ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ಇಲ್ಲಿ ಭದ್ರತೆಯೇ ಸವಾಲು!
ಲೋಹ ಪರಿಶೋಧಕ ಯಂತ್ರ, ಭದ್ರತಾ ನಿಯಂತ್ರಣ ಕೇಂದ್ರವಿಲ್ಲ; ಆಧುನಿಕ ಶಸ್ತ್ರಾಸ್ತ್ರಗಳ ಕೊರತೆ
Team Udayavani, Aug 31, 2019, 5:51 AM IST
ಸುಬ್ರಹ್ಮಣ್ಯ ಪೇಟೆಯ ನೋಟ.
ಸುಬ್ರಹ್ಮಣ್ಯ: ಕೆಲವು ಉಗ್ರ ಸಂಘಟನೆಗಳು ಪ್ರಮುಖ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ಮಾಡುವ ಗುರಿ ಇರಿಸಿಕೊಂಡಿರುವ ಎಚ್ಚರಿಕೆಯನ್ನು ಗುಪ್ತಚರ ಇಲಾಖೆ ನೀಡಿದೆ. ದೇಗುಲಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ಬಗ್ಗೆ ಸರಕಾರದಿಂದ ಪತ್ರಗಳು ಬರುತ್ತಿರುತ್ತವೆ. ಆದರೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭದ್ರತೆಯೇ ಒಂದು ಸವಾಲಾಗಿದೆ.
ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ. ಇಲ್ಲಿ ಭದ್ರತೆಯ ಲೋಪಗಳ ಪಟ್ಟಿಯೇ ಸಿಗುತ್ತದೆ. ಕುಕ್ಕೆಯ ವಸತಿ ಗೃಹಗಳಲ್ಲಿ ತಂಗುವ ಭಕ್ತರ ಕುರಿತು ಯಾವುದೇ ಮಾಹಿತಿ ಇರುವುದಿಲ್ಲ. ಪ್ರವಾಸಿ ತಾಣವಾಗಿರುವ ಕುಕ್ಕೆಯಲ್ಲಿ ಭಕ್ತರ ಸೋಗಿನಲ್ಲಿ ಆಗಮಿಸುವ ಜೋಡಿಗಳು, ಅಪರಿಚಿತ ವ್ಯಕ್ತಿಗಳು ಇಲ್ಲಿಯ ವಸತಿಗೃಹಗಳಲ್ಲಿ ತಪ್ಪು ವಿಳಾಸ ಹಾಗೂ ಮಾಹಿತಿ ನೀಡಿ ಕೊಠಡಿ ಪಡೆದು ವಾಸವಿರುತ್ತಾರೆ. ಕೊಲೆ, ದರೋಡೆ ಇತ್ಯಾದಿ ಕೃತ್ಯ ನಡೆಸಿದವರು ಇದರಲ್ಲಿ ಸೇರಿಕೊಂಡರೂ ಕೇಳುವವರಿಲ್ಲ. ಕೊಠಡಿ ಕೊರತೆಯಿಂದ ಪಕ್ಕದ ಮನೆಗಳಲ್ಲೂ ಕೊಠಡಿಗಳನ್ನು ಬಾಡಿಗೆಗೆ ನೀಡಲಾಗುತ್ತಿದೆ.
ಭಕ್ತರ ದಟ್ಟಣೆಗೆ ತಕ್ಕಂತೆ ಭದ್ರತಾ ಸಿಬಂದಿ ಇಲ್ಲ. ದೇಗುಲ ಕಾಯುವವರು ಬೆರಳೆಣಿಕೆಯ ಪೊಲೀಸರು, ತರಬೇತಿ ಪಡೆಯದ ಭದ್ರತಾ ಸಿಬಂದಿ, ಗೃಹರಕ್ಷಕ ದಳದವರು. ಇಲ್ಲಿನ ಠಾಣೆಯಲ್ಲಿ ಆಧುನಿಕ ಶಶಾ÷ಸ್ತ್ರಗಳೇ ಇಲ್ಲ. ಇಲ್ಲಿನ ನೆಟ್ಟಣ ರೈಲು ನಿಲ್ದಾಣದ ಮೂಲಕ ಬಹು ಸುಲಭವಾಗಿ ಅಪರಿಚಿತರು ಬರುವ ಸಾಧ್ಯತೆ ಯಾವತ್ತೂ ಇರುತ್ತದೆ. ಇಂತಹ ಹಲವು ಘಟನೆಗಳು ಇದಕ್ಕೆ ನಿದರ್ಶನ ಎಂಬಂತಿವೆ.
ಎಚ್ಚರ ವಹಿಸಬೇಕಿದೆ
ದೇಗುಲದ ಒಳಗೆ ಮತ್ತು ಹೊರಗೆ ಹೆಚ್ಚಿನ ಸಿಸಿ ಟಿವಿ ಕೆಮರಾ ಅಳವಡಿಕೆಯಾಗಬೇಕು. ದೇಗುಲದ ಒಳಗೆ ಸಾಗುವಲ್ಲಿ ಪ್ರವೇಶ ದ್ವಾರದ ಬಳಿ ಮೆಟಲ್ ಡಿಟೆಕ್ಟರ್ ಮಾದರಿಯ ತಪಾಸಣ ಯಂತ್ರ ಅಳವಡಿಸಬೇಕು. ಭದ್ರತಾ ನಿಯಂತ್ರಣ ಕೇಂದ್ರ ಸ್ಥಾಪಿಸಬೇಕು. ಠಾಣೆಗೆ ಹೆಚ್ಚಿನ ಸಿಬಂದಿ ಮತ್ತು ಶಸ್ತ್ರಾಸ್ತ್ರ ಒದಗಿಸಬೇಕು. ಅಪರಿಚಿತ ವ್ಯಕ್ತಿಗಳ ಬಗ್ಗೆ ಸರಿಯಾದ ನಿಗಾ ವಹಿಸಬೇಕು. ವಸತಿ ಗೃಹಗಳಲ್ಲಿ ಆಶ್ರಯ ಪಡೆಯುವವರ ಬಗ್ಗೆ ನಿಗಾ ವಹಿಸಬೇಕು. ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಬೇಕು. ಈ ಎಚ್ಚರ ವಹಿಸಬೇಕು.
ಮಾಹಿತಿ ಒದಗಿಸುತ್ತಿದ್ದೇವೆ
ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಕ್ಷೇತ್ರದ ಎಲ್ಲ ವಸತಿಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಮುನ್ನೆಚ್ಚರಿಕೆ ಕ್ರಮ ವಹಿಸುವ ಕುರಿತು ಮಾಹಿತಿ ನೀಡಿದ್ದೇವೆ. ವಸತಿಗೃಹಗಳ ಮಾಲಕರ ಸಭೆಯನ್ನು ನಡೆಸಿ ಅಗತ್ಯ ಮಾಹಿತಿಗಳನ್ನು ನೀಡಿದ್ದೇವೆ.
– ಚಂದಪ್ಪ ಗೌಡ , ಉಪನಿರೀಕ್ಷಕರು, ಸುಬ್ರಹ್ಮಣ್ಯ ಪೊಲೀಸ್ ಠಾಣೆ
- ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ