ಶಿರೂರು ಗ್ರೀನ್ವ್ಯಾಲಿ ಸ್ಥಾಪಕ ಸೈಯದ್ ಅಬ್ದುಲ್ ಖಾದರ್ ಬಾಶು ನಿಧನ
Team Udayavani, Jul 26, 2017, 7:40 AM IST
ಬೈಂದೂರು: ಅನಿವಾಸಿ ಭಾರತೀಯ ಉದ್ಯಮಿ, ಶಿರೂರು ಗ್ರೀನ್ವ್ಯಾಲಿ ನ್ಯಾಶನಲ್ ಸ್ಕೂಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೈಯದ್ ಅಬ್ದುಲ್ ಖಾದರ್ ಬಾಶು (54) ಅವರು ಹೃದಯಘಾತದಿಂದ ಮಂಗಳೂರಿನಲ್ಲಿ ಜು. 25ರಂದು ನಿಧನಹೊಂದಿದರು.
ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ದುಬಾೖಯ ಖ್ಯಾತ ಉದ್ಯಮಿಯಾಗಿ ಜನಪ್ರಿಯರಾಗಿದ್ದ ಅವರು ಹುಟ್ಟೂರು ಶಿರೂರಿನಲ್ಲಿ ಪ್ರತಿಷ್ಠಿತ ಗ್ರೀನ್ವ್ಯಾಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬೆಳೆಸಿದರು.