ಇರುತ್ತದೆಯೋ ಅದರ ದುಪ್ಪಟ್ಟು ಚಳಿ ಅಲ್ಲಿ ಇರುತ್ತದೆ. ಹಿಮ ಬೀಳುತ್ತಲೇ ಇರುತ್ತದೆ. ಆದರೆ ದೇಶ ಸೇವೆಯ ಎದುರು ಅವೆಲ್ಲವೂ ದೊಡ್ಡ ಸಂಗತಿಯಲ್ಲ.ಯಾವುದೇ ವಾತಾವರಣ, ಸ್ಥಳ ಕೊಟ್ಟರೂ ಅದು ನಮ್ಮ ದೇಶದ ನೆಲ. ಅದನ್ನು ಕಾಯಬೇಕೆಂಬುದಷ್ಟೇ ಗುರಿ. ಇದು ಪ್ರತಿಯೊಬ್ಬ ಯೋಧನ ಮನದಾಳದ ಮಾತು ಎಂದು ನುಡಿಯುತ್ತಾರೆ ಜಯರಾಜ್‌.

ಜಾಗೃತಿ ಮೂಡಲಿ
ಜಿಲ್ಲೆಯಿಂದ ಸೇನೆ ಸೇರುವವರ ಸಂಖ್ಯೆ ಕಡಿಮೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಆಸಕ್ತಿಯುಳ್ಳ ಯುವಕರು ಮಾಜಿ ಸೈನಿಕರ ಸಂಘ ಅಥವಾ ಕುಳೂರಿನಲ್ಲಿರುವ ಸೇನಾ ಕಚೇರಿಯನ್ನು ಸಂಪರ್ಕಿಸಬೇಕು. ಜಿಲ್ಲೆಯ ಯುವಜನರು ಸೇನೆಯಲ್ಲಿ ಹೆಚ್ಚಾಗಬೇಕು.
-ಜಯರಾಜ್‌

ತಮ್ಮನ ಬಗ್ಗೆ ಹೆಮ್ಮೆ ಇದೆ
‘ಸೇನಾ ಶಿಬಿರ ನೋಡಿ ಸೇನೆ ಸೇರಬೇಕು ಎಂದು ಜಯರಾಜ್‌ ಬಯಸಿದ. ಇದು ನನಗೆ ಬಹಳ ಖುಷಿ ನೀಡಿತು. ಕೆಲವು ದಿನಗಳ ಬಳಿಕ ಮಂಗಳಾ ಸ್ಟೇಡಿಯಂನಲ್ಲಿ ರ‍್ಯಾಲಿಯಲ್ಲಿ ಭಾಗವಹಿಸಲು ಬೇಕಾದ ಸಿದ್ಧತೆ ಮಾಡಿದೆ. ಅವನ ಪರಿಶ್ರಮದಿಂದ ಸೇನೆ ಸೇರಿದ. ನನಗೆ ನನ್ನ ಮನೆಯವರಿಗೆ ಜಯರಾಜ್‌ ಬಗ್ಗೆ ಹೆಮ್ಮೆ ಇದೆ.’ 
-ಶ್ರೀರಾಜ್‌, ಜಯರಾಜ್‌ ಅಣ್ಣ

ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.