ಪೂರ್ಣಗೊಂಡಿಲ್ಲದ ಚರಂಡಿ ನಿರ್ಮಾಣ ಕಾಮಗಾರಿ
Team Udayavani, May 26, 2018, 4:15 AM IST
ಬಜಪೆ : ಮಳೆಗಾಲ ಸಮೀಪಿಸುವಾಗ ಸಮಸ್ಯೆಗಳು ನೆನಪಾಗುತ್ತವೆ. ಬಜಪೆ ಗ್ರಾಮ ಪಂಚಾಯತ್ ಇಂತಹ ಪರಿಸ್ಥಿತಿಯಲ್ಲಿ ಮಳೆಗಾಲ ಹಾಗೂ ಮನೆಮನೆ ತ್ಯಾಜ್ಯ ನೀರು ಯಾರಿಗೂ ಸಮಸ್ಯೆ ಎದುರಾಗದೇ ಹರಿದಾಡುವಂತೆ ಮಾಡಲು ಪರಿಹಾರ ಕಂಡುಕೊಳ್ಳಬೇಕಾಗಿದೆ. ಬಜಪೆ ಪೇಟೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆದು ಒಂದು ವರ್ಷಗಳಾಯಿತು. ಅದು ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಜನಸಾಮಾನ್ಯರಿಗೆ, ಪಾದ ಚಾರಿಗಳಿಗೆ ಇಲ್ಲಿ ನಡೆದುಕೊಂಡು ಹೋಗಲು ತೊಂದರೆ ಹಾಗೂ ಅಪಾಯ ಎದುರಾಗಿದೆ. ರಾತ್ರಿ ವೇಳೆಯಲ್ಲಿ ತೆರಿದಿಟ್ಟ ಚರಂಡಿಯಲ್ಲಿ ಅಯತಪ್ಪಿ ಬಿದ್ದವರು ಅದೇಷ್ಟು ಮಂದಿ ಗಾಯಗೊಂಡಿದ್ದಾರೆ.
ತುಂಬಿಕೊಂಡಿದೆ ಪ್ಲಾಸ್ಟಿಕ್ ತ್ಯಾಜ್ಯ
ಚರಂಡಿಯಲ್ಲಿ ಈಗ ದಿನನಿತ್ಯ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಳ್ಳುತ್ತಿದೆ. ಅದರ ಜತೆ ಬೇರೆ ತ್ಯಾಜ್ಯಗಳು ಸೇರಿಕೊಂಡು ಕಸದ ತೊಟ್ಟಿಯಾಗಿ ಬಿಟ್ಟಿದೆ. ಕಸ ನೋಡಿದಾಗ ಅದಕ್ಕೆ ಬಿಸಾಡುವ ಜಾಯಾಮಾನ ಇಲ್ಲಿ ಬೆಳೆದಿದೆ. ಈ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ರಾತ್ರಿವೇಳೆಯಲ್ಲಿ ಕೆಲವರು ಬೆಂಕಿಕೊಡುತ್ತಿದ್ದಾರೆ. ಇದರಿಂದ ಪೇಟೆಯಲ್ಲಿ ಹೊಗೆಗಳು ತುಂಬಿಕೊಳ್ಳುತ್ತಿವೆ.
ಪ್ಲಾಸ್ಟಿಕ್ ತ್ಯಾಜ್ಯ ತೊಟ್ಟಿಲಗುರಿ ಕೃಷಿಪ್ರದೇಶಕ್ಕೆ
ಮಳೆ ಬಂದರೆ ಈ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳು ನೀರಿನೊಂದಿಗೆ ಹರಿದಾಡಿ ತಗ್ಗು ಪ್ರದೇಶದಲ್ಲಿರುವ ತೊಟ್ಟಿಲಗುರಿ ಕೃಷಿ ಪ್ರದೇಶವನ್ನು ಅವೃತಗೊಳಿಸುತ್ತದೆ. ಈ ಬಾರಿ ಈ ಚರಂಡಿಯಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯ ಅಲ್ಲಿನ ಕೃಷಿಕರಿಗೆ ಹೆಚ್ಚು ಬಾಧಿಸಲಿದೆ. ಚರಂಡಿಯ ನೀರು ತುಂಬಿ ಅಲ್ಲಿಯ ಕೃಷಿಗೆ ತೊಂದರೆಯಾಗುವ ಬಗ್ಗೆ ಕೃಷಿಕರು ಗ್ರಾಮ ಪಂಚಾಯತ್ಗೆ ಹಲವಾರು ಬಾರಿ ದೂರು ನೀಡಿದ್ದಾರೆ.
ಹೊಸ ಯೋಜನೆ
ಈ ಬಗ್ಗೆ ಪಂಚಾಯತ್ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗೆ ತಿಳಿಸಿದರೂ ಇಷ್ಟರ ತನಕ ಯಾವುದೇ ಪ್ರಯೋಜನವಾಗಿಲ್ಲ. ಕೆಲವೆಡೆ ತೆರಿದಿಟ್ಟ ಚರಂಡಿಯನ್ನು ಕಲ್ಲು ಹಾಸಿ ಮುಚ್ಚಬೇಕು ಎಂದು ಎಂಜಿನಿಯರ್ ಅವರಲ್ಲಿ ಮನವಿ ಮಾಡಲಾಗಿದೆ. ಮಳೆಗಾಲದ ನೀರು ಹಾಗೂ ಚರಂಡಿಯ ತ್ಯಾಜ್ಯ ನೀರು ಹರಿದಾಡಲು ಹೊಸ ಯೋಜನೆಯನ್ನು ಪಂಚಾಯತ್ ಹಾಕಿಕೊಂಡಿದೆ.
– ಸಾಯೀಶ್ ಚೌಟ, ಪಿಡಿಒ
— ಸುಬ್ರಾಯ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ