ಮಾದರಿ ಗ್ರಾಮವಾಗಿ ಕೆಮ್ಮಣ್ಣು -ಪಡುತೋನ್ಸೆ
Team Udayavani, Jan 28, 2018, 1:53 PM IST
ಮಲ್ಪೆ : ಗ್ರಾಮವಿಕಾಸ ಯೋಜನೆಯಡಿ ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ಪಡುತೋನ್ಸೆ, ನೀಲಾವರ, ಹಳುವಳ್ಳಿ, ವಾರಂಬಳ್ಳಿ ಸೇರಿದಂತೆ ಒಟ್ಟು 4 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು, ಈ ಗ್ರಾಮಗಳಲ್ಲಿ ತಲಾ 1 ಕೋ. ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಸಚಿವ ಪ್ರಮೋದ್ ಹೇಳಿದರು. ಶನಿವಾರ ಕೆಮ್ಮಣ್ಣು ಗ್ರಾ.ಪಂ. ವ್ಯಾಪ್ತಿ ಪಡುತೋನ್ಸೆ ಗ್ರಾಮದಲ್ಲಿ 1 ಕೋ.ರೂ. ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾದರಿ ಗ್ರಾಮ
ಯಾವ ಗ್ರಾಮದಲ್ಲಿ ಅತೀ ಹೆಚ್ಚು ಮತ ಬೀಳುತ್ತದೆಯೋ ಆ ಗ್ರಾಮಕ್ಕೆ ಅತೀ ಹೆಚ್ಚು ಅನುದಾನ ನೀಡುತ್ತೇನೆ ಎಂದು ಚುನಾವಣೆಗೆ ಮುನ್ನ ಮಾತು ಕೊಟ್ಟಂತೆ ಅತೀ ಹೆಚ್ಚು ಮತ ಬಿದ್ದ ಪಡುತೋನ್ಸೆ ಗ್ರಾಮಕ್ಕೆ ಈಗಾಗಲೇ 30 ಕೋ. ರೂ. ಅನುದಾನವನ್ನು ನೀಡಲಾಗಿದೆ. ಈಗ ಗ್ರಾಮ ವಿಕಾಸ ಯೋಜನೆಯಡಿಯಲ್ಲೂ ಪಡುತೋನ್ಸೆಯನ್ನು ಸೇರಿಸಲಾಗಿದ್ದು, ಮುಂದೆ ಜನರು ಶಕ್ತಿ ನೀಡಿದರೆ ಇನ್ನೂ 30 ಕೋ. ರೂ. ಅನುದಾನ ಒದಗಿಸುವ ವ್ಯವಸ್ಥೆ ಮಾಡಿ ಪಡುತೋನ್ಸೆಯನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದು ಎಂದು ಅವರು ಹೇಳಿದರು.
ಅಭಿವೃದ್ಧಿಗೆ ಮತ್ತೂಂದು ಹೆಸರು
ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ ಮಾತನಾಡಿ, ಗ್ರಾಮದಲ್ಲಿ ಅಭಿವೃದ್ಧಿಯ ಪರಿಚಯ ಆಗಿರುವುದು ಪ್ರಮೋದ್ ಮಧ್ವರಾಜರ ಕಾಲದಲ್ಲಿ. ಈ ಹಿಂದೆ ಗ್ರಾಮವೊಂದಕ್ಕೆ 3 ಲಕ್ಷ ರೂ. ಅನುದಾನ ಬಂದರೆ ದೊಡ್ಡ ವಿಷಯವಾಗುತ್ತಿತ್ತು. ಈಗ ಪಡುತೋನ್ಸೆ ಗ್ರಾಮದ ಇತಿಹಾಸದಲ್ಲೇ ಮೊದಲ ಬಾರಿಗೆ 30 ಕೋ. ರೂ. ಅನುದಾನ ಬಂದಿದೆ ಎಂದರು. ಸಚಿವ ಪ್ರಮೋದ್ ಅವರು ತನ್ನ ಕ್ಷೇತ್ರಕ್ಕೆ ಇದುವರೆಗೆ 2,000 ಕೋ. ರೂ. ಅನುದಾನ ತರುವ ಮೂಲಕ ರಾಜ್ಯದ ಇತರ ಶಾಸಕರಿಗೆ, ಮಂತ್ರಿಗಳಿಗೆ ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಫೌಸಿಯಾ ಸಾದಿಕ್ ವಹಿಸಿದ್ದರು. ಸುಲೋಚನಾ ಸತೀಶ್, ರಹಮತುಲ್ಲಾ ತೋನ್ಸೆ, ವೆರೋನಿಕಾ ಕರ್ನೇಲಿಯೊ, ರಘುರಾಮ ಶೆಟ್ಟಿ, ನಿತ್ಯಾನಂದ ಕೆಮ್ಮಣ್ಣು, ದಿನೇಶ್ ಅಮೀನ್, ಜಯ ನಾಯಕ್, ಗುರು ರಾಜ್ ರಾವ್, ಶ್ರೀಧರ್, ಇದ್ರಿಸ್, ಜನ್ ವೀವ್, ಸಾಯಿರಾಬಾನು, ಪದ್ಮಾಕ್ಷಿ, ರಾಘವೇಂದ್ರ ಕರ್ಜೆ ಉಪಸ್ಥಿತರಿದ್ದರು. ಜಗದೀಶ್ ನಿರೂಪಿಸಿ, ಲಿಂಗರಾಜು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?