ನಾಲ್ಕೇ ವರ್ಷಗಳಲ್ಲಿ ಸೋರಿಕೆ: ಕಲಾಕೃತಿಗೆ ಧಕ್ಕೆ ಭೀತಿ


Team Udayavani, Aug 6, 2017, 8:00 AM IST

0508gns1b.jpg

ಪುತ್ತೂರು: ಡಾ| ಶಿವರಾಮ ಕಾರಂತರು ಓಡಾಡಿದ ಪರ್ಲಡ್ಕ ಬಾಲ ವನದ ಗ್ಯಾಲರಿ ಸೋರುತಿದೆ. ಅಮೂಲ್ಯ ಕಲಾಕೃತಿ, ಗ್ರಂಥಾಲಯಕ್ಕೆ ಧಕ್ಕೆಯಾಗುವ ಭೀತಿ ಎದುರಾಗಿದೆ. ನಾಲ್ಕೇ ವರ್ಷಗಳಲ್ಲಿ ಕೋಟಿ ರೂ. ವೆಚ್ಚದ ಗ್ಯಾಲರಿ ಕಟ್ಟಡದ ಸೋರುತ್ತಿರುವುದರಿಂದ ಕಾಮಗಾರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನು ಮಾನಗಳು ಕಾಡತೊಡಗಿವೆ. ನಗರದ ಪರ್ಲಡ್ಕ ಬಾಲವನ ಆವರ ಣದಲ್ಲಿ ಸ್ವಿಮ್ಮಿಂಗ್‌ ಫೂಲ್‌ ಖ್ಯಾತಿ ಪಡೆಯಿತು. 

ಇದರ ಬಳಿಕ ಮಕ್ಕಳಿಗೆ ಸ್ಕೇಟಿಂಗ್‌ ತರಬೇತಿ ಕೇಂದ್ರವೂ ಬೇಕೆಂಬ ಇಚ್ಛೆಯನ್ನು ಆಡಳಿತ ಮನಗಂಡಿತು. ಈ ಹಿನ್ನೆಲೆಯಲ್ಲಿ  2013ರಲ್ಲಿ ಸ್ಕೇಟಿಂಗಿಗೆ ಅನುಕೂಲವಾಗುವಂತೆ ಕಟ್ಟಡ ರಚಿಸ ಲಾಯಿತು. ಸ್ಕೇಟಿಂಗ್‌ ತರಬೇತಿ ಕೇಂದ್ರಕ್ಕೆ ಸಾಹಿತ್ಯ ವಲಯದಲ್ಲಿ ವಿರೋಧ ಕೇಳಿಬಂದ ಪರಿಣಾಮ ಕಟ್ಟಡ ಗ್ಯಾಲರಿಯಾಗಿ ಬದ ಲಾವಣೆಗೊಂಡಿತು.

ಗ್ಯಾಲರಿ ವಿನ್ಯಾಸ ಆಕರ್ಷಕವಾಗಿದೆ. ಸ್ಕೇಟಿಂಗ್‌ ತರಬೇತಿ ಪಡೆಯಲು ಅನು ಕೂಲವಾಗುವಂತೆ ಟ್ರಾÂಕ್‌ ನಿರ್ಮಿಸಿ, ಅದಕ್ಕೆ ಕಟ್ಟಡ ನಿರ್ಮಿಸಲಾಗಿದೆ. ಅಂದರೆ ಆಯ ತಾಕಾರದ ಕಟ್ಟಡ. ವಿರೋಧ ಕೇಳಿಬಂದ ಹಿನ್ನೆಲೆಯಲ್ಲಿ ಕಟ್ಟಡದ ಒಂದು ಭಾಗವನ್ನು   ಗೋಡೆ  ಕಟ್ಟಿ ಗ್ರಂಥಾಲಯವಾಗಿ ಪರಿವರ್ತಿ ಸಲಾಯಿತು.

ಜೋಪಾನವಾಗಿ ತೆಗೆದಿಡಬೇಕಿದೆ 
ಕಟ್ಟಡದ ಮೂರು ಭಾಗದಲ್ಲಿ ಪ್ರೊಫೆ ಷನಲ್‌ ಕಲಾವಿದರು ರಚಿಸಿದ ಕಲಾಕೃತಿಗಳು. ಇನ್ನೊಂದು ಭಾಗದಲ್ಲಿ ಗ್ರಂಥಾಲಯ. ಸುಮಾರು 49 ಅಮೂಲ್ಯ ಕಲಾಕೃತಿಗಳಿವೆ. ಶಿವರಾಮ ಕಾರಂತರು ರಚಿಸಿದ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಕಲಾಕೃತಿಗಳು ರೂಪು ಪಡೆದಿವೆ. ಶಿವರಾಮ ಕಾರಂತರು ರಚಿಸಿದ ಸುಮಾರು 400ಕ್ಕೂ ಮಿಕ್ಕಿ ಪುಸ್ತಕಗಳ ಪೈಕಿ 80ಕ್ಕೂ ಅಧಿಕ ಪುಸ್ತಕಗಳು ಇಲ್ಲಿವೆ. ಇವುಗಳನ್ನು ಜೋಪಾನವಾಗಿ ತೆಗೆದಿಡಬೇಕಾದ ಅಗತ್ಯವಿದೆ. ಆದರೆ ಮಳೆ ನೀರು ಬಿದ್ದು, ಕೆಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

1932ರಲ್ಲಿ ಶಿವರಾಮ ಕಾರಂತರು ಆರಂಭಿಸಿದ ಮಕ್ಕಳ ಕೂಟವನ್ನು ಮುಂದು ವರಿಸಿಕೊಂಡು ಹೋಗಬೇಕೆಂದು ಇದೇ ಗ್ಯಾಲರಿಯಲ್ಲಿ ಶಿಬಿರಗಳನ್ನು ಆಯೋಜಿ ಸಲಾಗುತ್ತಿದೆ. 

ಮಳೆಗಾಲದಲ್ಲಿ ನೀರು ಸೋರು
ವುದರಿಂದ, ಸೋರಿಕೆಯಾಗದ ಜಾಗ  ಹುಡುಕಿ ಮಕ್ಕಳು ಕುಳಿತುಕೊಳ್ಳ ಬೇಕಿದೆ.  ಸುಮಾರು 24 ಶಾಲೆಗಳ ಮಕ್ಕಳು  ಈ ಶಿಬಿರದಲ್ಲಿ ಪಾಲ್ಗೊಳ್ಳುತ್ತಾರೆ. ಮುಖ್ಯ ವಾಗಿ ಶಿವರಾಮ ಕಾರಂತರ ಜನ್ಮದಿನವಾದ ಅ. 10 ಹಾಗೂ ಮಕ್ಕಳ ದಿನಾಚರಣೆಯಂದು ಶಿಬಿರ ಹಮ್ಮಿಕೊಳ್ಳಲಾಗುತ್ತದೆ.

ಶಿವರಾಮ ಕಾರಂತರ ಗ್ಯಾಲರಿ ಹಿಂದಿನಂತೆ ಕ್ರಿಯಾಶೀಲವಾಗಿಲ್ಲ ಎಂಬು ದಂತು ನಿಜ. ಹಾಗೆಂದು ಇರುವ ಆಸ್ತಿ ಯನ್ನಾದರೂ ಜೋಪಾನ ಮಾಡುವ ಹೊಣೆಗಾರಿಕೆ ಇದೆಯಲ್ಲ. ಈ ನಿಟ್ಟಿನಲ್ಲಿ ಆಡಳಿತ ಯೋಚನೆ ಮಾಡಬೇಕಾಗಿದೆ.

ಮಳೆ ನೀರು ಬಿದ್ದ ಕಾರಣ ಇಲೆಕ್ಟ್ರಾನಿಕ್‌ ಉಪಕರಣಗಳು ಕೈಕೊಡಲು ಆರಂಭಿಸಿವೆ. ವಿದ್ಯುತ್‌ ಬಲ್ಬ್ಗಳ ಒಳಗಡೆ ನೀರು ನಿಂತಿವೆ. ಸರಿಯಾಗಿ ಬೆಳಕು ನೀಡುತ್ತಿಲ್ಲ. ಸಿಡಿಯುವ ಸಂಭವವೂ ಇದೆ. ಹೀಗೆ ಮುಂದುವರಿದರೆ ಗೋಡೆಗಳಲ್ಲಿ ವಿದ್ಯುತ್‌ ಸಂಚಾರ ಉಂಟಾ ಗಬಹುದು. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುವುದು ಒಳಿತು.

ಕಾರಂತರ ಕೃತಿಗೆ ಅಪಚಾರ
ಗ್ಯಾಲರಿಯ ಗೋಡೆಗೆ ಕಲಾಕೃತಿಗಳನ್ನು ನೇತು ಹಾಕಲಾಗಿದೆ. ಇವುಗಳ ಮೇಲೆ ಮಳೆ ನೀರು ಬಿದ್ದು ವಿರೂಪಗೊಳ್ಳುವ ಸಂಭ ವವಿದೆ. ಅವುಗಳು ವಿರೂಪಗೊಂಡರೆ, ಶಿವರಾಮ ಕಾರಂತರ ಕೃತಿಗೇ ಅಪಚಾರ ಎಸಗಿದಂತೆ. 

ಪುಸ್ತಕಗಳಿಗೂ ಹಾನಿ!
ನೂರಾರು ಪುಸ್ತಕಗಳು ಗ್ಯಾಲರಿಯೊಳಗಡೆಯಿದೆ. ಕೆಲ ಸಮಯಗಳ ಹಿಂದೆ ಇಲ್ಲಿ ಆರ್ಯಾಪು ಗ್ರಾ.ಪಂ.ನ ಗ್ರಂಥಾಲಯ ಇತ್ತು. ಸದ್ಯ ಇದನ್ನು ಕುಂಜೂರು ಪಂಜಕ್ಕೆ ಶಿಫ್ಟ್‌ ಮಾಡಲಾಗಿದೆ. ಒಂದಷ್ಟು ಪುಸ್ತಕಗಳು ಸದ್ಯ ಇದ್ದು, ಅದನ್ನು ಜೋಪಾನವಾಗಿ ಇಡಬೇಕಾಗಿದೆ. ಆಸಕ್ತ ಓದುಗರು, ಪ್ರವಾಸಿಗರು ಸಂದರ್ಶನ ನೀಡಿ, ಪುಸ್ತಕಗಳತ್ತ ಗಮನ ಹರಿಸುತ್ತಾರೆ. ಗ್ರಂಥಾಲಯದ ಒಂದು ಗೋಡೆಗೆ ಸಂಪೂರ್ಣ ಗಾಜು ಅಳವಡಿಸಿದ್ದು, ಇದರ ಸೆರೆಯಿಂದಲೂ ನೀರು ಒಳಬರುತ್ತಿದೆ.

ಗಮನಕ್ಕೆ ತರುತ್ತೇನೆ
ಗ್ಯಾಲರಿ ಸೋರಿಕೆ ಬಗ್ಗೆ  ಬಾಲವನ ಅಭಿವೃದ್ಧಿ  ಸಮಿತಿಯ ರಾಜ್ಯ ಸದಸ್ಯರಾಗಿರುವ ಸಹಾಯಕ ಆಯುಕ್ತರ ಗಮನಕ್ಕೆ ತರುತ್ತೇನೆ. ಸದ್ಯ ಸಹಾಯಕ ಆಯುಕ್ತರು ರಜೆಯಲ್ಲಿದ್ದಾರೆ. ಅವರು ಪರಿಶೀಲನೆ ಮಾಡಿ ಮಾಹಿತಿ ನೀಡಬೇಕು.

– ಅನಂತ ಶಂಕರ
ತಹಶೀಲ್ದಾರ್‌

– ವಿಶೇಷ ವರದಿ

ಟಾಪ್ ನ್ಯೂಸ್

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.