ಮೂಲ್ಕಿ: ಬಂಧಿತರಿಂದ 5.30ಲ.ರೂ.ಸೊತ್ತು ವಶ
Team Udayavani, Mar 11, 2018, 6:20 AM IST
ಮೂಲ್ಕಿ: ಜುಲೈ 2017ರಲ್ಲಿ ನಡೆದಿದ್ದ ಗುತ್ತಗಾಡಿನ ಮತ್ತು ಮೂಲ್ಕಿ ಸಮೀಪದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇಗುಲಗಳಿಂದ ಬೆಳ್ಳಿಯ ಸೊತ್ತುಗಳನ್ನು ಕಳವುಗೈದ ಆರೋಪದಲ್ಲಿ ಮೂಲ್ಕಿ ಪೊಲೀಸರು ಬಂಧಿಸಿರುವ ಅಂತರ್ ಜಿಲ್ಲಾ ಕುಖ್ಯಾತ ಕಳ್ಳರಾದ ತುಮಕೂರು ಜಿಲ್ಲೆ ಸೊರೆಕುಂಟೆಯ ನವೀನ ಯಾನೆ ಅಣ್ಣಾಬಾಂಡ್ ಯಾನೆ ಬೆಂಕಿ ನವೀನ (24) ಮತ್ತು ಬೆಂಗಳೂರು ಗೇರು ಪಾಳ್ಯದ ವಿಕಾಸ್ ಸ. ಶಾಲೆ ಬಳಿಯ ನಿವಾಸಿ ವೆಂಕಟೇಶ ಯಾನೆ ಡಾಬರ್(37) ಅವರಿಂದ 5.30 ಲಕ್ಷ ರೂ. ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುತ್ತಕಾಡು ದೇಗುಲದ 1.5 ಲ.ರೂ. ಮೌಲ್ಯದ ಬೆಳ್ಳಿಯ ಪ್ರಭಾವಳಿ, ಕೊಲ್ಲೂರು ಮೂಕಾಂಬಿಕಾ ದೇಗುಲದ 1.5 ಲ.ರೂ. ಮೌಲ್ಯದ ಬೆಳ್ಳಿಯ ಪ್ರಭಾವಳಿ, ಗುತ್ತಕಾಡು ದೇವಸ್ಥಾನದ 28, 000 ರೂ. ಮೌಲ್ಯದ ಒಂದು ಪವನು ತೂಕದ ಮಾಂಗಲ್ಯ ಸರ, 1. 30 ಲ.ರೂ. ಮೌಲ್ಯದ ಬಜಾಜ್ ಮೋಟಾರ್ ಸೈಕಲ್, 60,000 ರೂ. ಮೌಲ್ಯದ ಇನ್ನೊಂದು ಬಜಾಜ್ ದ್ವಿಚಕ್ರ ವಾಹನ, 14,000 ರೂ. ಮೌಲ್ಯದ 4 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪತ್ತೆ ಕಾರ್ಯದಲ್ಲಿ ಮೂಲ್ಕಿ ಠಾಣಾ ನಿರೀಕ್ಷಕ ಅನಂತಪದ್ಮನಾಭ, ಪಿಎಸ್ಐ ಶೀತಲ್ ಅಲಗೂರ್, ಎಎಸ್ಐ ಚಂದ್ರಶೇಖರ್, ಸಿಬಂದಿ ವರ್ಗದ ಧರ್ಮೇಂದ್ರ, ಅಣ್ಣಪ್ಪ, ಮಹಮ್ಮದ್ ಹುಸೇನ್, ಸಿದ್ದು ಬಾಬ ನಗರ, ಸುರೇಶ್, ಬಸವರಾಜ, ಮನೋಜ್ ಕುಮಾರ್ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!
Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !
Mangaluru University; ಲೋಕ ಸಮರದ ನೆಪ; ಘಟಿಕೋತ್ಸವ ಆಗದೆ ವಿ.ವಿ. ವಿದ್ಯಾರ್ಥಿಗಳು ಕಂಗಾಲು!
Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ
Mangaluru ಫ್ಯಾಕ್ಟರಿಯ ಎಳನೀರಿನಲ್ಲಿ ಅಪಾಯಕಾರಿ ಅಂಶವಿಲ್ಲ!