ರಾಜಕೀಯ ಲಾಭ ಪಡೆಯಲು ವಿಪಕ್ಷ ಯತ್ನ: ಖಾದರ್
Team Udayavani, Feb 10, 2019, 12:30 AM IST
ಮಂಗಳೂರು: ಬಜೆಟ್ ಮಂಡನೆ ವೇಳೆ ಗೊಂದಲ ಉಂಟು ಮಾಡಿ ರಾಜಕೀಯ ಲಾಭ ಪಡೆಯಲು ವಿಪಕ್ಷ ನಾಯಕರು ಯತ್ನಿಸಿದ್ದಾರೆ ಎಂದು ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ಕರಾವಳಿಯ ಅಭಿವೃದ್ಧಿಗೆ ಉತ್ತಮ ಸ್ಪಂದನೆ ನೀಡಿದ್ದಾರೆ. ಜಿಲ್ಲೆಗೆ ಕೊಡುಗೆ ಸಾಲದು ಎಂದೆನಿಸಿದರೆ ಜಿಲ್ಲೆಯ ಶಾಸಕರು ಸೋಮವಾರದ ಚರ್ಚೆ ಯಲ್ಲಿ ಭಾಗಿಯಾಗಿ ಬೇಡಿಕೆ ಸಲ್ಲಿಸ ಬೇಕು. ಪಾಲ್ಗೊಳ್ಳದಿದ್ದರೆ ಅದು ಜನರಿಗೆ ಬಗೆವ ದ್ರೋಹ ಎಂದರು.
ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ನಿರಾಧಾರವಾಗಿ ಮಾತನಾಡುವುದಿಲ್ಲ. ಇದರ ಬಗ್ಗೆ ತನಿಖೆಯಾದಾಗ ಸತ್ಯ ಹೊರಬರಲಿದೆ ಎಂದರು.