ಕಿನ್ನಿಗೋಳಿ: ಬಿಜೆಪಿ ಸಂಘಟನ ಪರ್ವ ಸದಸ್ಯರ ಅಭಿಯಾನ
Team Udayavani, Jul 4, 2019, 5:02 AM IST
ಕಿನ್ನಿಗೋಳಿ: ಬಿಜೆಪಿಯೂ ದೇಶದಲ್ಲಿ ದೊಡ್ಡ ಪಕ್ಷ ವಾಗಿ ಹೊರ ಹೊಮ್ಮಿದ್ದು, 10 ಕೋಟಿ ಜನರು ಸದಸ್ಯರಿದ್ದು, 20 ಕೋಟಿ ಸದಸ್ಯರನ್ನು ಹೊಂದಿಸುವ ಗುರಿ ಇದೆ ಎಂದು ಸದಸ್ಯತ್ವ ಅಭಿಯಾನದ ಜಿಲ್ಲಾ ಸಂಚಾಲಕ ಗೋಪಾಲಕೃಷ್ಣ ಹೇರಳೆ ಹೇಳಿದರು.
ಜು. 3 ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬಿಜೆಪಿ ಸಂಘಟನ ಪರ್ವ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕೇಂದ್ರದಲ್ಲಿ ಮೋದಿ ಸರಕಾರ ಅಭಿವೃದ್ಧಿ, ಸುರಕ್ಷತೆ, ಸೈದ್ಧಾಂತಿಕ ನಿಲುವಿನ ಮೂಲಮಂತ್ರದ ಉದ್ದೇಶವನ್ನಿಟ್ಟುಕೊಂಡು ಮತ್ತೆ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಮೂಲ್ಕಿ-ಮೂಡುಬಿದಿರೆ ಮಂಡಲದ ಅಧ್ಯಕ್ಷ ಈಶ್ವರ್ ಕಟೀಲು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾಲತಾಣಗಳ ಸಂಚಾಲಕ ಸೂರಜ್ ಜೈನ್, ಮುಖಂಡರಾದ ಭುವನಾಭಿರಾಮ ಉಡುಪ, ಜಗದೀಶ ಅಥಿಕಾರಿ, ಎಸ್ಟಿ ಮೋರ್ಚಾದ ಅಧ್ಯಕ್ಷ ಕಿಶೋರ್, ರಾಷ್ಟ್ರೀಯ ಮೀನುಗಾರರ ಪ್ರಕೋಷ್ಟದ ಶೋಭೇಂದ್ರ ಸಸಿಹಿತ್ಲು, ಸಂಚಾಲಕ ವಿನೋದ್ ಸಾಲ್ಯಾನ್ ಬೆಳ್ಳಾಯರು, ಪ್ರ. ಕಾ.ಜಯಾನಂದ ಮೂಲ್ಕಿ ಉಪಸ್ಥಿತರಿದ್ದರು. ಸುಕೇಶ್ ಶಿರ್ತಾಡಿ ನಿರೂಪಿಸಿದರು.