ಕುಮ್ಕಿ ಹಕ್ಕು ಈಗಲೂ ಕೃಷಿಕರು ಅತಂತ್ರ
Team Udayavani, Jul 23, 2017, 8:45 AM IST
ವಿಶೇಷ ವರದಿ
ಪುತ್ತೂರು: ಒಂದೂವರೆ ಶತಮಾನದಿಂದ ಅವಿಭಜಿತ ಜಿಲ್ಲೆಯ 4.38 ಲಕ್ಷ ಕೃಷಿಕರ ಅನುಭೋಗದಲ್ಲಿರುವ ಕುಮ್ಕಿ ಭೂಮಿಯ ಹಕ್ಕು ನೀಡುವ ಸಂಬಂಧ ಆ. 23ರೊಳಗೆ ಕೋರ್ಟ್ಗೆ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕಿದೆ.
ಅವಿಭಜಿತ ದ.ಕ.ದಲ್ಲಿ 4.38 ಲಕ್ಷ ಮಂದಿ 2.15 ಲಕ್ಷ ಎಕ್ರೆ ಕುಮ್ಕಿ ಭೂಮಿ ಹೊಂದಿ ದ್ದಾರೆ. 9.2 ಲಕ್ಷ ಪಹಣಿ ಪತ್ರಗಳಿವೆ ಎನ್ನು ತ್ತದೆ ಅಂದಾಜು ಅಂಕಿ- ಅಂಶ. 2011ರಲ್ಲಿ ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ದ.ಕ.ದಲ್ಲಿ 2.86 ಲಕ್ಷ ಕುಮ್ಕಿದಾರರಿದ್ದಾರೆ.
ಒಂದು ವೇಳೆ ಸರಕಾರ ಕುಮ್ಕಿ ಹಕ್ಕು ರೈತರಿಗೆ ನೀಡಿದರೆ ಅದರಿಂದ ಸರಕಾರಕ್ಕೂ ಆದಾಯವಿದೆ. ಕುಮ್ಕಿದಾ ರನಿಗೆ ತಲಾ 5 ಎಕ್ರೆ ಅಥವಾ 100 ಗಜ ಮಿತಿಯಲ್ಲಿ ಅದರ ಹಕ್ಕು ನೀಡಿದರೆ ಸರಕಾರಕ್ಕೆ ವಾರ್ಷಿಕ 1,400 ಕೋಟಿ ರೂ. ಹೆಚ್ಚುವರಿ ಭೂ ಕಂದಾಯ ಸಿಗುತ್ತದೆ. 5 ಎಕ್ರೆಗಿಂತ ಹೆಚ್ಚುವರಿ ಕುಮ್ಕಿ ಭೂಮಿ ನೀಡುವುದಾದರೆ, ಆತ ಕಟ್ಟುವ ವಾರ್ಷಿಕ ಭೂ ಕಂದಾಯದ 500 ಪಟ್ಟು ಹೆಚ್ಚು ದಂಡ ವಿಧಿಸಬಹುದು. ಆದರೂ ಸರಕಾರಗಳು ಆಸಕ್ತಿ ವಹಿಸುತ್ತಿಲ್ಲ ಎನ್ನುತಾರೆ ನಾಗರಿಕರು.
ಅವಿಭಜಿತ ಜಿಲ್ಲೆ ಭತ್ತ ಪ್ರಧಾನ ಪ್ರದೇಶವಾಗಿತ್ತು. ಕೃಷಿಗೆ ಬೇಕಾದ ಸೊಪ್ಪು ಕಡಿಯಲೆಂದೇ ಬ್ರಿಟಿಷ್ ಸರಕಾರ ವರ್ಗದ ಪಕ್ಕದಲ್ಲಿ ಕುಮ್ಕಿ ಸವಲತ್ತು ನೀಡಿತ್ತು. ಆದರೆ ಭೂಮಿ ಹಕ್ಕು ನೀಡಿರಲಿಲ್ಲ.
1885 ರ ಮಾರ್ಚ್ 10ರಿಂದ ಕುಮ್ಕಿ ಹಕ್ಕು ಉಡುಪಿ, ದ.ಕ. ಭಾಗದಲ್ಲಿ ನೀಡಲಾ ಗಿದೆ. ವರ್ಗಕ್ಕೆ ಲಗ್ತಿàಕರಿಸಿದ ಕುಮ್ಕಿಯನ್ನು ಹಕ್ಕಾಗಿ ನೀಡಬೇಕೆಂಬುದು ಕುಮ್ಕಿ ಹಕ್ಕು ಪರ ಹೋರಾಟಗಾರರ ಆಗ್ರಹ. ಆದರೆ ಈ ವಾದಕ್ಕೆ ಸರಕಾರ ಇನ್ನೂ ಮನ್ನಣೆ ನೀಡಿಲ್ಲ. ಪರಿಣಾಮ ಹೋರಾಟಗಾರರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.
1905ರಲ್ಲಿ ಮೊದಲ ಬಾರಿಗೆ ಸಮಗ್ರ ಭೂಮಿ ಅಳತೆ ಪ್ರಕ್ರಿಯೆ ನಡೆದಿತ್ತು. ಸರಕಾರಿ, ಖಾಸಗಿ, ಅರಣ್ಯ, ಕುಮ್ಕಿ ಇತ್ಯಾದಿಗಳನ್ನು ವರ್ಗೀಕರಿಸಲಾಗಿತ್ತು. 1934ರಲ್ಲಿ ಎರಡನೇ ಸರ್ವೆ ನಡೆಯಿತು. ಪ್ರತೀ 30 ವರ್ಷಕ್ಕೊಮ್ಮೆ ಸರ್ವೆ ಮಾಡಬೇಕೆಂದು 1886ರ ಭೂ ಕಂದಾಯ ಕಾನೂನು ಹೇಳಿತ್ತಾದರೂ 1934ರ ಅನಂತರ ಆಗಿಲ್ಲ ಎನ್ನಲಾಗಿದೆ.
ನ್ಯಾಯಾಲಯಕ್ಕೆ ಮೊರೆ
2016ರ ಜನವರಿ 25ರಂದು ಭಾರತೀಯ ಕಿಸಾನ್ ಸಂಘ ಹೈಕೋರ್ಟ್ ನಲ್ಲಿ ಕುಮ್ಕಿದಾರರ ಪರ ದಾವೆ ಮಂಡಿಸಿತ್ತು. 2017ರ ಮೇ 25ರಂದು ಯಥಾಸ್ಥಿತಿ ಆದೇಶ ನೀಡಿ ರುವ ಕೋರ್ಟ್ ಸರಕಾರದ ಉತ್ತರ ಕೇಳಿತ್ತು. ಸರಕಾರಿ ನ್ಯಾಯವಾದಿಗಳು ಜೂ. 23ರಂದು 2 ತಿಂಗಳ ಸಮಯ ಕೇಳಿದ್ದರು. ಈಗಿನ ಸರಕಾರ ಕುಮ್ಕಿ ಹಕ್ಕು ನೀಡುವ ವಿಚಾರದಲ್ಲಿ ಯಾವ ನಿರ್ಧಾರ ತಳೆಯಲಿದೆ ಎಂಬುದು ಆಗಸ್ಟ್ 23ರೊಳಗೆ ಬಹಿರಂಗಗೊಳ್ಳಲಿದೆ.
ಈ ಮಧ್ಯೆ 1905ರಿಂದ 2004ರ ವರೆಗೆ ತೀರುವೆ ಕಟ್ಟಿದ ರಶೀದಿಗಳನ್ನು ಸುಳ್ಯದ 21 ಗ್ರಾಮಗಳ ರೈತರು ಹೈಕೋರ್ಟ್ಗೆ ದಾಖಲೆ ಸಲ್ಲಿಸಿದ್ದಾರೆ. ಇದು ನ್ಯಾಯಾಲಯದ ವಿಚಾರಣೆ ಸಂದರ್ಭ ಮಹತ್ವದ ದಾಖಲೆಯಾಗಬಹುದು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ