ಲೋಕಾಯುಕ್ತ ಪ್ರಕರಣ: ಒಂದು ವರ್ಷದಲ್ಲಿ 12 ಮಂದಿಗೆ ಶಿಕ್ಷೆ
Team Udayavani, Oct 9, 2022, 12:38 AM IST
ಮಂಗಳೂರು: ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸರು ಕಳೆದ ಒಂದು ವರ್ಷ ಅವಧಿಯಲ್ಲಿ ದಾಳಿ ನಡೆಸಿ ದಾಖಲಿಸಿಕೊಂಡ ಪ್ರಕರಣಗಳಲ್ಲಿ ನ್ಯಾಯಾಲಯವು 12 ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ.
ಲೋಕಾಯುಕ್ತ ಮತ್ತೆ ಬಲ ಪಡೆದುಕೊಂಡ ಹಿನ್ನೆಲೆಯಲ್ಲಿ ಹಿಂದಿನ ಪ್ರಕರಣಗಳ ಬಗ್ಗೆ ಲೋಕಾಯುಕ್ತ ಪ್ರಕಟನೆ ನೀಡಿದೆ.
ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ| ಅನಿತಾ ರವಿಶಂಕರ್ ವಿರುದ್ಧದ ಪ್ರಕರಣದಲ್ಲಿ ನ್ಯಾಯಾಲಯವು 2021ರ ಜು.9ರಂದು 2 ವರ್ಷ 3 ತಿಂಗಳ ಸಾದಾ ಸಜೆ ಮತ್ತು 15,000 ರೂ. ದಂಡ ವಿಧಿಸಿತ್ತು.
ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿ ಪಿ.ಬಿ.ಶಿವರಾಜ್ ವಿರುದ್ಧ ದಾಖಲಾದ ಪ್ರಕರಣದಲ್ಲಿ 2021ರ ಜು.26ರಂದು 6 ವರ್ಷ ಸಾದಾ ಸಜೆ ಮತ್ತು 34 ಲ.ರೂ. ದಂಡ ವಿಧಿಸಿತ್ತು.
ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ನಗರ ಯೋಜನಾಧಿಕಾರಿ ಎಸ್.ಇ ಮಂಜುನಾಥ ಸ್ವಾಮಿ ವಿರುದ್ಧ ದಾಳಿ ಪ್ರಕರಣದಲ್ಲಿ 2021ರ ಅ.28ರಂದು ನ್ಯಾಯಾಲಯವು 6 ವರ್ಷಗಳ ಸಾದಾ ಸಜೆ ಮತ್ತು 35 ಲ.ರೂ. ದಂಡ ವಿಧಿಸಿತ್ತು. ಉಳ್ಳಾಲ ಪುರಸಭೆ ಮುಖ್ಯಾಧಿಕಾರಿ ಚೇತನ್ ಎಸ್.ಕೊಳವಿ ವಿರುದ್ಧ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯವು 2021ರ ನ.11ರಂದು 3 ವರ್ಷ 6 ತಿಂಗಳ ಸಾದಾ ಸಜೆ ಮತ್ತು 20,000 ರೂ. ದಂಡ ವಿಧಿಸಿತ್ತು.
ಬೆಳ್ತಂಗಡಿ ತಾಲೂಕು ಕಚೇರಿ ಸರ್ವೇಯರ್ ಟಿ.ಪಿ. ಹೀರೇಗೌಡ ವಿರುದ್ಧದ ಪ್ರಕರಣದಲ್ಲಿ 2021ರ ಡಿ.2ರಂದು 2 ವರ್ಷ 15 ದಿನಗಳ ಸಾದಾ ಸಜೆ ಮತ್ತು 5,000 ರೂ. ದಂಡ ವಿಧಿಸಲಾಗಿತ್ತು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ಶಕ್ತಿನಗರ ಡಿಪೋದ ಕಿರಿಯ ಸಹಾಯಕ ಎಂ.ವಿ.ರಾಜನ್ ನಂಬಿಯಾರ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ 2021ರ ಡಿ.13ರಂದು 8 ವರ್ಷಗಳ ಸಾದಾ ಸಜೆ ಮತ್ತು 75 ಲ.ರೂ. ದಂಡ ವಿಧಿಸಲಾಗಿತ್ತು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಯು.ಜಿತೇಂದ್ರನಾಥ ಮತ್ತು ಗುತ್ತಿಗೆ ಆಧಾರಿತ ಕಂಪ್ಯೂಟರ್ ಆಪರೇಟರ್ ಅನುಷಾ ವಿರುದ್ಧದ ಪ್ರಕರಣದಲ್ಲಿ 2021ರ ಡಿ.16ರಂದು ನ್ಯಾಯಾಲಯವು ಯು.ಜಿತೇಂದ್ರನಾಥಗೆ 7 ವರ್ಷ 8 ತಿಂಗಳ ಸಾದಾ ಸಜೆ ಮತ್ತು 30,000 ರೂ. ದಂಡ ವಿಧಿಸಿತ್ತು. ಅನುಷಾಳಿಗೆ 3 ವರ್ಷ 2 ತಿಂಗಳು ಸಾದಾ ಸಜೆ ಮತ್ತು 10,000 ರೂ. ದಂಡ ವಿಧಿಸಿತ್ತು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ