ಪೆಟ್ರೋಲ್, ಡೀಸೆಲ್ ದುಬಾರಿ: ವಾಹನ ಮಾಲಕರು ಕಂಗಾಲು
Team Udayavani, May 26, 2018, 5:00 AM IST
ಮಹಾನಗರ: ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಇದರಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೇ 18ರಂದು 76.26 ರೂ. ಇದ್ದ ಪೆಟ್ರೋಲ್ ಬೆಲೆ ಮೇ 25ಕ್ಕೆ 78.48 ರೂ. ಆಗಿದೆ. ಒಟ್ಟಾರೆ ಒಂದೇ ವಾರದಲ್ಲಿ 2.22 ರೂ. ಹೆಚ್ಚಳವಾದಂತಾಗಿದೆ. ಅದೇ ರೀತಿ ಮೇ 18 ರಂದು 67.64 ರೂ. ಇದ್ದ ಡೀಸೆಲ್ ಬೆಲೆ ಮೇ 25ಕ್ಕೆ 69.38 ರೂ. ಆಗಿದೆ. ಅಂದರೆ ಒಂದೇ ವಾರ 1.74 ರೂ. ಏರಿಕೆಯಾಗಿದೆ.
ಡೀಸೆಲ್ ಬಳಕೆ ಜಾಸ್ತಿ
ದ.ಕ. ಜಿಲ್ಲೆಯಲ್ಲಿ ಪ್ರತೀ ದಿನ ಪೆಟ್ರೋಲ್ ಗಿಂತ ಡೀಸೆಲ್ ಬಳಕೆಯೇ ಹೆಚ್ಚು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ನಿಂದ ಜಿಲ್ಲೆಯಲ್ಲಿ 62 ಸಾವಿರ ಕಿಲೋ ಲೀಟರ್ ಪೆಟ್ರೋಲ್ ಮತ್ತು 153 ಸಾವಿರ ಕಿಲೋ ಲೀಟರ್ ಡೀಸೆಲ್ ಪ್ರತೀ ದಿನ ಮಾರಾಟವಾಗುತ್ತದೆ. ಅದರಂತೆಯೇ ಇಂಡಿಯನ್ ಆಯಿಲ್ ಸಂಸ್ಥೆಯಿಂದ ಪ್ರತೀದಿನ ಜಿಲ್ಲೆಯಲ್ಲಿ 190 ಸಾವಿರ ಕಿಲೋ ಲೀಟರ್ ಪೆಟ್ರೋಲ್ ಮತ್ತು 550 ಸಾವಿರ ಕಿ.ಲೀ. ಡೀಸೆಲ್ ಪ್ರತೀ ದಿನ ಮಾರಾಟವಾಗುತ್ತದೆ.
ಜಿಲ್ಲೆಯಲ್ಲಿ ಪ್ರತೀದಿನ ಬಳಕೆ
– ಪೆಟ್ರೋಲ್: 252 ಸಾವಿರ ಕಿಲೋ ಲೀಟರ್
– ಡಿಸೇಲ್: 703 ಸಾವಿರ ಕಿಲೋ ಲೀಟರ್
ವಾಹನ ಬಳಕೆದಾರರಿಗೆ ಪರ್ಯಾಯ ವ್ಯವಸ್ಥೆ
– ಸಾರ್ವಜನಿಕ ವಾಹನಗಳನ್ನು ಜಾಸ್ತಿ ಬಳಸಿ
– ಹತ್ತಿರದ ಪ್ರದೇಶಕ್ಕೆ ತೆರಳಲು ಸೈಕಲ್ ರೈಡಿಂಗ್ ಉತ್ತಮ
– ವಾಹನಗಳ ಬಳಕೆಯಲ್ಲಿ ಮಿತಿ ಇರಲಿ
– ಟ್ರಾಫಿಕ್ ನಲ್ಲಿ ವಾಹನ ಬಂದ್ ಮಾಡಿ ಇಂಧನ ಉಳಿಸಿ
– ಕಡಿಮೆ ಅಂತರ ಕ್ರಮಿಸಲು ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತಮ
– ವಾಹನಗಳ ಇಂಜಿನ್ ಸುಸ್ಥಿತಿಯಲ್ಲಿಟ್ಟು ಮೈಲೇಜ್ ಹೆಚ್ಚಿಸಿಕೊಳ್ಳಿ
– ಓಲಾ, ಉಬರ್ ನಂತಹ ಶೇರಿಂಗ್ ವಾಹನಗಳನ್ನು ಬಳಸಿ
– ಒಂದೇ ಕಡೆ ಕಚೇರಿಗೆ ಹೋಗುವರು ಕಾರ್ ಪೂಲಿಂಗ್ ವ್ಯವಸ್ಥೆ ಪ್ರಾರಂಭಿಸಿ
80 ರೂ. ಸಾಧ್ಯತೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈಗಾಗಲೇ ಕೆಲವೊಂದು ನಗರಗಳಲ್ಲಿ ಪೆಟ್ರೋಲ್ ಬೆಲೆ 80 ರೂ. ತಲುಪಿದೆ. ಮುಂದಿನ ಕೆಲ ದಿನಗಳಲ್ಲಿ ಜಿಲ್ಲೆಯಲ್ಲಿಯೂ ಈ ದರ ತಲುಪಿದರೆ ಅಚ್ಚರಿಯಿಲ್ಲ. ಕಚ್ಚಾತೈಲ ಮತ್ತು ಡಾಲರ್ ಬೆಲೆ ಹೆಚ್ಚಳವಾಗುತ್ತಿರುವುದೇ ಇದಕ್ಕೆ ಕಾರಣ.
– ಸತೀಶ್ ಎನ್. ಕಾಮತ್, ಅಧ್ಯಕ್ಷ, ದ.ಕ. ಉಡುಪಿ ಪೆಟ್ರೋಲ್ ಡೀಸೆಲ್ ಅಸೋಸಿಯೇಶನ್
ಸವಾರರಿಗೆ ಪೆಟ್ಟು
ಇಂದು ಇದ್ದ ಪೆಟ್ರೋಲ್, ಡೀಸೆಲ್ ಬೆಲೆ ನಾಳೆಯಿಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನೇರ ಪರಿಣಾಮ ವಾಹನ ಸವಾರರ ಮೇಲೆ ಆಗುತ್ತಿದ್ದು, ವಾಹನ ಬಳಕೆ ಪ್ರಮಾಣವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
– ಕಾರ್ತಿಕ್ ಕುಮಾರ್, ಉದ್ಯೋಗಿ
— ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…