ಮಂಗಳೂರಿನಲ್ಲಿ  ವಾಸ್ತವ್ಯವಿದ್ದು  ನಿರ್ಗಮಿಸಿದ ಮೋದಿ


Team Udayavani, Dec 20, 2017, 3:00 PM IST

20-24.jpg

ಮಂಗಳೂರು: ನಗರದಲ್ಲಿ ಇದೇ ಮೊದಲ ಬಾರಿಗೆ ಸೋಮವಾರ ರಾತ್ರಿ ವಾಸ್ತವ್ಯವಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ 7.45ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ನಿರ್ಗಮಿಸಿದರು.

ಲಕ್ಷದ್ವೀಪ, ಕೇರಳ ಹಾಗೂ ತಮಿಳುನಾಡುಗಳಲ್ಲಿ   ಒಖೀ ಚಂಡಮಾರುತದಿಂದ ಉಂಟಾಗಿರುವ ಹಾನಿಯ ಪರಿ ಶೀಲನೆಗಾಗಿ ಸೋಮವಾರ ರಾತ್ರಿ ಹೊಸದಿಲ್ಲಿ ಯಿಂದ ಹೊರಟು ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಕದ್ರಿಹಿಲ…Õನ ಸಕೀìಟ್‌ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಮೋದಿ ರಾತ್ರಿ 12 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ಸಕೀìಟ್‌ ಹೌಸ್‌ಗೆ ಪ್ರಯಾಣಿಸಿದರು. ಸಕೀìಟ್‌ ಹೌಸ್‌ನಲ್ಲಿ ಸೂಟ್‌ ನಂ.1ರ ಕೊಠಡಿಯನ್ನು ಪ್ರಧಾನಿ ವಾಸ್ತವ್ಯಕ್ಕೆ ವಿಶೇಷವಾಗಿ ಸಜ್ಜುಗೊಳಿಸಲಾಗಿತ್ತು.

ಮಂಗಳವಾರ ಮುಂಜಾನೆ ಸಕೀìಟ್‌ ಹೌಸ್‌ನಲ್ಲೇ ಉಪಾಹಾರ ಸೇವಿಸಿದ ಅವರು ಬಳಿಕ 7.30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದರು. ಅಲ್ಲಿಂದ ಮತ್ತೆ ವಿಶೇಷ ವಿಮಾನದ ಮೂಲಕ ಲಕ್ಷದ್ವೀಪಕ್ಕೆ ನಿರ್ಗಮಿಸಿದರು. ಪ್ರಧಾನಿ ಜತೆಗೆ ಕೇಂದ್ರ ಭೂಸಾರಿಗೆ ಮತ್ತು ನೌಕಾಯಾನ ರಾಜ್ಯ ಸಚಿವ ಪೊಣ್‌ ರಾಧಾಕೃಷ್ಣನ್‌ ಅವರೂ ಪ್ರಯಾಣಿಸಿದ್ದಾರೆ. ರಾಜ್ಯ ಡಿಜಿಪಿ ನೀಲಮಣಿ ಎನ್‌. ರಾಜು, ಎಡಿಜಿಪಿ ಕಮಲ್‌ ಪಂತ್‌, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಜಿಲ್ಲಾ ಎಸ್‌ಪಿ ಸುಧೀರ್‌ ಕುಮಾರ್‌ ರೆಡ್ಡಿ ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಯವ ರನ್ನು ಶಿಷ್ಟಾಚಾರದಂತೆ ಬೀಳ್ಕೊಟ್ಟರು. ಸಂಸದ ನಳಿನ್‌, ಮಾಜಿ ಶಾಸಕ ಯೋಗೀಶ್‌ ಭಟ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯ ದರ್ಶಿ ಕಿಶೋರ್‌ ರೈ, ಜಿಲ್ಲಾಧಿಕಾರಿ ಸೆಂಥಿಲ್‌ ಹಾಜರಿದ್ದರು. 

“ನಮೋ ಮಂಜುನಾಥ’ ಹಸ್ತಾಂತರ
ಪ್ರಧಾನಿ ನರೇಂದ್ರ ಮೋದಿ ಅ. 29ರಂದು ಉಜಿರೆ ಹಾಗೂ ಧರ್ಮಸ್ಥಳಕ್ಕೆ ಭೇಟಿ ನೀಡಿದ ಕುರಿ ತಾಗಿನ ಮಾಹಿತಿ, ಚಿತ್ರಸಂಪುಟಗಳುಳ್ಳ “ನಮೋ ಮಂಜುನಾಥ’ ಎನ್ನುವ ಪುಸ್ತಕವನ್ನು  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪುಸ್ತಕ ಪ್ರಕಾಶನ ಮಾಲೆ ಮೂಲಕ ಉದಯವಾಣಿ ಪತ್ರಕರ್ತ ಲಕ್ಷ್ಮೀ ಮಚ್ಚಿನ ಸಂಪಾ ದನೆಯಲ್ಲಿ ಹೊರತರಲಾಗಿತ್ತು. ಈ ಪುಸ್ತಕವನ್ನು ಸಂಸದ ನಳಿನ್‌ ಅವರು ಮಂಗಳವಾರ ಪ್ರಧಾನಿ ಮೋದಿ ಅವರಿಗೆ ಹಸ್ತಾಂತರಿಸಿದರು. 

ಪುಸ್ತಕ ಕನ್ನಡದಲ್ಲಿದ್ದ ಕಾರಣ ವೀಕ್ಷಿಸಿದ ಮೋದಿಯವರು ಚಿತ್ರಗಳನ್ನು ನೋಡಿ, ಪುಸ್ತಕದ ಗುಣಮಟ್ಟ ಕಂಡು ಶ್ಲಾ ಸಿದರು. ಸಕೀìಟ್‌ ಹೌಸ್‌ ಮುಂದೆ ಅಭಿಮಾನಿಗಳು ಪ್ರಧಾನಿ ಮೋದಿ ಅವರನ್ನು ನೋಡುವುದಕ್ಕಾಗಿ ಬೆಳಗ್ಗೆ 7 ಗಂಟೆಯಿಂದಲೇ ಸಕೀìಟ್‌ ಹೌಸ್‌ನ ಹೊರಗಡೆ ರಸ್ತೆಯಲ್ಲಿ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಜಮಾಯಿಸಲಾರಂಭಿಸಿದ್ದರು. ಬೆಳಗ್ಗೆ 7.30ಕ್ಕೆ ಸಕೀìಟ್‌ ಹೌಸ್‌ನಿಂದ ಹೊರಬಂದ ಪ್ರಧಾನಿ ಮೋದಿ ಹೊರಗೆ ಕಾದು ನಿಂತಿದ್ದ ಜನರನ್ನು ಕಂಡು ತಮ್ಮ ಕಾರನ್ನು ನಿಧಾನಿಸಿ, ಜನರತ್ತ ಕೈಬೀಸಿದರು. ಜನರು ಪ್ರತಿಯಾಗಿ ಅವರತ್ತ ಕೈಬೀಸಿ “ಮೋದಿ, ಮೋದಿ’ ಎಂದು ಜೈಕಾರ ಕೂಗಿದರು.

ಜನರ ಸನಿಹಕ್ಕೆ …
ಪ್ರಧಾನಿ ಮೋದಿ ಅವರನ್ನು ಕಾಣಲು ವಿಮಾನ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ಸೋಮವಾರ ಮಧ್ಯರಾತ್ರಿ ಭಾರೀ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ನೆರೆದಿದ್ದರು. ಪೊಲೀಸ್‌ ಮೂಲಗಳ ಪ್ರಕಾರ, ಮೋದಿ ಅವರಿಗೆ ಸ್ವಾಗತ ಕೋರುವುದಕ್ಕೆ 2,500ಕ್ಕೂ ಅಧಿಕ ಕಾರ್ಯಕರ್ತರು ಅಲ್ಲಿ ಸೇರಿದ್ದರು. ಮೋದಿ ಅವರು ವಿಮಾನ ನಿಲ್ದಾಣದಿಂದ ಹೊರಬಂದ ಸಂದರ್ಭದಲ್ಲಿ ಅವರು ಕಾರನ್ನು ನಿಲ್ಲಿಸಿ ಅಲ್ಲಿಂದಲೇ ಜನರತ್ತ ಕೈಬೀಸಿ, ನಮಸ್ಕರಿಸಿ ಸಕೀìಟ್‌ ಹೌಸ್‌ಗೆ ತೆರಳುತ್ತಾರೆ ಎಂದು ಭದ್ರತೆಯಲ್ಲಿ ನಿರತರಾಗಿದ್ದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬಂದಿ ಭಾವಿಸಿದ್ದರು. ಆ ಪ್ರಕಾರವೇ ಸೂಕ್ತ ಬಂದೋಬಸ್ತ್ ಹಾಗೂ ಜನರನ್ನು ನಿಯಂತ್ರಿಸುವುದಕ್ಕೆ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಪ್ರಧಾನಿ ಭದ್ರತೆಗಿದ್ದ ಎಸ್‌ಪಿಜಿ ಕಮಾಂಡೊ ಪಡೆ ಕೂಡ ಅದೇ ಲೆಕ್ಕಾಚಾರ ಹೊಂದಿತ್ತು. ಆದರೆ ನಡೆದದ್ದೇ ಬೇರೆ. ಪ್ರಧಾನಿ ಮೋದಿ ಕಾರಿನಲ್ಲಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ, ನೆರೆದ ಕಾರ್ಯಕರ್ತರೆಲ್ಲ “ಮೋದಿ, ಮೋದಿ’ ಎಂದು ಘೋಷಣೆ ಕೂಗ ಲಾರಂಭಿಸಿದರು. ಆಗ ಮೋದಿಯವರು ಕಾರು ನಿಲ್ಲಿಸಿ, ಜನ ರತ್ತ ಕೈಬೀಸಿದರು. ಅವರು ಇನ್ನೇನು ನಿರ್ಗಮಿಸುತ್ತಾರೆ ಎಂದು ಪೊಲೀಸರು ಅಂದುಕೊಳ್ಳುತ್ತಿದ್ದಂತೆ, ಮೋದಿ ಏಕಾಏಕಿ ಕಾರಿನಿಂದ ಇಳಿದು ನೇರ ವಾಗಿ ಕಾರ್ಯಕರ್ತರ ಬಳಿ ಬಂದರು. ಇದರಿಂದ ಪೊಲೀಸರು ಹಾಗೂ ಭದ್ರತಾ ಸಿಬಂದಿ ಕ್ಷಣಕಾಲ ಗಾಬರಿಗೂ ಒಳಗಾದರು.

ಜನರನ್ನು ನಿಯಂತ್ರಿಸುವುದಕ್ಕೆ ತಾತ್ಕಾಲಿಕವಾಗಿ ಕಬ್ಬಿಣದ ಮೂರು ಹಂತದ ತಡೆಬೇಲಿಯನ್ನಷ್ಟೇ ನಿರ್ಮಿಸಲಾಗಿತ್ತು. ಮೋದಿ ಜನರತ್ತ ಆಗಮಿಸುತ್ತಿದ್ದಂತೆ ಜನಸ್ತೋಮ ಕೂಡ ರೋಮಾಂಚನಕ್ಕೆ ಒಳಗಾಗಿ ಭಾವಪರವಶರಾದರು. ಭಾರೀ ಸಂಖ್ಯೆಯಲ್ಲಿದ್ದ ಜನರು ಏಕಾಏಕಿ ಹಿಂಭಾಗದಿಂದ ಮುನ್ನುಗ್ಗಿ ಮೋದಿಯವರನ್ನು ಹತ್ತಿರದಿಂದ ಕಾಣುವುದಕ್ಕೆ ನೂಕುನುಗ್ಗಲು ಆರಂಭಿಸಿದರು. ಆಗ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಬಹುದೊಡ್ಡ ಸವಾಲಾಯಿತು. ಪ್ರಧಾನಿ ಮೋದಿ ಜನಸಮೂಹದ ಅಷ್ಟು ಸನಿಹಕ್ಕೆ ತೆರಳಿ ಹಸ್ತಲಾಘವ ನಡೆಸುತ್ತಾರೆ ಎಂಬುದನ್ನು ಪೊಲೀಸರಾಗಲಿ ಎಸ್‌ಪಿಜಿ ಭದ್ರತಾ ಸಿಬಂದಿಯಾಗಲಿ ಊಹಿಸಿಯೇ ಇರಲಿಲ್ಲ. ಒಂದೆಡೆ ಜನರ ಮುಗಿಲು ಮುಟ್ಟಿದ ಹರ್ಷ, ಇನ್ನೊಂದೆಡೆ ಪ್ರಧಾನಿ ಮೋದಿ ಅನಿರೀಕ್ಷಿತವಾಗಿ ಜನರ ಅತೀ ಸನಿಹಕ್ಕೆ ತೆರಳಿದ್ದು – ಭದ್ರತೆಗೆ ಸವಾಲೆನಿಸುವ ಈ ಸನ್ನಿವೇಶವನ್ನು ಭದ್ರತಾ ಸಿಬಂದಿ ಸಮಯೋಚಿತವಾಗಿ, ಯಶಸ್ವಿಯಾಗಿ ನಿರ್ವಹಿಸಿದ್ದು  ಗಮನಾರ್ಹ.

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.