Moodabidri ಆಳ್ವಾಸ್‌ ವಿರಾಸತ್‌-2023 ಪ್ರಶಸ್ತಿ ಪ್ರದಾನ

ಮೈಸೂರು ಮಂಜುನಾಥ್‌, ಪ್ರವೀಣ್‌ ಗೋಡ್ಖಿಂಡಿ, ವಿಜಯಪ್ರಕಾಶ್‌ ಅವರಿಗೆ

Team Udayavani, Dec 17, 2023, 11:32 PM IST

Moodabidri ಆಳ್ವಾಸ್‌ ವಿರಾಸತ್‌-2023 ಪ್ರಶಸ್ತಿ ಪ್ರದಾನ

ಮೂಡುಬಿದಿರೆ: ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಾಲ್ಕು ದಿನಗಳ ಪರ್ಯಂತ ನಡೆದ ಆಳ್ವಾಸ್‌ ವಿರಾಸತ್‌-2023ರ ರವಿವಾರ ರಾತ್ರಿ ಖ್ಯಾತ ವಯೊಲಿನ್‌ ವಾದಕ ಡಾ| ಮೈಸೂರು ಮಂಜುನಾಥ್‌, ಬಾನ್ಸುರಿ ವಾದಕ ಡಾ| ಪ್ರವೀಣ್‌ ಗೋಡ್ಖಿಂಡಿ ಹಾಗೂ ಗಾಯಕ, ಸಂಗೀತ ನಿರ್ದೇಶಕ ವಿಜಯ ಪ್ರಕಾಶ್‌ ಇವರಿಗೆ “ಅಳ್ವಾಸ್‌ ವಿರಾಸತ್‌-2023′ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಆಳ್ವಾಸ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಕಲಾವಿದರಿಗೆ ಶಾಲು ಹೊದೆಸಿ, ಹಾರ ತೊಡಿಸಿ, ಫಲಕಾಣಿಕೆ, ಪ್ರಶಸ್ತಿ ಫಲಕ ಸಹಿತ 1 ಲಕ್ಷ ರೂ. ನಗದು ಪುರಸ್ಕಾರ ಸಹಿತ ಗೌರವಿಸಿದರು. ಆಳ್ವಾಸ್‌ ವಿದ್ಯಾರ್ಥಿ ಗಳ ಹಾಡಿನೊಂದಿಗೆ ಕನ್ನಿಕೆಯರು ಕಲಾವಿದರಿಗೆ ಆರತಿ ಬೆಳಗಿ ತಿಲಕವಿರಿಸಿ, ಹೂಮಳೆ ಸುರಿಸಿದರು.

ಸ್ವರ್ಗವೇ ಇಳೆಗಿಳಿದು ಬಂದಿದೆ
ಡಾ| ಮೈಸೂರು ಮಂಜುನಾಥ್‌ ಸಮ್ಮಾನಕ್ಕೆ ಸ್ಪಂದಿಸಿ, “ದೇವೇಂದ್ರನೂ ನಾಚಬೇಕು, ಸ್ವರ್ಗವೇ ಇಳೆಗಿಳಿದು ಬಂದಿದೆ ಇಲ್ಲಿ. ಸಾಧಾರಣ ಹಳ್ಳಿ ಯೊಂದು ವಿಶ್ವದ ಭೂಪಟದಲ್ಲಿ ಶಿಕ್ಷಣ, ಕಲೆ, ಸಂಸ್ಕೃತಿ, ಕ್ರೀಡೆ ಸಹಿತ ಹತ್ತಾರು ವಿಷಯಗಳಲ್ಲಿ ಗುರುತಿಸ ಲ್ಪಟ್ಟಿರುವ ಹಿಂದೆ ಡಾ| ಆಳ್ವ ಎಂಬ ಕನಸುಗಾರ ಇದ್ದಾರೆ. ಅವರದು ಬರೇ ಹಗಲುಕನಸಲ್ಲ, ಅದನ್ನು ನನಸಾಗಿಸುವ ಪರಿಶ್ರಮವಿದೆ. ಕ‌ಲಾಕ್ಷೇತ್ರದ ದಿಗ್ಗಜರೆಲ್ಲ ಬಂದು ಕಾರ್ಯಕ್ರಮ ನೀಡಿರುವ ವಿರಾಸತ್‌ನಲ್ಲಿ ಒಮ್ಮೆ ತನಗೂ ಅವಕಾಶ ಲಭಿಸೀತೇ ಎಂಬ ಮನದಾಸೆ ಹೆಚ್ಚಿನ ಕಲಾವಿದರಿಗಿದೆ ಎಂದರೆ ಅದು ಅತಿಶಯವಾಗದು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಸಂಸದ ನಳಿನ್‌ ಕುಮಾರ್‌ ಕಟೀಲು “ಭಾರತೀಯ ಸಂಸ್ಕೃತಿಯ ಚೆಲುವು, ಸೊಬಗಿನ ಅನಾವರಣದೊಂದಿಗೆ ಮನಸ್ಸುಗಳನ್ನರಳಿಸುವ ಆಳ್ವಾಸ್‌ ವಿರಾಸತ್‌ ನಮಗೆಲ್ಲ ಹೆಮ್ಮೆ ಎಂದರು.

ವಿರಾಸತ್‌ ಮೂಲಕ ಸಂದೇಶ
ವಿರಾಸತ್‌ ಸಾಗಿ ಬಂದ ದಾರಿ ಯನ್ನು ಅವಲೋಕಿಸಿದ ಡಾ| ಆಳ್ವರು, “ಇದಾವುದೂ ಬರೇ ಪ್ರದರ್ಶನ ಕಲೆಗಳಿಗಾಗಿ ಮೀಸ ಲಲ್ಲ, ಮನೋರಂಜನೆಗಲ್ಲ, ಪ್ರತಿ ಯೊಂದು ವಿರಾಸತ್‌ ಮೂಲಕ ಹಲವು ಸಂದೇಶ ಗಳು ನಾಡಿಗೆ ರವಾನೆಯಾಗಬೇಕು; ಸೌಂದರ್ಯ ಪ್ರಜ್ಞೆಯ ಪ್ರೇಕ್ಷಕರು ರೂಪುಗೊಳ್ಳು ವಂತಾಗಬೇಕು, ಪ್ರೇಕ್ಷಕರು ಮಾನಸಿಕವಾಗಿ ಭ್ರಷ್ಟರಾಗ ಬಾರದು ಎಂಬುದೇ ಇಲ್ಲಿನ ಉದ್ದೇಶ’ ಎಂದರಲ್ಲದೆ, ಈ ಉತ್ಸವವನ್ನು ದೇಶಕ್ಕಾಗಿ ಪ್ರಾಣತ್ಯಾಗಗೈದ ವೀರಯೋಧ ಕ್ಯಾ| ಎಂ.ವಿ. ಪ್ರಾಂಜಲ್‌ ಅವರಿಗೆ ಸಮರ್ಪಿಸುವುದಾಗಿ ಪ್ರಕಟಿಸಿದರು.

ಮೂಡುಬಿದಿರೆ ಶ್ರೀ ಜೈನ ಮಠಾಧೀಶ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾ ರ್ಯವರ್ಯ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್‌, ಮಣಿಪುರದ ಮಾಜಿ ಸಂಸದ ನಾರಾಸಿಂಗ್‌, ಸ್ಕೌಟ್ಸ್‌ ಗೈಡ್ಸ್‌ ರಾಜ್ಯಮುಖ್ಯ ಕಮಿಶನರ್‌ ಪಿ.ಜಿ. ಆರ್‌. ಸಿಂಧಿಯಾ, ಮಾಜಿ ಸಚಿವ ಕೆ. ಅಭಯಚಂದ್ರ, ಮಂಗಳೂರು ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ. ಪುರಾಣಿಕ್‌, ಉದ್ಯಮಿ ಕೆ. ಶ್ರೀಪತಿ ಭಟ್‌ ಉಪಸ್ಥಿತರಿದ್ದರು.

ಉಪನ್ಯಾಸಕ ಕೆ. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

ಟಾಪ್ ನ್ಯೂಸ್

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

8-uv-fusion

UV Fusion: ಅತಿಯಾದ ಒಲವು ಒಳಿತಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.