ಕುಂದಾಪುರ ತಾಲೂಕು ಗಾವಳಿ : ಡುಬ್ಬದ ಗೂಳಿಯ (ನಂದಿ) ಚಿತ್ರ ಪತ್ತೆ


Team Udayavani, Oct 3, 2018, 1:30 AM IST

nandi-3-10.jpg

ಕಾಪು: ಕುಂದಾಪುರ ತಾಲೂಕಿನ ಹಳ್ಳಾಡಿ – ಹರ್ಕಾಡಿ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಗಾವಳಿಯ ಅರಿಕಲ್‌ ನೆಲೆಯ ಬಂಡೆಗಳಲ್ಲಿ ಮರು ಅಧ್ಯಯನ ನಡೆಸಿದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿದ್ಯಾರ್ಥಿಗಳಾದ ಸುಭಾಸ್‌ ನಾಯಕ್‌ ಬಂಟಕಲ್ಲು ಮತ್ತು ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಬಂಡೆಯ ಪೂರ್ವ ದಿಕ್ಕಿಗೆ ಮುಖ ಮಾಡಿಕೊಂಡಿರುವ ಸಣ್ಣ ಗಾತ್ರದ ಡುಬ್ಬದ ಗೂಳಿಯ (ನಂದಿ) ಚಿತ್ರವನ್ನು ಗುರುತಿಸಿದ್ದಾರೆ.

ಪೂರ್ವಕ್ಕೆ ಮುಖಮಾಡಿ ನಿಂತಿರುವ ಈ ನಂದಿಯು 28 ಇಂಚು ಉದ್ದ ಹಾಗೂ 22 ಇಂಚು ಎತ್ತರದ ಹಾಗೂ 1 ಸೆಂ.ಮೀ. ದಪ್ಪದಲ್ಲಿ ಕೊರೆಯಲಾಗಿದೆ. ನಂದಿಯು ಎತ್ತರದ ಡುಬ್ಬ, ಉದ್ದನೆಯ ಅಂಡಾಕಾರದ ಕೊಂಬುಗಳನ್ನು ಹೊಂದಿದ್ದು ಸವೆದ ಕಾರಣ ಅಸ್ಪಷ್ಟವಾಗಿದೆ. ನಂದಿಯ ಹಿಂಬದಿಯ ಕಾಲುಗಳನ್ನು ಉದ್ದವಾಗಿ ಚಿತ್ರಿಸಲಾಗಿದೆ. ಈ ನೆಲೆಯಲ್ಲಿ ಇದುವರೆಗೆ ದೊರೆತ ಬಂಡೆ ಚಿತ್ರಗಳು 2 ಮತ್ತು 3 ಸೆಂ. ಮೀ. ದಪ್ಪವಾಗಿ ಕೊರೆಯಲ್ಪಟ್ಟಿದ್ದು, ಈ ಚಿತ್ರವು ಇತರ ಬಂಡೆ ಚಿತ್ರಗಳಿಗಿಂತ ಪ್ರಾಚೀನವಾಗಿರುವ ಸಾಧ್ಯತೆಯೇ ಹೆಚ್ಚು ಎಂದು ಹೇಳಲಾಗಿದೆ.

ಹಿಂದೆಯೂ ನಡೆದಿತ್ತು ಸಂಶೋಧನೆ 
ಗಾವಳಿಯ ಅರಿಕಲ್‌ ನೆಲೆಯ ಬಂಡೆಗಳಲ್ಲಿ ಚಿತ್ರಗಳ ಕುರಿತಂತೆ ಮೊದಲಿಗೆ ಡಾ| ಬಿ. ವಸಂತ ಶೆಟ್ಟಿ ಹಾಗೂ ಡಾ| ಜಗದೀಶ್‌ ಶೆಟ್ಟಿ ಅವರು 1983ರಲ್ಲಿ ಸಂಶೋಧಿಸಿ ದಾಖಲಿಸಿದರು. ನಂತರದಲ್ಲಿ ಅ. ಸುಂದರ, ಟಿ. ಮುರುಗೇಶಿ, ಪ್ರೊ| ಎಸ್‌.ಎ. ಕೃಷ್ಣಯ್ಯ, ಅವರು ಅಧ್ಯಯನ ನಡೆಸಿದ್ದಾರೆ. ಇಲ್ಲಿನ  ಬಂಡೆಗಳ ಮೇಲೆ ನಂದಿ, ನಂದಿ ಮಂಡಲ, ಗುಳಿಗಳು, ಚೆನ್ನಮಣೆ, ಇತರ ಜ್ಯಾಮೀತಿಯ ಬಂಡೆ ಚಿತ್ರಗಳು, ಶಿರಚ್ಛೇಧಗೊಂಡಿರುವ ಮಾನವ, ಕೂಡಿಸು ರೀತಿಯ ಚಿತ್ರ ಹಾಗೂ ಇತರ ಅಸ್ಪಷ್ಟ ಚಿತ್ರಗಳನ್ನು ಕಾಣಬಹುದಾಗಿದೆ.

ಆರಂಭದಲ್ಲಿ ಈ ನಿವೇಶನವನ್ನು ಬೃಹತ್‌ ಶಿಲಾಯುಗದ ನೆಲೆಯೆಂದು ಗುರುತಿಸಲಾಗಿದ್ದರೂ, 2010ರಲ್ಲಿ ಪ್ರೊ| ಟಿ. ಮುರುಗೇಶಿ ಮತ್ತು ತಂಡ ಹೊಸ ಬಂಡೆ ಚಿತ್ರಗಳ ಆವಿಷ್ಕಾರದೊಂದಿಗೆ, ನೂತನ ಶಿಲಾಯುಗದ ಡಾಲರೈಟ್‌ ಶಿಲೆಯಿಂದ ತಯಾರಿಸಿದಂತಹ ಕಲ್ಲಿನ ಕೊಡಲಿ, ಸುತ್ತಿಗೆ, ಮಧ್ಯದಲ್ಲಿ ತೂತಿರುವ ದುಂಡನೆಯ ಕಲ್ಲಿನ ರಿಂಗುಗಳನ್ನು ಸಂಶೋಧಿಸಿದರು. ಹಾಗೆಯೇ ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಳೆ ಶಿಲಾಯುಗದಿಂದ ಆರಂಭಗೊಂಡ ಸಂಸ್ಕೃತಿಯ ಅವಶೇಷಗಳಿಂದ ಹಿಡಿದು ಬೃಹತ್‌ ಶಿಲಾಯುಗದ ಕಂಡಿಕೋಣೆ ಗೋರಿಗಳು (ಕರ್ಕುಂಜೆ ಪ್ರದೇಶದಲ್ಲಿ ಡಾ| ಬಿ. ವಸಂತ ಶೆಟ್ಟಿ ಹಾಗೂ ಡಾ|  ಜಗದೀಶ್‌ ಶೆಟ್ಟಿಯವರ ಶೋಧನೆ) ಹಾಗೆಯೇ ಪ್ರಾಚ್ಯಾವಶೇಷಗಳು ದೊರೆತಿವೆ. ಈ ನೆಲೆಯ ಮರು ಅಧ್ಯಯನಕ್ಕೆ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ| ಜಗದೀಶ್‌ ಶೆಟ್ಟಿ ಹಾಗೂ ಉಡುಪಿ ಸೈಂಟ್‌ ಮೇರಿಸ್‌ ಕನ್ನಡ ಶಾಲೆಯ ಉಡುಪಿ ಇಲ್ಲಿನ ನಿವೃತ್ತ ಶಿಕ್ಷಕ ಶ್ರೀಧರ್‌ ಭಟ್‌ ಸಹಕಾರ ನೀಡಿದ್ದಾರೆ.

ಟಾಪ್ ನ್ಯೂಸ್

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

ಬಿಗ್‌ಬಾಸ್‌ ವಿನ್ನರ್‌ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.