ಕೆಎಫ್ ಡಿಸಿ : ಧರಣಿ ಮುಂದುವರಿಕೆ
Team Udayavani, Nov 22, 2017, 2:48 PM IST
ಸುಳ್ಯ : ನಗರ ಸಮೀಪದ ಮೇದಿನಡ್ಕ ರಬ್ಬರ್ ಕಾರ್ಖಾನೆ ಎದುರು ನಡೆಯುತ್ತಿರುವ ಕೆ ಎಫ್ ಡಿಸಿ ನೌಕರರ ಅನಿರ್ದಿಷ್ಟಾವದಿ ಆಹೋರಾತ್ರಿ ಧರಣಿ ಸತ್ಯಾಗ್ರಹ ಇಲಾಖೆ ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ಭೇಟಿ ಮಾತುಕತೆ ಬಳಿಕವೂ ನ. 29ರ ವರೆಗೆ ಮುಂದುವರಿಯಲಿದೆ.
ಸೋಮವಾರ ಕೆ ಎಫ್ ಡಿಸಿ ಆಡಳಿತ ನಿರ್ದೇಶಕರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಧರಣಿ ನಿರತ ಕೆ ಎಫ್ ಡಿಸಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು. ಮಂಗಳವಾರ ನಿಗಮದ ಕಚೇರಿಯಲ್ಲಿ ಕಾರ್ಮಿಕ ಸಂಘಗಳೊಂದಿಗೆ ಕುಂದುಕೊರತೆ ಸಭೆ ನಡೆದಿದ್ದು, ಅದಕ್ಕೂ ಮೊದಲು ರಬ್ಬರ್ ಕಾರ್ಖಾನೆಯ ಕಚೇರಿಯಲ್ಲಿ ಮಾತುಕತೆ ನಡೆದಿತ್ತು. ಇಲಾಖೆಯ ಆಡಳಿತ ನಿರ್ದೇಶಕರಾಗಿರುವ ಐಎಫ್ಎಸ್ ಅಧಿಕಾರಿ ವಿದ್ಯಾಸಾಗರ್ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಐಎಫ್ಎಸ್ ಅಧಿಕಾರಿ ಕಮಲಾ ಮತ್ತು ಸ್ಥಳೀಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ನಡುವೆ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಪುರಂದರ ಹೆಗ್ಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜಯಪ್ರಕಾಶ ರೈ, ಕೆಪಿಸಿಸಿ ಸದಸ್ಯ ಡಾ| ರಘು, ನ.ಪಂ. ಸದಸ್ಯ ಗೋಕುಲದಾಸ್ ಮತ್ತಿತರನ್ನೊಳಗೊಂಡ ನಿಯೋಗ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬಳಿಕ ಅಧಿಕಾರಿಗಳು ತಿಳಿಸಿದ ನಿರ್ಧಾರದೊಂದಿಗೆ ಧರಣಿ ನಿರತರಲ್ಲಿಗೆ ಆಗಮಿಸಿ ಮಾತುಕತೆ ನಡೆಸಿದರು. ನ. 29ರಂದು ಸಚಿವರು ಮತ್ತು ಕೆಎಫ್ಡಿಸಿನ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸಲು ಒಪ್ಪಿಕೊಂಡಿದ್ದು, ಧರಣಿ ಕೈಬಿಡುವಂತೆ ಮನವೊಲಿಸಿದರು. ಆದರೆ ತೋಟ ತೊಳಿಲಾಲಿರ್ ಸಂಘದ ಅಧ್ಯಕ್ಷ ಚಂದ್ರಲಿಂಗಂ ಮತ್ತು ತೋಟ ಮಜ್ದೂರ್ ಸಂಘದ ಅಧ್ಯಕ್ಷ ಸುಂದರಲಿಂಗಂ ಅವರು, ಸಚಿವರು ಭೇಟಿ ನೀಡುವ ಭರವಸೆ ನೀಡಿದರೂ, ಭೇಟಿಯಾಗುವರೆಗೆ ಧರಣಿ ಮುಂದುವರಿಸುವುದಾಗಿ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದರು.
ನಿಗಮ ಕಚೇರಿಗೆ ಭೇಟಿ
ಧರಣಿ ನಿರತ ಕಾರ್ಮಿಕ ಸಂಘಟನೆಯವರನ್ನು ನಿಗಮ ಕಚೇರಿಯಲ್ಲಿ ಕರೆದ ಕುಂದುಕೊರತೆ ಸಭೆಗೆ ಪಾಲ್ಗೊಳ್ಳುವಂತೆ ಅಧಿಕಾರಿಗಳು ಸೂಚಿಸಿದರು. ಅದರಂತೆ ತೆರಳಿದ ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಸಭೆಯಲ್ಲಿ ತಮ್ಮ ಬೇಡಿಕೆಯನ್ನು ಮಂಡಿಸಿ 16 ಮಂದಿ ಕಾರ್ಮಿಕರನ್ನು ಮರುನಿಯೋಜಿಸುವಂತೆ ಒತ್ತಾಯಿಸಿದರು.
ಕೆ ಎಫ್ ಡಿಸಿ ರಬ್ಬರ್ ಕಾರ್ಖಾನೆಯ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 16 ಮಂದಿ ಖಾಯಂ ಕಾರ್ಮಿಕರನ್ನು ನೆಡುತೋಪುಗಳಿಗೆ ವರ್ಗಾವಣೆಗೊಳಿಸಿರುವುದರ ಹಿಂಪಡೆಯುವಂತೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನ. 16ರಿಂದ ಈ ಪ್ರತಿಭಟನೆ ನಡೆಯುತ್ತಿದೆ
ತುರ್ತು ಸಭೆ: ಪ್ರಯತ್ನ
16 ಮಂದಿ ಕಾರ್ಮಿಕರ ವರ್ಗಾವಣೆಗೊಳಿಸಿದ್ದನ್ನು ಹಿಂಪಡೆದು ಮರುನಿಯೋಜಿಸಲು ಸಕಾರಣ ನೀಡಬೇಕಾಗಿರುವುದರಿಂದ ಹಾಗೂ ಒತ್ತಡಗಳ ಕಾರಣ ಅಧಿಕಾರಿಗಳು ನಿರ್ಧಾರ ಪ್ರಕಟಿಸಿಲ್ಲ. ಧರಣಿ ನಿರತರು ಮುಷ್ಕರ ಮುಂದುವರಿಸಿರುವುದರಿಂದ ನ. 29ರ ಮೊದಲು ದಿನ ನಿಗದಿಪಡಿಸಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಸಮ್ಮುಖ ಮತ್ತು ಕೆಎಫ್ಡಿಸಿ ಆಡಳಿತ ನಿರ್ದೇಶಕರು, ಕಾರ್ಯವಾಹ ನಿರ್ದೇಶಕರ ಉಪಸ್ಥಿತಿಯಲ್ಲಿ ಧರಣಿ ನಿರತ ಸಂಘಟನೆಗಳ ಮುಖಂಡರ ಸಭೆ ಕರೆಯಲು ಪ್ರಯತ್ನ ನಡೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ