Mangaluru ದನಗಳನ್ನು ಕಳವುಗೈದು ವಧೆ: ನಾಲ್ವರ ಬಂಧನ
Team Udayavani, Apr 8, 2024, 9:27 PM IST
ಮಂಗಳೂರು: ದನಗಳನ್ನು ಕಳವುಗೈದು ವಧೆ ಮಾಡಿ ಅವುಗಳ ಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ನಾಲ್ವರನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ರವಿವಾರ ಬಂಧಿಸಿದ್ದಾರೆ.
ಕಣ್ಣೂರು ಕುಂಡಾಲದ ಬದ್ರುದ್ದೀನ್ (65), ಜಿ. ಅಬ್ದುಲ್ ಮಜೀದ್ (43), ಖಲೀಲ್ (35) ಮತ್ತು ಹರೇಕಳದ ಮಹಮ್ಮದ್ (56) ಬಂಧಿತ ಆರೋಪಿಗಳು. ಕುಂಡಾಲದಲ್ಲಿರುವ ಬದ್ರುದ್ದೀನ್ನ ಮನೆಯಲ್ಲಿ ಮಜೀದ್, ಮಹಮ್ಮದ್, ಖಲೀಲ್, ಅನ್ಸಾರ್ ಮತ್ತು ಇತರರು ಸೇರಿಕೊಂಡು ಕಳವು ಮಾಡಿಕೊಂಡು ಬಂದ ಗೋವುಗಳನ್ನು ವಧೆ ಮಾಡಿ ಮಾರಾಟದ ಪ್ರಯತ್ನದಲ್ಲಿದ್ದರು.
ಆ ವೇಳೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ವಧೆ ಮಾಡಿದ್ದ ದನದ ಕಳೇಬರ ಮತ್ತು ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಅಂದಾಜು ಮೌಲ್ಯ 32,850 ರೂ. ಆಗಿದೆ. ಈ ಪ್ರಕರಣದಲ್ಲಿ ಇನ್ನೂ 5 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ