ಕರಾವಳಿಯಲ್ಲಿ ಕಮಲ ಕಾರ್ಯಕರ್ತರ ವಿಜಯೋತ್ಸವ
Team Udayavani, May 16, 2018, 7:30 AM IST
ಸಾಕಷ್ಟು ಕುತೂಹಲ ಹುಟ್ಟಿಸಿ, ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಜನರನ್ನು ತುದಿಗಾಲಲ್ಲಿ ನಿಲ್ಲಿಸಿದ್ದು, ಮಂಗಳವಾರ ನಡೆದ ಮತ ಎಣಿಕೆ ಪ್ರಕ್ರಿಯೆ ಅಭ್ಯರ್ಥಿಗಳಿಗೆ, ಬೆಂಬಲಿಗರಿಗೆ ಪರೀಕ್ಷೆಯೇ ಎಂಬಂತೆ ಭಾಸವಾಯಿತು. ಬಹಳ ಪ್ರಬಲ ಪೈಪೋಟಿ ಇದ್ದ ಬೆಳ್ತಂಗಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಕಮಲಕ್ಕೆ ಜನಮತ ಸಾಬೀತಾದಂತೆ ಕಾರ್ಯಕರ್ತರ ಹರ್ಷ ಮೇರೆ ಮೀರಿತು. ಉಭಯ ತಾಲೂಕಿನಾದ್ಯಂತ ಕಾರ್ಯಕರ್ತರು, ವಿಜೇತರ ಅಭಿಮಾನಿಗಳು ವಿಜಯೋತ್ಸವ ಆಚರಿಸಿ, ಸಿಹಿ ಹಂಚಿದರು. ಈ ಕುರಿತ ಕೆಲ ಚಿತ್ರಗಳು ಇಲ್ಲಿವೆ.
1. ಬಂಟ್ವಾಳ: ಬಿ.ಸಿ. ರೋಡ್ ಬಿಜೆಪಿ ಕಚೇರಿ ಎದುರು ರಾಜೇಶ್ ನಾೖಕ್ ಉಳ್ಳಿಪಾಡಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
2. ಪುಂಜಾಲಕಟ್ಟೆ; ಬಿಜೆಪಿ ಕಾರ್ಯಕರ್ತರು ಬೈಕ್ ಜಾಥಾ ನಡೆಸಿ ವಿಜಯೋತ್ಸವ ಆಚರಿಸಿದರು.
3. ಬೆಳ್ತಂಗಡಿ: ಬಿಜೆಪಿ ಚುನಾವಣೆ ಕಚೇರಿ ಎದುರು ಕಾರ್ಯಕರ್ತರಿಂದ ಸಂಭ್ರಮ.
4. ವಿಟ್ಲ : ವಿಟ್ಲದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ನಡೆಸಿದರು.
5. ಪುಂಜಾಲಕಟ್ಟೆ : ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
6. ಬೆಳ್ತಂಗಡಿ: ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ.
7. ವೇಣೂರು: ಪೂಂಜ ಹೆತ್ತವರಾದ ಮುತ್ತಣ್ಣ ಪೂಂಜ, ನಳಿನಿ ಎಂ. ಪೂಂಜ ದಂಪತಿ ಶ್ರೀ ನಂದಿಕೇಶ್ವರ ಕ್ಷೇತ್ರದಲ್ಲಿ
ಪೂಜೆ ಸಲ್ಲಿಸಿದರು.
8. ಮಡಂತ್ಯಾರು: ಸಿಹಿ ಹಂಚಿ ಸಂಭ್ರಮ.
9. ಮಡಂತ್ಯಾರು: ಮಚ್ಚಿನದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಲಾಯಿತು.
10. ಮಡಂತ್ಯಾರು: ಬಿಜೆಪಿ ಬಾವುಟ ಹಿಡಿದು ಕಾರ್ಯಕರ್ತರ ಸಂಭ್ರಮ.
11. ಬಂಟ್ವಾಳ: ರಾಜೇಶ್ ನಾೖಕ್ ಅವರು ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದರು.
12. ವೇಣೂರು: ಪೂಂಜ ಹೆತ್ತವರು ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದರು.
13. ಬೆಳ್ತಂಗಡಿ: ಉಜಿರೆ ಬಳಿ ಅಂಗಡಿಯೊಂದರಲ್ಲಿ ಟಿ.ವಿ. ಮೂಲಕ ಚುನಾವಣ ಫಲಿತಾಂಶ ವೀಕ್ಷಿಸಿದ ಜನತೆ.
14. ವಿಟ್ಲ : ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ವಿಟ್ಲದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ಪ್ರಮುಖರು, ಕಾರ್ಯಕರ್ತರು ವಿಟ್ಲದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ