ಕುಕ್ಕೆ ದೇಗುಲಕ್ಕೆ ಮರಳಿದ ಕಾರು!
Team Udayavani, Feb 13, 2020, 6:00 AM IST
ಸುಬ್ರಹ್ಮಣ್ಯ: ಕುಕ್ಕೆದೇಗುಲದ ಬಳಕೆಗೆಂದು ದೇಗುಲದ ಸ್ವಂತ ನಿಧಿಯಿಂದ ಖರೀದಿಸಿ ಬಳಿಕ ಬೆಂಗಳೂರು ಕಚೇರಿಗೆ ಕೊಂಡೊಯ್ದ ಹೊಸ ಇನ್ನೋವ ಕಾರನ್ನು ಬುಧವಾರ ಕುಕ್ಕೆ ದೇವಸ್ಥಾನಕ್ಕೆ ಮರಳಿ ಕಳುಹಿಸಲಾಗಿದೆ.
ದೇಗುಲಕ್ಕೆಂದು ಖರೀದಿಸಿದ ಹೊಸ ಕಾರನ್ನು ಬೆಂಗಳೂರಿಗೆ ಕೊಂಡೊಯ್ದ ವಿಚಾರ ಮಾಧ್ಯಮಗಳಲ್ಲಿ ಪ್ರಕಟಗೊಂಡ ಬೆನ್ನಲ್ಲೇ ಸ್ಥಳೀಯ ಭಕ್ತರಿಂದ ವಿರೋಧ ಆರಂಭವಾಗಿತ್ತು. ಇದನ್ನು ಮನಗಂಡ ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಬೆಂಗಳೂರು ಕಚೇರಿ ತಲುಪಿದ ಕಾರನ್ನು ಅಲ್ಲಿ ಉಳಿಸಿಕೊಳ್ಳದೆ ವಾಪಸ್ ಕಳುಹಿಸಿದ್ದಾರೆ. ಕಾರಿನ ಜತೆ ತೆರಳಿದ್ದ ಕುಕ್ಕೆ ದೇಗುಲದ ಅಧಿಕಾರಿ ಸಹಿತ ಕಾರು ಚಾಲಕ ಕಾರಿನ ಜತೆ ಸುಬ್ರಹ್ಮಣ್ಯಕ್ಕೆ ತಲುಪಿದ್ದಾರೆ.
ದೇಗುಲಕ್ಕೆ ಆಗಮಿಸಿದ 26 ಲಕ್ಷ ರೂ. ವೆಚ್ಚದ ಹೊಸ ಕಾರಿಗೆ ದೇಗುಲದ ಮುಂಭಾಗದಲ್ಲಿ ಪೂಜೆ ಸಲ್ಲಿಸಲಾಯಿತು. ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿ,ದೇಗುಲದ ಎಂಜಿನಿಯರ್ ಉದಯ ಕುಮಾರ್, ದೇಗುಲದ ಸಿಬಂದಿ ಉಪಸ್ಥಿತರಿದ್ದರು.
ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಗಣ್ಯ ವ್ಯಕ್ತಿಗಳು ಭೇಟಿ ನೀಡಿದಾಗ ಶಿಷ್ಟಾಚಾರ ಪಾಲನೆಗೆ ಹಾಗೂ ದೈನಂದಿನ ಆಡಳಿತ ನಿರ್ವಹಣೆಗೆಂದು ದೇಗುಲದ ನಿಧಿಯಿಂದ ಹೊಸ ಕಾರನ್ನು ಇಲಾಖೆಯ ಒಪ್ಪಿಗೆ ಪಡೆದು ಫೆ. 10ರಂದು ಖರೀದಿಸಲಾಗಿತ್ತು. ಬಳಿಕ ಬೆಂಗಳೂರು ಕಚೇರಿಯ ಸೂಚನೆಯಂತೆ ಕಾರನ್ನು ಬೆಂಗಳೂರಿಗೆ ಕೊಂಡೊಯ್ಯಲಾಗಿತ್ತು. ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾದ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು