ನನ್ನ ಮೇಲೆ ಬೈರಪ್ಪ ಸಾಹಿತ್ಯ ಪ್ರಭಾವ: ನಝೀರ್
Team Udayavani, Mar 13, 2017, 5:17 PM IST
ಮೂಡಬಿದಿರೆ : ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬಳಿಕ ಶನಿವಾರ ಮೊದಲ ಬಾರಿಗೆ ಹುಟ್ಟೂರು ಮೂಡಬಿದಿರೆಗೆ ಆಗಮಿಸಿದ ಜಸ್ಟೀಸ್ ಎಸ್. ಅಬ್ದುಲ್ ನಝೀರ್ ಅವರನ್ನು ಮೂಡಬಿದಿರೆ ವಕೀಲರ ಸಂಘದ ವತಿಯಿಂದ ಅಭಿನಂದಿಸಿ ಸಮ್ಮಾನಿಸಲಾಯಿತು.
ಕೋರ್ಟ್ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎ.ಎನ್. ವೇಣುಗೋಪಾಲ ಗೌಡ ಅವರು ನ್ಯಾ| ಮೂ| ಅಬ್ದುಲ್ ನಝೀರ್ ಅವರನ್ನು ಸಮ್ಮಾನಿಸಿದರು.
ತಮಗೆ ನೀಡಿದ ಸಮ್ಮಾನಕ್ಕೆ ಪ್ರತಿಕ್ರಿಯೆ ನೀಡಿದ ನಝೀರ್ ತಮ್ಮ ಶಿಕ್ಷಣ, ವೃತ್ತಿ ಕ್ಷೇತ್ರದ ಗುರುಗಳನ್ನು ಸ್ಮರಿಸಿಕೊಂಡರು. ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ಎದ್ದು ಕಾಣಿಸುವ ಮೂಡಬಿದಿರೆ, ಬೈರಪ್ಪರಂಥವರ ಕಾದಂಬರಿಗಳ ಓದು ನನ್ನ ಮೇಲೆ ಪ್ರಭಾವ ಬೀರಿದೆ ಎಂದು ಅವರು ಹೇಳಿದರು.
ಸರಳ, ಪ್ರಾಮಾಣಿಕ ಗುಣ ನಡತೆಗಳಿಂದ ಹಿರಿಯ ಕಿರಿಯ ನ್ಯಾಯಾಧೀಶರು, ವಕೀಲರ ಪ್ರೀತಿ ಪಾತ್ರರಾಗಿರುವ ನಝೀರ್ ಅವರು ಕೆಳಹಂತದ ನ್ಯಾಯಾಧೀಶರನ್ನು ಗೌರವದಿಂದ ಕಾಣುವವರು ಎಂದು ಜ| ವೇಣುಗೋಪಾಲ ಗೌಡ ಹೇಳಿದರು.
ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜ| ಎ.ಎಸ್. ಬೋಪಣ್ಣ, ಜ| ಜಾನ್ ಮೈಕಲ್ ಡಿ’ ಕುನ್ಹಾ ಮೊದಲಾದವರು ನಝೀರ್ ಅವರ ಸಾಧನೆ, ಗುಣನಡತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಅಬ್ದುಲ್ ನಝೀರ್ ಅವರ ವೃತ್ತಿ ಗುರು ನ್ಯಾಯವಾದಿ ಎಂ.ಕೆ ವಿಜಯ ಕುಮಾರ್ ಮಾತನಾಡಿ, ಪ್ರತಿಭೆ ಮತ್ತು ಸರಳತೆಯಿಂದಾಗಿ ನಝೀರ್ ಈ ಎತ್ತರಕ್ಕೆ ಏರಿದ್ದಾರೆ ಎಂಬುದು ತನಗೆ ಹೆಮ್ಮೆ, ಅಭಿಮಾನದ ಸಂಗತಿ ಎಂದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಬೀಳಗಿ, ಮೂಡಬಿದಿರೆ ನ್ಯಾಯಾಲಯದ ನ್ಯಾಯಾಧೀಶೆ ಅರುಣಾ ಕುಮಾರಿ, ಸೀನಿಯರ್ ಡಿವಿಶನ್ ನ್ಯಾಯಾಧೀಶೆ ಶಿಲ್ಪಾ ಕೆ. ಎಸ್., ಮೂಡಬಿದಿರೆ ವಕೀಲರ ಸಂಘದ ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಲೋಬೋ ಉಪಸ್ಥಿತರಿದ್ದರು.
ಗುರುಗಳಿಗೆ ಅಭಿನಂದನೆ
ಶ್ರೀಮಹಾವೀರ ಕಾಲೇಜಿನಲ್ಲಿ ತನಗೆ ಗುರುವಾಗಿದ್ದು ಪ್ರಸ್ತುತ ಇಲ್ಲಿನ ವಕೀಲರ ಸಂಘದ ಅಧ್ಯಕ್ಷರಾಗಿರುವ ಎಂ. ಬಾಹುಬಲಿ ಪ್ರಸಾದ್ ಅವರು ರಾಷ್ಟ್ರ ಮಟ್ಟದ “ಭಾರತ ಜ್ಯೋತಿ’ ಪ್ರಶಸ್ತಿ ಪಡೆದಿರುವುದನ್ನು ಜ| ನಝೀರ್ ಉಲ್ಲೇಖೀಸಿ ಅವರನ್ನು ಸಮ್ಮಾನಿಸಿದರು.
ಮೂಡಬಿದಿರೆಗೆ ನಝೀರ್ ಕೊಡುಗೆ
ಎಂ. ಬಾಹುಬಲಿ ಪ್ರಸಾದ್ ಪ್ರಸ್ತಾವಿಸಿ, ಇನ್ನೂ ಹೋಬಳಿ ಹಂತದಲ್ಲಿರುವ ಮೂಡಬಿದಿರೆಗೆ ನ್ಯಾಯಾಲಯ ಒದಗಿ ಬರುವಲ್ಲಿ ಹಾಗೂ ಸುಮಾರು 6 ಕೋಟಿ ರೂ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣವಾಗುವಲ್ಲಿ ಅಬ್ದುಲ್ ನಝೀರ್ ಅವರ ಶ್ರಮವನ್ನು ಸ್ಮರಿಸಿದರು.
ಡಾಕ್ಯುಮೆಂಟರಿ
ವಕೀಲರ ಸಂಘದ ಕಾರ್ಯದರ್ಶಿ ಪ್ರವೀಣ್ ಲೋಬೋ ದಂಪತಿ ನಿರ್ಮಿಸಿದ ನಝೀರ್ ಅವರ ಜೀವನದ ಪ್ರಮುಖ ಬೆಳವಣಿಗೆಗಳನ್ನು ಚಿತ್ರಿಸುವ ಸಾಕ್ಷé ಚಿತ್ರವನ್ನು ಪ್ರದರ್ಶಿಸಲಾಯಿತು.
ಹಿರಿಯ ನ್ಯಾಯವಾದಿ ಕೆ. ಆರ್. ಪಂಡಿತ್ ಸಮ್ಮಾನಪತ್ರ ವಾಚಿಸಿದರು. ಕಾರ್ಯದರ್ಶಿ ಪ್ರವೀಣ್ ಲೋಬೋ ವಂದಿಸಿದರು. ನ್ಯಾಯವಾದಿ ಶ್ವೇತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!